ಪಾಲಿಕೆ ಮುಂಭಾಗದ ರೈಲ್ವೆ ಕೆಳ ಸೇತುವೆ ಯಲ್ಲಿ ಮತ್ತೆ ನೀರು ನಿಲುಗಡೆ.

ದಾವಣಗೆರೆ: ದಾವಣಗೆರೆ ಹೃದಯ ಭಾಗದಲ್ಲಿರುವ ಮಹಾನಗರ ಪಾಲಿಕೆಯ ಮುಂಭಾಗದ ರೈಲ್ವೆ ಕೆಳ ಸೇತುವೆ ರಿಪೇರಿ ಕಾಮಗಾರಿ ಎಷ್ಟು ಸಾರಿ ಮಾಡಿದರೂ ಸಹ, ಸಮಸ್ಯೆ ಬಗೆಹರಿಯದೆ ನೀರು ನಿಲುಗಡೆಯಾಗುತ್ತಿದ್ದು ಪಾಲಿಕೆಯ ಹಣ ಅರ್ಥವಾಗುತ್ತದೆ ವಿನಹ ಸಮಸ್ಯೆಗೆ ಪರಿಹಾರ ದೊರೆಯುತ್ತಿಲ್ಲ.
ಪಾಲಿಕೆಗೆ ನೂತನವಾಗಿ ಮೇಯರ್ ಆಗುವ ಪ್ರತಿಯೊಬ್ಬರು ಅದರ ವೀಕ್ಷಣೆ ಮಾಡಿ ಇದಕ್ಕೆ ಶಾಶ್ವತ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿ, ಯೋಜನೆ ರೂಪಿಸಿ ಅದಕ್ಕೆ ಹಣ ಬಿಡುಗಡೆ ಮಾಡಿ, ಕಾಮಗಾರಿ ನಡೆಸಿ, ನಾವು ಎಲ್ಲಾ ಸರಿ ಮಾಡಿಬಿಟ್ಟೆವು ಎಂದು ಹೇಳಿಕೊಂಡು ದಿನ ಕಳೆಯುವಷ್ಟರಲ್ಲಿ ಮತ್ತದೇ ಸಮಸ್ಯೆ ರಾಜಕಾರಣಿಗಳನ್ನು ಅಧಿಕಾರಿಗಳನ್ನು ಕಾಡುತ್ತದೆ ಎಂದರೆ ತಪ್ಪಾಗಲಾರದು.
ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿಯೋ, ಕೆಳ ಸೇತುವೆ ಸಮಸ್ಯೆ ಅಷ್ಟು ಜಟಿಲವಾಗಿದೆಯೋ ಎಂದು ಸಾರ್ವಜನಿಕರಿಗೆ ಚಿಂತೆ ಕಾಡುತ್ತಿದ್ದು, ದಯಮಾಡಿ ಸಂಬಂಧಪಟ್ಟವರು ಈ ಸಮಸ್ಯೆಯ ಪರಿಹಾರಕ್ಕೆ ರಾಜ್ಯ ಮಟ್ಟದಲ್ಲಿ ಅಥವ ರಾಷ್ಟ್ರ ಮಟ್ಟದಲ್ಲಿ ತಂತ್ರಜ್ಞಾನರ ಚರ್ಚಿಸಿ ಸೂಕ್ತ ಯೋಜನೆ ನಿರ್ಮಿಸಿ, ಸಮಸ್ಯೆ ಬಗೆಹರಿಸುವ ಮೂಲಕ ನಗರದ ಜನತೆಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಲಿ ಎಂಬುದೇ ನಮ್ಮ ಬಯಕೆ.
ಕೆ.ಎಲ್.ಹರೀಶ್ ಬಸಾಪುರ.