2022 ರ ಬಜೆಟ್, ಸ್ವಲ್ಪ ಕಹಿ , ಸ್ವಲ್ಪ ಸಿಹಿ – ರೋಹಿತ್ ಎಸ್ ಜೈನ ಪ್ರಧಾನ ಕಾರ್ಯದರ್ಶಿ

ದಾವಣಗೆರೆ: ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಈ ಬಾರಿ ತೆರಿಗೆ ಪದ್ಧತಿಯಲ್ಲಿ ಕೆಲ ವಿನಾಯ್ತಿ ಸಿಗಬಹುದು ಎಂಬ ನಿರೀಕ್ಷೆಗಳು ವ್ಯಕ್ತವಾಗಿದ್ದವು. ಆದರೆ ವಿತ್ತ ಸಚಿವರ ಇಂದಿನ ಭಾಷಣದಲ್ಲಿ ಇಂಥ ಯಾವುದೇ ಪ್ರಸ್ತಾವಗಳು ಮಂಡನೆಯಾಗಿಲ್ಲ. ಆದಾಯ ತೆರಿಗೆಗೆ ಈ ಬಾರಿ ಯಾವುದೇ ಹೊಸ ಸೆಸ್ ಅಥವಾ ಸರ್ಚಾರ್ಜ್ ಸೇರಿಲ್ಲ ಎನ್ನುವುದು ಸಮಾಧಾನದ ವಿಷಯ.
ಭಾರತದ ಸಂಬಳದ ವರ್ಗ ಮತ್ತು ಮಧ್ಯಮ ವರ್ಗವು ಸಾಂಕ್ರಾಮಿಕ ಸಮಯದಲ್ಲಿ ಪರಿಹಾರಕ್ಕಾಗಿ ಆಶಿಸುತ್ತಿದ್ದರು,ಸ್ಲ್ಯಾಬ್ಗಳಲ್ಲಿ ಯಾವುದೇ ಹೆಚ್ಚಳವಿಲ್ಲ, ಅನುಸರಣೆ ಹೊರೆಯಲ್ಲಿ ಇಳಿಕೆಯಿಲ್ಲ, 80C (ಉಳಿತಾಯ) ಅಡಿಯಲ್ಲಿ ಯಾವುದೇ ಹೆಚ್ಚಳ ವಿನಾಯಿತಿಗಳಿಲ್ಲ.
ಕೇಂದ್ರ ಹಣಕಾಸು ಸಚಿವರು ಕರ್ನಾಟಕದ ಬಾಕಿ ಉಳಿದಿರುವ ರೈಲ್ವೆ ಡಬ್ಲಿಂಗ್ ಮತ್ತು ವಿದ್ಯುದ್ದೀಕರಣ ಯೋಜನೆಗಳನ್ನು ವೇಗಗೊಳಿಸಲು & ಶಿವಮೊಗ್ಗ-ಹರಿಹರ ಮತ್ತು ಗದಗ ಹರಪನಹಳ್ಳಿಯಂತಹ , ದಾವಣಗೆರೆ ಜಿಲ್ಲೆಯಲ್ಲಿ ಇನ್ನೂ ಕೆಲವು ಯೋಜನೆಗಳು ಹೆಚ್ಚಿನ ಹಣವನ್ನು ಮಂಜೂರು ಮಾಡಿದ್ದರೆ ನಮಗೆ ಹೆಚ್ಚು ಸಂತೋಷವಾಗುತ್ತಿತ್ತು.
ರೋಹಿತ್ ಎಸ್ ಜೈನ
ಪ್ರಧಾನ ಕಾರ್ಯದರ್ಶಿ ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘ ( ರೀ )
ದಾವಣಗೆರೆ