ಕಾಲ್ ಮಾಡಲು ಕೊಟ್ಟು ಮೊಬೈಲ್ ಕಳೆದುಕೊಂಡ ಬೇಕರಿ ಕಾರ್ಮಿಕ

ದಾವಣಗೆರೆ: ಒಂದು ಕಾಲ್ ಮಾಡ್ಬೇಕು ಅಂತಾ ಮೊಬೈಲ್ ಪಡೆದುಕೊಂಡ ವ್ಯಕ್ತಿ ಅದೇ ಮೊಬೈಲ್ ಸಮೇತ ಎಸ್ಕೇಪ್ ಆದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆಯ ಸರ್ ಎಂವಿ ಕಾಲೇಜಿನ ಸಮೀಪದ ಶ್ರೀಗುರು ಕೊಟ್ಟೂರೇಶ್ವರ ಬೇಕರಿಯಲ್ಲಿ ನಿನ್ನೆ ಈ ಘಟನೆ ನಡೆದಿದಿದ್ದು ಸಿಸಿಟಿವಿಯಲ್ಲಿ ಆ ಯುವಕನ ಚಿತ್ರ ಸೆರೆಯಾಗಿದೆ. ಎಂದಿನಂತೆ ಬೆಳಗ್ಗೆ ಬೇಕರಿಗೆ ಗ್ರಾಹಕನ ಸೋಗಲ್ಲಿ ಬಂದಿದ್ದ ಖದೀಮ ಮೊಬೈಲ್ ಬ್ಯಾಟರಿ ಲೋ ಆಗಿದೆ, ಕಾಲ್ ಮಾಡಲು ಮೊಬೈಲ್ ಕೇಳಿದ್ದ,
ಬೇಕರಿಯಲ್ಲಿ ಕೆಲಸ ಮಾಡುವ ಕಾರ್ಮಿಕ್ ಕಿರಣ್ ತನ್ನ ಮೊಬೈಲ್ ಕೊಟ್ಟಿದ್ದ, ಮೊಬೈಲ್ನಲ್ಲಿ ಮಾತನಾಡುತ್ತಲೇ ಮೊಬೈಲ್ ಸಮೇತ ಪರಾರಿಯಾಗಿದ್ದಾನೆ.
ಆಯ್ಯೋ ಪಾಪ ಅಂತಾ ಮೊಬೈಲ್ ಕೊಟ್ಟಿದ್ದೇ ತಪ್ಪಾಯ್ತು ಅಂತಾ ಇದೀಗ ಪೇಚಿಗೆ ಸಿಲುಕಿದ ಕಿರಣ್ ಕಾಲ್ ಮಾಡಲು ಕೊಟ್ಟು ಮೊಬೈಲ್ ಕಳೆದುಕೊಂಡಿದ್ದಾನೆ. ಈ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.