ಉಸ್ತುವಾರಿ ಸಚಿವರು ಪಿಕ್ನಿಕ್ ಗೆ ಬರ್ತಿಲ್ಲಾ: ಬೈರತಿ ಬಸವರಾಜ್ ರನ್ನ ಹಾಡಿ ಹೊಗಳಿದ ರೇಣುಕಾಚಾರ್ಯ

ದಾವಣಗೆರೆ:  ದಾವಣಗೆರೆಯಲ್ಲಿ ನಡೆದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬೈರತಿ ಬಸವರಾಜ್ ಜಿಲ್ಲಾ ಉಸ್ತುವಾರಿ ಸಚಿವರಾಗಿ ಉತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ ಅಂತಹವರು ಸಿಕ್ಕಿರುವುದು ನಮ್ಮ ಜಿಲ್ಲೆ ಹಾಗೂ ನಮ್ಮೆಲ್ಲರ ಅದೃಷ್ಟ ಎಂದು ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕುಗಳ ಶಾಸಕ ಎಂ ಪಿ ರೇಣುಕಾಚಾರ್ಯ ಹಾಡಿ ಹೊಗಳಿದ್ದಾರೆ.

ನೀವು ವಾರಕ್ಕೆ ಎರಡು ಬಾರಿ ಜಿಲ್ಲೆಗೆ ಭೇಟಿ ನೀಡುತ್ತಿದ್ದೀರಿ ನೀವೇನು ಇಲ್ಲಿಗೆ ಪಿಕ್ ನಿಕ್ಕಿಗೆ ಬಂದಿಲ್ಲ ನಿಮ್ಮ ಕಾರ್ಯವೈಖರಿ ಬಗ್ಗೆ ನಮಗೆ ತೃಪ್ತಿ ಇದೆ ಎಂದು ಹೇಳಿದ್ದಾರೆ. ನಿಮಗೆ ಯಾರು ಏನು ಹೇಳಿದರೋ ಗೊತ್ತಿಲ್ಲ ನಾವೇನು ಬಿಜೆಪಿ ಚಿಹ್ನೆ ಹಾಕಿಕೊಂಡು ಲಸಿಕೆ ಹಾಕಿಸುತ್ತಿಲ್ಲ. ಲಸಿಕೆ ನೀಡುವುದರಲ್ಲಿ ಪಾರ್ಟಿ ಪಕ್ಷ ಎಂಬ ಭೇದಭಾವ ಇಲ್ಲ ಯಾರೋ ತಮಗೆ ತಪ್ಪು ಮಾಹಿತಿ ನೀಡಿದ್ದಾರೆ. ನಾವು ಎಲ್ಲರಿಗೂ ಸಿಗುವಂತೆ ನೋಡಿಕೊಳ್ಳುತ್ತಿದ್ದೇವೆ ಎಂದು ತಮ್ಮ ಕಾರ್ಯವನ್ನು ಸಮರ್ಥಿಸಿಕೊಂಡ ಶಾಸಕ ರೇಣುಕಾಚಾರ್ಯ.

ರೇಣುಕಾಚಾರ್ಯ ಹೇಳಿಕೆ ಬೆಂಬಲಿಸಿದ ಶಾಸಕ ಮಾಡಾಳು ವಿರೂಪಾಕ್ಷಪ್ಪ. ಬೈರತಿ ಬಸವರಾಜ್ ನಮ್ಮ ಜಿಲ್ಲೆ ಉಸ್ತುವಾರಿ ಸಚಿವರು ಆಗಿರುವುದೇ ಪುಣ್ಯ. ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ದಾವಣಗೆರೆಗೆ ಪಿಕ್ನಿಕ್ಕಿಗೆ ಬರುತ್ತಾರೆ ಎಂಬ ಹೇಳಿಕೆ ಸರಿಯಲ್ಲ ವಾರಕ್ಕೊಮ್ಮೆ ದಾವಣಗೆರೆಗೆ ಭೇಟಿ ನೀಡಿ ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದೀರಿ ತಮ್ಮ ಮೇಲಿನ ಆರೋಪದಲ್ಲಿ ಹುರುಳಿಲ್ಲ ಎಂದ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!