ಭರತ ಹುಣ್ಣಿಮೆ ಪ್ರಯುಕ್ತ ಪೆ.16, 17 ಉಚ್ಚoಗೇಮ್ಮನ ದರ್ಶನಕ್ಕೆ ಅವಕಾಶವಿಲ್ಲ-ಪ್ರಕಾಶ್ ರಾವ್.

ವಿಜಯನಗರ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಉಚ್ಚoಗಿದುರ್ಗದಲ್ಲಿ ಭರತ ಹುಣ್ಣಿಮೆ ಇರುವ ಪ್ರಯುಕ್ತ ರಾಜ್ಯದ ಎಲ್ಲಾ ಕಡೆಗಳಿಂದ ಸಾವಿರಾರು ಭಕ್ತರೂ ದೇವಿಯ ದರ್ಶನಕ್ಕೆ ಬರಬಹುದು ಇದರಿಂದ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುಬಹುದು ಎನ್ನುವ ಮುನ್ನೆಚ್ಚರಿಕೆಯಿಂದ ಜಗಳೂರು ಶಾಸಕ ಎಸ್ ವಿ ರಾಮಚಂದ್ರಪ್ಪ ಹಾಗೂ ತಾಲ್ಲೂಕು ಆಡಳಿತದವತಿಯಿಂದ ಪೆ.16,17 ರಂದು ಉಚ್ಚoಗಿದುರ್ಗದಲ್ಲಿ ಉಚ್ಚoಗೆಮ್ಮನ ದೇವಸ್ಥಾನ, ಪಾದಗಟ್ಟೆ,ಹಾಲಮ್ಮನ ತೋಫಿನಲ್ಲಿ ಎರಡು ದಿನ ದೇವರ ದರ್ಶನಕ್ಕೆ ಅವಕಾಶವಿಲ್ಲ ಭಕ್ತರೂ ಮನೆಯಲ್ಲಿಯೇ ದೇವಿಯ ಪ್ರಾರ್ಥನೆ ಮಾಡಿ ಸಹಕರಿಸಬೇಕು ಹುಣ್ಣಿಮೆಯಾದ ಮೇಲೆ ದೇವಿಯ ದರ್ಶನಕ್ಕೆ ಬರುವ ಮೂಲಕ ಕೋವಿಡ್-19 ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ
ಬಳ್ಳಾರಿ/ವಿಜಯನಗರ ಜಿಲ್ಲಾ
ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾದ ಪ್ರಕಾಶ್ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ….