ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್.! ಠಾಣೆ ಮುಂದೆ ಪ್ರತಿಭಟನೆ.! ಕಿಡಿಗೆಡಿಗಳಿಂದ ಪೊಲೀಸ್ ವಾಹನದ ಗಾಜಿಗೆ ಕಲ್ಲು.!

ದಾವಣಗೆರೆ: ಸಾಮಾಜಿಕ ಜಾಲತಾಣದಲ್ಲಿ ಒಂದು ಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ಹಿನ್ಮೆಲೆ ಪೊಲೀಸ್ ಠಾಣೆ ಬಳಿ ಪ್ರತಿಭಟನೆ ಮಾಡಿದ ಘಟನೆ ನಡೆದಿದೆ
ಹರಿಹರ ನಗರ ಪೊಲೀಸ್ ಠಾಣೆ ಎದುರು ಮುಸ್ಲಿಂ ಸಮಾಜದವರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಮುಸ್ಲಿಂ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ
ಇದನ್ನು ಖಂಡಿಸಿ ಹರಿಹರ ನಗರ ಠಾಣೆ ಎದುರು ಮುಸ್ಲಿಂಮ ಸಮಾಜದವರು ಪ್ರತಿಭಟನೆ ನಡೆಸಿದ್ರು.
ಇದೀಗ ಆರೋಪಿಯು ಪೊಲೀಸರ ವಶದಲ್ಲಿದ್ದಾನೆ.
ಪ್ರತಿಭಟನಾಕಾರರು ಘೋಷಣೆ ಕೂಗಿದ್ದರಿಂದ ಕೆಲ ಕಾಲ ಗೊಂದಲವಾಗಿ ಕಿಡಿಗೆಡಿಗಳು ಪೊಲೀಸ್ ವಾಹನದ ಗಾಜುನ್ನ ಜಖಂಗೊಳಿಸಿದ್ದಾರೆ.
ಪೋಲೀಸ್ ಠಾಣೆಯಲ್ಲಿ ಮುಸ್ಲಿಂ ಹಾಗೂ ಹಿಂದು ಸಮಾಜದ ಮುಖಂಡರ ಉಪಸ್ಥಿತಿಯಲ್ಲಿ ಮಾತುಕತೆ ನಡೆದಿತ್ತು. ಈ ಮಧ್ಯೆ ಪ್ರತಿಭಟನಾಕಾರನ್ನು ನಿಯಂತ್ರಸಲು ಹರಿಹರ ಪೋಲಿಸರು ಹರ ಸಾಹಸಪಟ್ಟರು.