ಕೇಂದ್ರ ಮುಂಗಡ ಪತ್ರ ಶ್ರೀಸಾಮಾನ್ಯನಿಗೆ ನಿರಾಶಾದಾಯಕ: ಜಂಬಿಗಿ ರಾಧೇಶ್

ದಾವಣಗೆರೆ: 2022-23ನೇ ಸಾಲಿನ ಮುಂಗಡ ಪತ್ರ ಮಂಡಿಸಿದ್ದು ಶ್ರೀ ಸಾಮಾನ್ಯನಿಗೆ ನಿರಾಶಾದಾಯಕವಾಗಿದ್ದು, ಆದಾಯ ತೆರಿಗೆಯಲ್ಲಿ ಯಾವುದೇ ರೀತಿಯ ಮಾರ್ಪಾಡುಗಳನ್ನು ಮಾಡದೆ ಇರುವುದು ಮದ್ಯಮ ವರ್ಗದ ಮತ್ತು ಸಂಬಳದಾರರಿಗೆ ಅನಾನುಕೂಲವಾಗಿದೆ ಎಂದು ದಾವಣಗೆರೆ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಜಂಬಗಿ ರಾಧೇಶ್ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಕರ್ನಾಟಕ ರಾಜ್ಯದ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಮಾತ್ರ ಸಹಾಯ ಮಾಡಿದ್ದು ಅದೇ ರೀತಿ ಉತ್ತರ ಕರ್ನಾಟಕದ ಧಾರವಾಡದಲ್ಲಿರುವ ಆಸ್ಪತ್ರೆಗೂ ಸಹಾಯ ಮಾಡಬಹುದಾಗಿತ್ತು. ರಕ್ಷಣ ಇಲಾಖೆ ಮತ್ತು 5ಜಿ ತರಂಗಾಂತರದ ಬಿಡಿ ಭಾಗಗಳನ್ನು ದೇಶದಲ್ಲಿ ಶೇ69ರಷ್ಟು ಉತ್ಪಾದನೆ ಕೊಟ್ಟಿರುವುದು ಮೇಕ್-ಇನ್-ಇಂಡಿಯಾದ ಶುಭಸೂಚನೆ ಮತ್ತು ನಿರುದ್ಯೋಗಿಗಳಿಗೆ ಆಶಾದಾಯಕ. ಮತ್ತು ಡಿಜಿಟಲೈಸೇಶನ್ ಬ್ಯಾಂಕಿಂಗ್ ಸೆಕ್ಟರ್ ತಂದಿರುವುದು ಶ್ರೀಸಾಮಾನ್ಯನಿಗೆ ಇದರ ಬಗ್ಗೆ ಹೆಚ್ಚಿನ ರೀತಿಯಲ್ಲಿ ತಿಳುವಳಿಕೆ ಮೂಡಿಸುವುದು ಅತ್ಯಗತ್ಯವಾಗಿರುತ್ತದೆ.
ಜಿ.ಎಸ್.ಟಿ ಯಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ. ಕಳ್ಳತನದಿಂದ ನಡೆಯುತ್ತಿದ್ದ ಕ್ರಿಪ್ಟೊ ಕರ್ರೆನ್ಸಿಯನ್ನು ತಡೆಗಟ್ಟಲು ಅರ್.ಬಿ.ಐ ನಿಂದ ಡಿಜಿಟಲ್ ಕರ್ರೆನ್ಸಿ ಬಿಡುಗಡೆ ಮಾಡುತ್ತಿರುವುದು ಸೂಕ್ತವಾಗಿದೆ ಎಂದಿದ್ದಾರೆ.