KPM Matka: ಮಟ್ಕಾ ದರ್ಬಾರಿನಲ್ಲಿ ಸಭ್ಯರಾರು.? ಕೆ ಪಿ ಎಂ ಪಿ ಎಸ್ ಐ ಸಂಜೀವ್ ಸರ್ ಇಲಾಖೆಯ ಗೌರವ ನಿಮ್ಮ ಕೈಯಲ್ಲಿ.!

ದಾವಣಗೆರೆ: ರಾಜ್ಯದ ಮುಖ್ಯಮಂತ್ರಿ ತವರು ಜಿಲ್ಲೆಯಾದ ಹಾವೇರಿ ಜಿಲ್ಲೆಯ ಅನೇಕ ಕಡೆ ಹಲವು ದಿನಗಳಿಂದ ಮಟ್ಕಾ ದಂಧೆ (ಒಸಿ) ಖುಲ್ಲಂ ಖುಲ್ಕೆ ನಡೆಯುತ್ತಿದ್ದರೂ, ಅಕ್ರಮ ಚಟುವಟಿಕೆ ನಿಯಂತ್ರಿಸಬೇಕಾದ ಪೊಲೀಸ್ ಇಲಾಖೆಯವರು ಮಾತ್ರ ಯಾಕೋ ಸುಮ್ಮನಿದ್ದಾರೆ.! ಇನ್ನೂ ಈ ದಂಧೆ ನಡೆಯುವ ಸ್ಥಳಗಳಿಂದ ಕೇವಲ ಅರ್ಧ ಕಿಲೋ ಮೀಟರ್ ವ್ಯಾಪ್ತಿಯಲ್ಲೇ ಪೊಲೀಸ್ ಠಾಣೆ ಹಾಗೂ ರಾಣೆಬೆನ್ನೂರು ಶಾಸಕರ ಮನೆ ಇದ್ದರೂ ಏನೂ ಪ್ರಯೋಜನವಿಲ್ಲ.
ಹೌದು ಈಗಷ್ಟೆ ರಾಜ್ಯದಲ್ಲಿ ಕೊವಿಡ್ ಅನ್ ಲಾಕ್ ಘೋಷಣೆಯಾಗಿದ್ದು, ದುಡಿಯುವ ಕಾರ್ಮಿಕರು ಸೇರಿದಂತೆ ಅನೇಕ ವಿದ್ಯಾವಂತರೂ,ಸರ್ಕಾರಿ ನೌಕರರು ಮಟ್ಕಾ ಚೀಟಿ ಬರೆಸುತ್ತಿದ್ದು ಈ ಓಸಿ ಅಟದಿಂದ ತಮ್ಮಲ್ಲಿರುವ ಹಣವನ್ನ ಕಳೆದುಕೊಂಡು ಕುಟುಂಬಸ್ಥರ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕುತ್ತಿದ್ದಾರೆ. ಇನ್ನೂ ಕೆಲವರು ಪತ್ನಿ ದುಡಿದ ಹಣದಿಂದ ಮಟ್ಕಾ ಅಟವಾಡಿ ಹಣವನ್ನ ಕಳೆದುಕೊಳ್ಳುತ್ತಿದ್ದಾರೆ
ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಗಡಿಭಾಗವಾದ ತುಂಗಭದ್ರಾ ನದಿ ಪಕ್ಕದ ಕೊಡಿಯಾಲ ಹೊಸಪೇಟೆ ಬಳಿ ಈ ಹಿಂದೆ ಇಟ್ಟಿಗೆ ಬಟ್ಟಿಗಳ ಮನೆಗಳಲ್ಲಿ ಮಟ್ಕಾ ದಂಧೆಕರೋರರು ಜಾತ್ರೆಯ ಸ್ವರೂಪದಲ್ಲಿ ಮಟ್ಕಾ ಬರೆಯುತ್ತಿದ್ದರು, ಈ ಬಗ್ಗೆ ಗರುಡವಾಯ್ಸ್ ರಹಸ್ಯ ಕಾರ್ಯಾಚರಣೆ ಮೂಲಕ ಈ ಅಕ್ರಮದ ವಿರುದ್ದ ಸುದ್ದಿಯನ್ನ ಬರೆದಿತ್ತು. ಆ ವರದಿಯ ನಂತರ ಹಾವೇರಿ ಎಸ್ ಪಿ ಖುದ್ದು ಮಟ್ಕಾ ಅಡ್ಡೇಯ ಮೇಲೆ ದಾಳಿ ನಡೆಸಿತ್ತು. ದಾಳಿ ನಡೆದು ಕೆಲ ತಿಂಗಳ ನಂತರ ಮತ್ತೆ ಮಟ್ಕಾ ದಂಧೆ ಚಾಲ್ತಿ ಇತ್ತು, ಈ ಭಾರಿ ಕುಮಾರಪಟ್ಟಣಂ ಪೊಲೀಸ್ ಠಾಣೆಯ ಪಿ ಎಸ್ ಐ ಶಂಕರಗೌಡ ಪಾಟೀಲ್ ತಲೆ ದಂಡವಾಗಿತ್ತು. ಈ ಮಟ್ಕಾ ದಂಧೆ ಬರೆಸುವ ಕಿಂಗ್ ಪಿನ್ ಬೀರಪ್ಪ ಇವ ಪುತ್ರ ನಾಗ ಹಾಗೂ ನವೀನ್ ಎಂಬುವವರು ಈ ಸ್ಥಳದಿಂದ ಕೂಗಳತೆಯ ದೂರದಲ್ಲಿ ಪೊಲೀಸ್ ಠಾಣೆಯಿದ್ದರೂ ಕ್ಯಾರೆ ಎನ್ನದೆ ಮಟ್ಕಾ ದಂಧೆ ಮಡೆಸುತ್ತಿದ್ದಾನೆ. ಇದನ್ನು ಸದೆ ಬಡಿಯಬೇಕಾದ ಪೊಲೀಸರು ಮಾತ್ರ ಜಾಣ ಕುರುಡುತನ ತೋರುತ್ತಿದ್ದಾರೆ.
Matka Video.. 👇
ಹರಿಹರ ಹಾಗೂ ರಾಣೆಬೆನ್ನೂರು ಗಡಿಭಾಗವಾದ ಕೊಡಿಯಾಲ ಹೊಸಪೇಟೆಗೆ ಹರಿಹರ ದಾವಣಗೆರೆಯ ಜನರು ಮಟ್ಕಾ ಚೀಟಿ ಬರೆಸಲು ಬರುತ್ತಾರೆ. 10 ರೂಪಾಯಿಂದ ಪ್ರಾರಂಭವಾಗುವ ಹಣದ ಹೊಳೆ ಪ್ರತಿನಿತ್ಯ ಲಕ್ಷಾಂತರ ಹಣವನ್ನ ಜೇಬಿಗಿಳಿಸುತ್ತಿದ್ದಾರೆ. ಗ್ರಾಮದಲ್ಲಿ ಬಳಿಯ ತುಂಗಭದ್ರಾ ನದಿ ತಟದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಹಿಂಭಾಗ ಜಾತ್ರೆಯ ಮಾದರಿಯಲ್ಲಿ ಮಟ್ಕಾ ಬರೆಯುವವರ ಹಾಗೂ ಆಡುವವರ ಸಂಖ್ಯೆ ಹೆಚ್ಚುತ್ತಿದೆ. ಕೂಲಿ ಕೆಲಸ ಮಾಡಿದ್ದ ಹಣದಲ್ಲಿ ಇಲ್ಲಿಗೆ ಬಂದು ದುಡಿದ ಹಣವನ್ನೆಲ್ಲಾ ಜನರು ಕಳೆದುಕೊಳ್ಳುತ್ತಿದ್ದಾರೆ.
ಒಮ್ಮೆ ಕಟ್ಟಿದ ಹಣಕ್ಕೆ ದುಪ್ಪಟ್ಟು ಬಂದರೆ ಸಾಕು ಓಸಿಗೆ ದಾಸರಾಗುತ್ತಿರುವ ಅನಕ್ಷರಸ್ಥರು ಒಂದೆಡೆಯಾದರೆ, ಇಂತಹ ಜನರನ್ನೇ ಖೆಡ್ಡಾಕ್ಕೆ ತಳ್ಳಿ ಇದನ್ನೇ ಲಾಭವಾಗಿ ಪಡೆದುಕೊಳ್ಳುತ್ತಿರುವವರಿಗೇನೂ ಕಡಿಮೆಯಿಲ್ಲ. ಬೆಳಗ್ಗೆಯಿಂದ ಪ್ರಾರಂಭವಾಗುವ ಈ ದಂಧೆ ರಾತ್ರಿಯವರೆಗೂ ನಡೆಯುತ್ತಿರುತ್ತೆ, ಇನ್ನೂ ಮಧ್ಯಾಹ್ನದ ವೇಳೆಯಲ್ಲಿ ಜಾತ್ರೆಯ ಸನ್ನಿವೇಶದ ರಿತೀಯಲ್ಲಿ ಮಟ್ಕಾ ಚೀಟಿ ಬರೆಸಲು ಜನ ಬರ್ತಾರೆ. ದಾವಣಗೆರೆ ಜಿಲ್ಲೆಯ ಜನರು ಕೂಡ ಈ ಪ್ರದೇಶಕ್ಕೆ ಬಂದು ಓಸಿ ಚೀಟಿ ಬರೆಸ್ತಾರೆ.
ಕುಮಾರಪಟ್ಟಣಂ ಠಾಣೆಯ ಹಾಲಿ ಪಿ ಎಸ್ ಐ ಸಂಜೀವ್ ಸರ್ ಈ ಹಿಂದೆ ಅಮಾನತ್ತಾಗಿದ್ದು ಯಾಕೆ..?
ಈ ಹಿಂದೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪಿ ಎಸ್ ಐ ಸಂಜೀವ್ ಆಗಿದ್ದರು ಠಾಣಾ ಹಿಂಬಾಗದಲ್ಲಿ ಕೆಲ ಪೊಲೀಸ್ ಸಿಬ್ಬಂದಿ ಇಸ್ಪೀಟ್ ಆಟವಾಡುತ್ತಿದ್ದಾಗ ಅಂದಿನ ಐಜಿಪಿ ರವಿ ತಂಡ ರೇಡ್ ಮಾಡಿತ್ತು, ಆಗ ಸಂಜೀವ್ ಅವರನ್ನ ಅಮಾನತ್ತು ಮಾಡಲಾಗಿತ್ತು. ನಂತರ ಎಸ್ ಪಿ ಕಚೇರಿಯ ವಿಶೇಷ ಕೇಂದ್ದದಲ್ಲಿದ್ದವರು ಇದೀಗ ಕುಮಾರಪಟ್ಟಣಂ ಠಾಣೆಯ ಪಿ ಎಸ್ ಐ ಆಗಿ ಚಾರ್ಜ್ ತೆಗೆದುಕೊಂಡಿದ್ದಾರೆ. ಇದೀಗ ಪೂರ್ವ ವಲಯ ಐಜಿಪಿ ಯಾಗಿ ಕೆ ತ್ಯಾಗರಾಜನ್ ಪ್ರಭಾರ ವಹಿಸಿಕೊಂಡಿದ್ದು ಅಕ್ರಮ ಚಟುವಟಿಕೆಗಳನ್ನ ಕಡಿವಾಣ ಹಾಕಲು ಪಣತೊಟ್ಟಿದ್ದಾರೆ. ರಾಣೆಬೆನ್ನೂರು ಗಡಿಭಾಗದಲ್ಲಿ ಮಟ್ಕಾ ದಂಧೆ ಎಗ್ಗಿಲ್ಲದೇ ರಾಜಾರೋಷವಾಗಿ ನಡೆಯುತ್ತಿರುವುದು ಗಮನಕ್ಕೆ ಬಂದಿದ್ದರು ಇವರಿಗೆ ಕಾಣಿಸುತ್ತಿಲ್ಲ ಅನ್ನಿಸುತ್ತೆ..! ಏನೇ ಆಗಲಿ ಇಂತಹ ಅಕ್ರಮವನ್ನ ಕೂಡಲೇ ಪೊಲೀಸ್ ಇಲಾಖೆ ಇದಕ್ಕೆ ಕಡಿವಾಣ ಹಾಕಬೇಕು ಎಂಬುದು ಸಾರ್ವಜನಿಕರ ಆಶಯ.