ಮೂಕಪ್ರಾಣಿ ಮೇಲೆ ಅದೆಂಥಾ ಪ್ರೀತಿ?: ಉಕ್ರೇನ್ನಿಂದ ನಾಯಿ ಬಿಟ್ಟು ಭಾರತಕ್ಕೆ ಬರಲು ಒಪ್ಪದ ವಿದ್ಯಾರ್ಥಿ!

ಜೀವ ಉಳಿದರೆ ಸಾಕಪ್ಪ ಅಂತ ಪ್ರತಿಕ್ಷಣ ಯಾರಾದರೂ ತಮ್ಮ ಸಹಾಯಕ್ಕೆ ಬರುತ್ತಾರಾ ಅಂತ ಉಕ್ರೇನ್ನಲ್ಲಿ ನಡೆಯುತ್ತಿರುವ ಯುದ್ದದಿಂದ ಭಯಭೀತರಾದ ಜನ ಚಿಂತೆಯಲ್ಲಿ ಮಗ್ನರಾದರೆ ಇಲ್ಲೊಬ್ಬ ವಿದ್ಯಾರ್ಥಿ ತನ್ನ ಜೊತೆ ತನ್ನ ನಾಯಿಯನ್ನು ಕರೆದುಕೊಂಡು ಹೋಗಲು ಅವಕಾಶ ನೀಡಿದರೆ ಮಾತ್ರ ಸ್ವದೇಶಕ್ಕೆ ಮರಳುವುದಾಗಿ ಪಟ್ಟು ಹಿಡಿದಿದ್ದಾನೆ. “ಬದುಕುವುದಾದರೆ ನಾನೊಬ್ಬನೇ ಬದುಕುವುದಿಲ್ಲ, ನನ್ನ ಪ್ರೀತಿಯ ನಾಯಿಯೂ ಬದುಕಬೇಕು” ಅಂತಿದ್ದಾನೆ ಈ ವಿದ್ಯಾರ್ಥಿ.
ಪ್ರಸ್ತುತ ಯುದ್ಧದ ನಾಡಾಗಿರುವ ಉಕ್ರೇನ್ನಿಂದ ಭಾರತೀಯರನ್ನು ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳನ್ನು ವಾಪಸ್ ದೇಶಕ್ಕೆ ಕರೆತರುವ ಕಾರ್ಯಾಚರಣೆ ನಡೆಯುತ್ತಲೇ ಇದೆ. ಈ ಕಾರ್ಯಾಚರಣೆಗೆ ಕೇಂದ್ರ ಸರ್ಕಾರ ‘ಆಪರೇಷನ್ ಗಂಗಾ’ ಎಂದು ಹೆಸರು ಇಟ್ಟಿದ್ದು, ಅದರಡಿಯಲ್ಲಿ ಈಗಾಗಲೇ ಹಲವು ವಿದ್ಯಾರ್ಥಿಗಳು ಸೇರಿ ನಾಗರಿಕರನ್ನು ಮರಳಿ ಭಾರತಕ್ಕೆ ಕರೆತರಲಾಗುತ್ತಿದೆ.
ಜೀವ ಭಯದಲ್ಲಿದ್ದ ವಿದ್ಯಾರ್ಥಿಗಳು ತಾಯ್ನಾಡಿಗೆ ಬಂದು ನಿಟ್ಟುಸಿರು ಬಿಡುತ್ತಿದ್ದಾರೆ. ಆದರೆ ಎಂಜಿನಿಯರಿAಗ್ ವಿದ್ಯಾರ್ಥಿಯೊಬ್ಬರು ತಮ್ಮ ಸಾಕು ನಾಯಿ ಇಲ್ಲದೆ ನಾನು ಉಕ್ರೇನ್ನಿಂದ ಭಾರತಕ್ಕೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾನೆ.
ಯುದ್ಧಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ಭಾರತದ ಮೂರನೇ ವರ್ಷದ ಎಂಜಿನಿಯರಿAಗ್ ವಿದ್ಯಾರ್ಥಿ, ತನ್ನ ಸಾಕು ನಾಯಿಯನ್ನು ಅಲ್ಲಿಯೇ ತೊರೆದು ಭಾರತಕ್ಕೆ ಬರುವುದಿಲ್ಲ ಎಂದು ಪಟ್ಟು ಹಿಡಿದಿದ್ದಾನೆ. ಪೂರ್ವ ಉಕ್ರೇನ್ನ್ನ ಖಾರ್ಕೀವ್ ರೇಡಿಯೋ ಎಲೆಕ್ಟಾçನಿಕ್ಸ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವ ರಿಷಭ್ ಕೌಶಿಕ್ ಎಂಬಾತ, ತನ್ನನ್ನು ಭಾರತಕ್ಕೆ ಏರ್ಲಿಫ್ಟ್ ಮಾಡುವಾಗ ತನ್ನೊಂದಿಗೆ ನಾಯಿಯನ್ನೂ ಕರೆದುಕೊಂಡು ಹೋಗಲು ಅವಕಾಶ ಮಾಡಿಕೊಡಿ ಎಂದು ಕೇಳಿಕೊಳ್ಳುತ್ತಿದ್ದಾನೆ.
ಭಾರತೀಯ ವಲಸಿಗರಿಗೆ, ವಿಶೇಷವಾಗಿ ಯುದ್ಧ ಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಕೇಂದ್ರ ಸರ್ಕಾರ ಭಾರತಕ್ಕೆ ಮರಳಿ ಕರೆಸಿಕೊಳ್ಳಲು ಇನ್ನಿಲ್ಲದ ಶತಪ್ರಯತ್ನ ನಡೆಸುತ್ತಿದೆ. ಅದರಂತೆ ಈಗಾಗ್ಲೇ ನೂರಾರು ವಿದ್ಯಾರ್ಥಿಗಳು, ವಲಸಿಗರು ತಾಯಿಯ ಮಡಿಲು ಸೇರಿದ್ದಾರೆ. ಆದರೆ ರಿಷಭ್ ಕೌಶಿಕ್ ಭಾರತಕ್ಕೆ ಬರುವ ಮನಸ್ಸಿದ್ದರೂ ತಾನು ಪ್ರೀತಿಯಿಂದ ಸಾಕಿದ ಮುದ್ದಿನ ನಾಯಿಯನ್ನು ಯುದ್ಧ ಪೀಡಿತ ಉಕ್ರೇನ್ ನೆಲದಲ್ಲಿ ಒಂಟಿಯಾಗಿ ಬಿಟ್ಟು ಬರಲು ಮನಸ್ಸಿಲ್ಲದೇ ತನ್ನ ಜೊತೆಗೆ ಅದನ್ನು ಭಾರತಕ್ಕೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದಾನೆ.