ಹಿರಿಯ ಪತ್ರಕರ್ತ ವಾಗೀಶ್ ಕುಮಾರ್ ಕುಟುಂಬಕ್ಕೆ ಆರ್ಥಿಕ ಸಹಾಯ ಕೋರಿದ ಮಾಧ್ಯಮ ಸ್ನೇಹಿತರ ಕೂಟ: 5 ಲಕ್ಷ ಮಂಜೂರಾತಿಗೆ ಒಪ್ಪಿದ ಸಿಎಂ

ಬೆಂಗಳೂರು: ಇಂದು ಬೆಳಿಗ್ಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಇತ್ತೀಚೆಗೆ ನಿಧನರಾಗಿರುವ ಹಿರಿಯ ಪತ್ರಕರ್ತ ವಾಗೀಶ್ ಕುಮಾರ್ ಜಿ ಎ ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ಕೋರಿದ ಮಾಧ್ಯಮ ಸ್ನೇಹಿತರ ಕೂಟ (Ex ETV Group)..
ಈ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು
ಉದಾರ ಮನಸ್ಸಿನಿಂದ 5 ಲಕ್ಷ ರೂ ಗಳನ್ನು ಮಂಜೂರು ಮಾಡುವಂತೆ ಹಿರಿಯ ಅಧಿಕಾರಿಗಳಿಗೆ
ಸೂಚನೆ ನೀಡಿದರು.
ಅವರಿಗೆ ನಮ್ಮ ಸ್ನೇಹಿತರ ಕೂಟದಿಂದ ಹೃತ್ಪೂರ್ವಕ ಅಭಿನಂದನೆಗಳು….
ಇದೇ ವೇಳೆ, ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರ ಸಂಕಷ್ಟಗಳ ಕುರಿತು ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಮನವರಿಕೆ ಮಾಡಲಾಯಿತು..
ಮುಂದಿನ ರಾಜ್ಯ ಬಜೆಟ್ ನಲ್ಲಿ ಮಾಧ್ಯಮ ಕ್ಷೇತ್ರದ ಬೇಡಿಕೆಗಳ ಬಗ್ಗೆ ಸಹಾಯ ಮಾಡುವಂತೆ ಮನವಿ ಸಲ್ಲಿಸಲಾಯಿತು..
• ಪತ್ರಕತ೯ರ ಮಾಸಿಕ ನಿವೃತ್ತಿ ವೇತನ ₹ 10,000ದಿಂದ ₹ 20,000 ಕ್ಕೆ ಹೆಚ್ಚಿಸುವುದು ಮತ್ತು ನಿವೃತ್ತಿ ವೇತನ
ಅಜಿ೯ ಸಲ್ಲಿಕೆ ಸುಲಭವಾಗುವಂತೆ ನಿಬಂಧನೆಗಳನ್ನು ಸರಳಗೊಳಿಸುವುದು. ..
• ಆರೋಗ್ಯ ಯೋಜನೆ ಫಲಾನುಭವ ಇನ್ನೂ ಸರಿಯಾದ ರೀತಿಯಲ್ಲಿ ಎಲ್ಲ ಪತ್ರಕರ್ತರಿಗೆ ದೊರಕದಿರುವುದರ ಬಗ್ಗೆ ಗಮನ ಹರಿಸಿ ಮಾನ್ಯತೆ ಪಡೆದವರಿಗೆ ಮಾತ್ರವಲ್ಲದೆ ಎಲ್ಲ ಅಹ೯ರಿಗೂ ಆರೋಗ್ಯ ಕಾಡ್೯ ದೊರೆಯುವಂತೆ ಶಾಶ್ವತವಾದ ಸರಳ ಪ್ರಕ್ರಿಯೆ ಅನುಷ್ಠಾನಕ್ಕೆ ಕ್ರಮ ಜರುಗಿಸುವುದು…
• ಅಕಾಲಿಕವಾಗಿ ಮೃತರಾದ ಪತ್ರಕತ೯ರ ಕುಟುಂಬಗಳಿಗೆ ಅನುಕೂಲವಾಗುವಂತೆ ಶಾಶ್ವತ ಪರಿಹಾರ ನಿಧಿ ಸ್ಥಾಪನೆ. ಹಿಂದೆ ತಮ್ಮ ಪಕ್ಷದ ಸರ್ಕಾರ ಸ್ಥಾಪಿಸಿದ ಆವರ್ತ ನಿಧಿಯನ್ನು ₹ 5 ಕೋಟಿಯಿಂದ ₹ 10 ಕೋಟಿಗೆ ಹೆಚ್ಚಿಸುವಂತೆ ಮನವಿ.
• ಪತ್ರಕರ್ತರಿಗೆ ಬೆಂಗಳೂರಿನಲ್ಲಿ ಅಥವಾ ಅವರ ಸ್ವಂತ ಜಿಲ್ಲೆಗಳಲ್ಲಿ ಶಾಶ್ವತ ವಸತಿ ಯೋಜನೆ ಅನುಷ್ಠಾನಗೊಳಿಸುವುದು.
• ರೈತರ ಮಕ್ಕಳ ವಿದ್ಯಾನಿಧಿ ಮಾದರಿಯಲ್ಲಿ ಪತ್ರಕರ್ತರ ಮಕ್ಕಳಿಗೆ ವಿಧ್ಯಾರ್ಥಿ ವೇತನ.
• ರಾಜ್ಯದಲ್ಲಿ ಪತ್ರಕರ್ತರಿಗೆ ಕೊಡುವ ಮಾನ್ಯತೆ ಕಾರ್ಡಗಳ ಸಂಖ್ಯೆ ಹೆಚ್ಚಿಸುವುದು.
• ಪತ್ರಕರ್ತರಿಗೆ ಮೆಟ್ರೊ ರೈಲು ಮತ್ತು ಬಿಎಂಟಿಸಿ ಬಸ್ಸುಗಳಲ್ಲಿ ಪ್ರಯಾಣದರ ವಿನಾಯಿತಿ.
• ಹೆದ್ದಾರಿಗಳಲ್ಲಿ ಟೊಲ್ ಶುಲ್ಕ ವಿನಾಯಿತಿ.
ಈ ಮೇಲಿನ ಎಲ್ಲ ಬೇಡಿಕೆಗಳನ್ನು ತಮ್ಮ ಘನ ಸರ್ಕಾರದ ಮೂಲಕ ಶೀಘ್ರದಲ್ಲಿ ಅನುಷ್ಠಾನಗೊಳಿಸಿ ಸಮಗ್ರ ಪತ್ರಕರ್ತರ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಬೇಕೆಂದು ಮಾಧ್ಯಮ ಸ್ನೇಹಿತರ ಕೂಟ ಮಾನ್ಯ ಮುಖ್ಯಮಂತ್ರಿ ಗಳಲ್ಲಿ ಮನವಿ ಮಾಡಿಕೊಳ್ಳಲಾಯಿತು..
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಶ್ರೀ ಬಿ ವಿ ಶಿವಶಂಕರ್, ಶ್ರೀ ಬದ್ರುದಿನ್ ಮಾಣಿ, ಶ್ರೀ ಸುರೇಶ್ ಎಮ್ ಆರ್ ಸಂಪಾದಕರು, ದಿಗ್ವಿಜಯ ಕನ್ನಡ ಟಿವಿ, ಶ್ರೀ ಜಯಪ್ರಕಾಶ್ ಶೆಟ್ಟಿ ಹಿರಿಯ ಪತ್ರಕರ್ತರು, ಸುವರ್ಣ ಟಿವಿ, ಶ್ರೀ ಶಿವಾನಂದ ತಗಡೂರು, ರಾಜ್ಯಾಧ್ಯಕ್ಷ ರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ,ಶ್ರೀ ಆನಂದ ಬೈದನಮನೆ, ಹಮೀದ್ ಪಾಳ್ಯ ಉಪಸ್ಥಿತರಿದ್ದರು.
ಇಂದು ಬಂದು ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡು ಸಂತ್ರಸ್ತ ವಾಗೀಶ್ ರವರ ಕುಟುಂಬಕ್ಕೆ ನೆರವು ಒದಗಿಸಲು ಸಹಕರಿಸಿದ ಎಲ್ಲ ಹಿರಿಯ ಸ್ನೇಹಿತರಿಗೂ ತುಂಬು ಹೃದಯದ ಧನ್ಯವಾದಗಳು…,
ಶ್ರೀ ಸಿದ್ದೇಶ ಕುಮಾರ್ ಮತ್ತು ಎಸ್ ಕೆ ನಾಗರಾಜ್.