ದಾವಣಗೆರೆ ಜಿಲ್ಲೆಯ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟದಿಂದ ಹರಿಹರದಲ್ಲಿ ಸಭೆ

ದಾವಣಗೆರೆ: ದಾವಣಗೆರೆ ಜಿಲ್ಲೆಯ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟದ ಸಭೆಯನ್ನು ಇಂದು ಹರಿಹರದ ಒಂದುಗೂಡು ಸೇವಾ ಸಂಸ್ಥೆಯಲ್ಲಿ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾದ ಡಾಕ್ಟರ್ ಮೃತ್ಯುಂಜಯ ಹಿರೇಮಠ ಅಶ್ವಿನಿ ಮೆಡಿಕಲ್ ಕಾಲೇಜ್ ದಾವಣಗೆರೆ ಇವರು ಮಾತನಾಡಿ ಸಂಸ್ಥೆಗಳು ಸಮಾಜಸೇವೆಯಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಜೊತೆಗೆ ಸಂಸ್ಥೆಗಳು ವರ್ಧನೆಗಾಗಿ ಒಕ್ಕೂಟ ಬೇಕಾಗಿದೆ ಎಂದು ಹೇಳಿದರು. ಕಾರ್ಯದರ್ಶಿಗಳಾದ ಸುರೇಶ್ ಕುಮಾರ್ ಸಂಕಲ್ಪ ಸಂಸ್ಥೆ ರಾಜ್ಯ ಸಮಿತಿಯ ಸದಸ್ಯರಾದ ಶ್ರೀಮತಿ ಅನಿತಾ ಸಾಕ್ಷಿ ಜಿಲ್ಲಾ ಖಜಾಂಚಿ ಆದ ರವಿಕುಮಾರ ಹಾಗೂ ದಾವಣಗೆರೆ ಜಿಲ್ಲೆಯ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು
ಶಾಂಭವಿ ಸಂಸ್ಥೆಯ ಪ್ರವೀಣ್ ವಂದನಾರ್ಪಣೆ ಸಲ್ಲಿಸಿದರು