ಮಾ 19 ರಂದು ಕೊಡದಗುಡ್ಡ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ

IMG-20220205-WA0030

ದಾವಣಗೆರೆ: ದಿನಾಂಕ 19-03-2022 ನೇ ಶನಿವಾರ ಸಾಯಂಕಾಲ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಕೊಡದಗುಡ್ಡದ ಶ್ರೀ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ಜರುಗುಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

ಭಕ್ತಾದಿಗಳು ರಥೋತ್ಸವದ ಎಲ್ಲಾ ಕಾರ್ಯಕ್ರಮಗಳಿಗೆ ಆಗಮಿಸಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಎಂದು ದೇವಸ್ಥಾನದ ಆಡಳಿತ ಮಂಡಳಿ ವಿನಂತಿಸಿದೆ.

ಕಾರ್ಯಕ್ರಮಗಳ ದಿನಾಂಕ:

೧೦.೦೩.೨೦೨೨ ಮಂಗಳವಾರ ಕಂಕಣಧಾರಣ ಮಹೋತ್ಸವ

ದಿನಾಂಕ ೧೬.೦೩.೨೦೨೨ ಬುಧವಾರ ಮಹಾಗಣಾರಾಧನೆ

ದಿನಾಂಕ ೧೭.೦೩.೨೦೨೨ ಗುರುವಾರ ಗಜವಾಹನೋತ್ಸವ

ದಿನಾಂಕ ೧೮.೦೩.೨೦೨೨ ಶುಕ್ರವಾರ ವೃಷಭ ವಾಹನೋತ್ಸ

“ದಿನಾಂಕ ೧೯.೦೩.೨೦೨೨ ಶನಿವಾರ ಬೆಳಗ್ಗೆ ೬.೦೦ ಗಂಟೆಗೆ ಅಗ್ನಿಕುಂಡ ಮಹೋತ್ಸವ ಮತ್ತು ಸಾಯಂಕಲ ೪.೩೦ಕ್ಕೆ ಮಹಾರಥೋತ್ಸವ”

ದಿನಾಂಕ ೨೧.೦೩.೨೦೨೨ ಸೋಮವಾರ ಬೆಳಗ್ಗೆ ೬.೦೦ ಗಂಟೆಗೆ ಓಕುಳಿ ಕಾರ್ಯಕ್ರಮವಿರುತ್ತದೆ.

ರಥೋತ್ಸವದ ಅಂಗವಾಗಿ ೨೦ ಮತ್ತು ೨೧ನೇ ತಾರೀಖು ಜಾತ್ರೆ ಇರುತ್ತದೆ.

ಶ್ರೀ ವೀರಭದ್ರಸ್ವಾಮಿ ದೇವರಿಗೆ ಮತ್ತು ಶ್ರೀ ಭದ್ರಕಾಳಿ ಅಮ್ಮನವರಿಗೆ ಬಂಗಾರದ ಮುಖಪದ್ಮ ಮಾಡಲು ಹಾಗೂ ದೇವಸ್ಥಾನದ ಅಗಲೀಕರಣ ಕಾಮಗಾರಿ ನಡೆಯುತ್ತಾ ಇರುವುದರಿಂದ ಭಕ್ತಾಧಿಗಳು ಧನ ಸಹಾಯ ಮಾಡಲು ಆಯೋಜಕರು ಕೋರಿದ್ದಾರೆ.

ಯಾವುದೇ ತರಹದ ಧನ-ಧಾನ್ಯಗಳನ್ನು ಹಾಗೂ ಬೆಲೆ ಬಾಳ ತಕ್ಕಂತಹ ಮಡಿ ಆಭರಣಗಳನ್ನು ರಸೀದಿಯಿಲ್ಲದೆ ಕೊಡಕೂಡದು.

ಸೂಚನೆ : ನೀರು ನೆರಳು ಸೌಕರ್ಯವಿರುತ್ತದೆ. ಜನರಿಗೆ ದನಗಳಿಗೆ ರೋಗ ರುಜಿನಗಳು ಇರುವುದಿಲ್ಲ. ಭಕ್ತಾದಿಗಳು ಶ್ರೀ ಸ್ವಾಮಿಗೆ ಸಲ್ಲಿಸಬೇಕಾದ ಕಾಣಿಕ ವಗೈರೆಯನ್ನು ದೇವಸ್ಥಾನದಲ್ಲಿರುವ ಟ್ರಜರಿಯಲ್ಲಿಯೇ ಹಾಕಬೇಕು,

ದೇವಸ್ಥಾನದ ಅಗಲೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ಧನ ಸಹಾಯ ಮಾಡಬೇಕಾಗಿಯೂ, ಈ ಹಿಂದೆ ವಾಗ್ದಾನ ಮಾಡಿದವರು ಮತ್ತು ಹೂವಿನ ಹಾರ ಹರಾಜಿನ ಬಾಕಿದಾರರು ಹಣ ಕಳುಹಿಸಬೇಕಾಗಿ ಕೋರುತ್ತೇವೆ.

ಜೂಜು ವಗೈರೆ ಆಟವನ್ನು ನಿಷೇಧಿಸಿದೆ, ತೆಂಗಿನಕಾಯಿಯನ್ನು ರಥದ ಗಾಲಿಯ ಹತ್ತಿರ ಬಂದು ಒಡೆಯತಕ್ಕದ್ದು ಮತ್ತು ಮಂಗಳಾರತಿ ಮತ್ತು ಹಣ್ಣು ಕಾಯಿ ಮಾಡಿಸುವವರು ದೇವಸ್ಥಾನದ ಹೊರಗಡೆ ಮಾಡಿಸತಕ್ಕದ್ದು.

ಈ ವರ್ಷದ ಪಟದ ಮತ್ತು ಹೂವಿನ ಹಾರ ಹರಾಜಿನ ಹಣವನ್ನು ಹರಾಜು ಆದ ೧ ತಿಂಗಳೊಳಗಾಗಿ ಕೊಡತಕ್ಕದ್ದು. ಹಿಂದಿನ ಪಟದ ಮತ್ತು ಹೂವಿನ ಹಾರದ ಹರಾಜಿನ ಬಾಕಿದಾರರು ಹರಾಜಿನಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.

ಭಕ್ತಾದಿಗಳು ಸಕಾಲಕ್ಕೆ ರಥೋತ್ಸವಕ್ಕೆ ಆಗಮಿಸಿ, ತನು, ಮನ, ಧನಗಳನ್ನು ಹೃರ್ದಕವಾಗಿ ಶ್ರೀ ಸ್ವಾಮಿಯ ಕಾರ್ಯಗಳಿಗೆ ಸೇವೆ ಸಲ್ಲಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.

ದಿನಾಂಕ ೨೨.೦೩.೨೦೨೨ ರಿಂದ ದಿನಾಂಕ ೩೧.೦೩.೨೦೨೨ ರವರೆಗೆ ಎತ್ತಿನ ಜಾತ್ರ ಮಾಡಲು ತೀರ್ಮಾನಿಸಲಾಗಿದೆ. ಕಾರಣ ಎಲ್ಲಾ ರೈತಬಾಂಧವರು ಈ ಸದಾವಕಾಶವನ್ನು ಬಳಸಿಕೊಳ್ಳಲು ಕೋರಲಾಗಿದೆ.

ಕೋವಿಡ್ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು, ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಲು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!