ಆಸ್ಪತ್ರೆಯಲ್ಲಿ ಮೃತಪಟ್ಟವರ ಮೈ ಮೆಲಿದ್ದ ಆಭರಣಗಳು ಕಳ್ಳತನ: ಪ್ರಖ್ಯಾತ ವೈದ್ಯರ ಸಂಬಂಧಿಯ ಮಾಂಗಲ್ಯಸರ ಮಾಯ

GARUDAVOICE EXCLUSIVE
ದಾವಣಗೆರೆ: ಕೊರೊನಾಗೆ ಬಲಿಯಾದವರ ಮೈ ಮೇಲಿನ ಬೆಲೆಬಾಳುವ ವಸ್ತುಗಳು ಕಳ್ಳತನ ವಾಗುತ್ತಿವೆ. ಸೋಂಕಿತರು ಮೃತಪಟ್ಟರೇ ಅವರ ಮೈಮೇಲೆ ಇದ್ದ ಬಂಗಾರದ ಆಭರಣಗಳು ಕಾಣೆಯಾಗಿದ್ದ ಘಟನೆ ದಾವಣಗೆರೆಯಲ್ಲಿ ನಡೆದಿರುವುದು ವಿಪರ್ಯಾಸ. ಕಳೆದ 10 ದಿನಗಳ ಹಿಂದೆ ದಾವಣಗೆರೆಯ ಜಿಲ್ಲಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಕುಟುಂಬಸ್ಥರಿಗೆ ಸಿಗ್ತಿಲ್ಲ, ತಮ್ಮವರ ಬಳಿಯುದ್ದ ಬೆಲೆಬಾಳುವ ವಸ್ತುಗಳು.
ಹೌದು ದಾವಣಗೆರೆ ಚಿಗಟೇರಿ ಆಸ್ಪತ್ರೆಯಲ್ಲಿ ಪ್ರಖ್ಯಾತ ಸರ್ಕಾರಿ ವೈದ್ಯರ ಸಂಬಂದಿಯೊಬ್ಬರು ಕಳೆದ 10 ದಿನದ ಹಿಂದೆ ಕೊವಿಡ್ ಸೊಂಕಿನಿಂದ ಮೃತ ಪಟ್ಟಿರುತ್ತಾರೆ, ಮೃತರ ಪಾರ್ಥಿವ ಶರೀರವನ್ನ ಅಂತ್ಯಸಂಸ್ಕಾರ ನಡೆಸುವ ಸಂದರ್ಭದಲ್ಲಿ ಕುಟುಂಬದವರ ಗಮನಕ್ಕೆ ಬಂದಿದೆ. ಸೊಂಕಿತ ಮೃತರ ಮೈ ಮೆಲಿದ್ದ ಬಂಗಾರದ ತಾಳಿ ಹಾಗೂ ಕಿವಿಯೋಲೆ ಕಣ್ಮರೆಯಾಗಿತ್ತು. ಇದನ್ನ ತಮ್ಮ ಸಂಭಂದಿಕರಾದ ಆಸ್ಪತ್ರೆಯ ವೈಧ್ಯರ ಗಮನಕ್ಕೆ ತಂದಿದ್ದಾರೆ ಕುಟುಂಬಸ್ಥರು. ಆಸ್ಪತ್ರೆಯ ಸಿಬ್ಬಂದಿಗಳಿಗೆ ವೈಧ್ಯರು ಲೆಫ್ಟ್ ರೈಟ್ ತೆಗೆದುಕೊಂಡಾಗ ಬಂಗಾರದ ಮಾಂಗಲ್ಯ ಸರ್ವನ್ನ ಮರಳಿಸಿ ತಪ್ಪೊಪ್ಪಿಗೆ ನೀಡಿದ್ದಾರೆ. ಆದರೆ ಕಿವಿಯೋಲೆ ಮಾತ್ರ ಇನ್ನೂ ಸಿಕ್ಕಿಲ್ಲವಂತೆ ಅಲ್ಲದೆ ಇದರ ಬಗ್ಗೆ ಎಲ್ಲೂ ಪ್ರಕರಣ ಕೂಡ ದಾಖಲಿಸಿಲ್ಲ.
ಜಿಲ್ಲಾ ಆಸ್ಪತ್ರೆಯ ಓರ್ವ ವೈದ್ಯರ ಸಂಬಂಧಿಕರ ಅಭರಣವನ್ನೇ ಕದಿಯುವ ದುರಿಳರು, ಸಾಮಾನ್ಯ ಜನರ ವಸ್ತುಗಳನ್ನು ಬಿಡ್ತಾರಾ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಇದೇ ರೀತಿ ಅನೇಕ ಪ್ರಕರಣಗಳು ನಡೆದಿರಬಹುದು ಆದರೆ ಮೃತರ ಅಂತ್ಯಕ್ರಿಯೆ ನಡೆಸುವ ಬರದಲ್ಲಿ ಮರೆತುಬಿಟ್ಟಿರುವ ಸಂಗತಿಗಳು ಯತೇಚ್ಚವಾಗಿರವ ಸಾಧ್ಯತೆಗಳಿವೆ.
ಒಟ್ಟಾರೆ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆಯಾದರೂ ಯಾರು ಈ ರೀತಿಯ ಪ್ರಕರಣದ ಬಗ್ಗೆ ಧ್ವನಿ ಎತ್ತಿಲ್ಲ. ಸಂಭಂದಿಸಿದ ಇಲಾಖೆಯವರು ಇಂತಹ ಪ್ರಕರಣಗಳ ಬಗ್ಗೆ ಕೊಂಚ ಕಣ್ಣಾಡಿಸಬೇಕು ಎಂಬುದು ನಮ್ಮೆಲ್ಲರ ಆಗ್ರಹವಾಗಿದೆ.