ಉತ್ತಮ ಪ್ರಜಾಕೀಯ ಪಕ್ಷ ಹೇಗೆ ಕಾರ್ಯನಿರ್ವಹಿಸಲಿದೆ? : ಪ್ರಜಾ ಕಾರ್ಮಿಕರು ಕಾರ್ಮಿಕರಾಗಿ ಹೇಗೆ ಕೆಲಸ ಮಾಡಬೇಕು

ಉತ್ತಮ ಪ್ರಜಾಕೀಯ ಪಕ್ಷದಲ್ಲಿ ಆರಿಸಿ ಬಂದ ವಿಧಾನಸಭಾ ಸದಸ್ಯ, ವಿಧಾನ ಪರಿಷತ್ ಸದಸ್ಯ, ಲೋಕಸಭಾ ಸದಸ್ಯ ಹಾಗು ರಾಜ್ಯಸಭಾ ಸದಸ್ಯರ ತಯಾರಿ ಹಾಗು ಸಮಯ ನಿರ್ವಹಣೆ ಮತ್ತು ಪ್ರಜೆಗಳ ಜವಾಬ್ದಾರಿ ಹೇಗಿರಬೇಕು ಎಂಬುದರ ಕುರಿತು ಒಂದು ವಿಮರ್ಶೆ…
1. ಚುನಾಯಿಸಿ ಬಂದ ಕೂಡಲೆ, ತನ್ನ ಕ್ಷೇತ್ರದಲ್ಲಿರುವ ಗ್ರಾಮ ಪಂಚಾಯಿತಿ ಹಾಗು ಅದರಲ್ಲಿರುವ ವಾರ್ಡ್ಗಳ ಹಾಗು ಪಟ್ಟಣ-ನಗರ ಪ್ರದೇಶವಾದರೆ, ಅದರಲ್ಲಿರುವ ವಾರ್ಡ್ಗಳ ಲೀಸ್ಟ್ ತಯಾರು ಮಾಡಬೇಕು. ಹಾಗೆ, ಅದಕ್ಕೆ ಸಂಬAದಪಟ್ಟ ಪ್ರತಿನಿಧಿಗಳ ವಿವರ ಸಂಗ್ರಹಿಸಬೇಕು. ಇವುಗಳನ್ನು ಸರಕಾರಿ ಗ್ರಾಮ ಪಂಚಾಯಿತಿ ವೆಬ್ಸೈಟ್ನಿಂದ ಹಾಗು ನಗರ ಸಭೆಗಳ ವೆಬ್ಸೈಟ್ನಿಂದ ಸಂಗ್ರಹಿಸಬಹುದು. ಬಹುಶ, ತಹಶೀಲ್ದಾರರ ಕಚೇರಿ ಅಥವಾ ಜಿಲ್ಲಾದಿಕಾರಿ ಕಚೇರಿಯಿಂದ ಕೂಡಾ ಪಡೆಯಬಹುದು.
2. ಸೋಮವಾರದಿಂದ ಶನಿವಾರದವರೆಗೆ ಬೆಳ್ಳಿಗ್ಗೆ 9.00 ಗಂಟೆಯಿAದ ಸಂಜೆ 6.00 ಗಂಟೆ (9 ಗಂಟೆ) ವರೆಗೆ ಅವನ ಸಮಯವನ್ನು ಪ್ರಜೆಗಳಿಗಾಗಿ ಹಾಗು ಅವನ ಕ್ಷೇತ್ರಕ್ಕಾಗಿ ಮೀಸಲಿಡಬೇಕು.
3. ಭಾನುವಾರ, ಅವನ ಕುಟುಂಬ ಹಾಗು ವೈಯಕ್ತಿಕ ಕೆಲಸಕ್ಕಾಗಿ ಮೀಸಲಿಡಬೇಕು. ಈ ದಿನ, ಯಾರೂ ಪ್ರಜೆಗಳು, ಅವನನ್ನು/ಅವಳನ್ನು ಸಂಪರ್ಕಿಸಬಾರದು. ಅವನ/ಅವಳ ಸಾಮಾಜಿಕ ಜೀವನ ಹಾಗು ವೈಯಕ್ತಿಕ ಜೀವನಕ್ಕೆ ಸಂಬAದ ಇರಬಾರದು. ವಾರದಲ್ಲಿ, ಒಂದು ದಿನ, ಸಂಪೂರ್ಣ, ಅವನ/ಅವಳ ವೈಯಕ್ತಿಕ ಜೀವನಕ್ಕೆ ಮೀಸಲಿಡಬೇಕು. ಆವಾಗಲೇ, ಜೀವನದಲ್ಲಿ ಸಮತೋಲನ ಬರುವುದು.
4. ಯಾವಾಗ ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ, ರಾಜ್ಯ ಸಭೆಯ ಅಧಿವೇಶನ ನಡೆಯುವುದೆಂದು ಹಾಗು ಆ ಸಮಯದಲ್ಲಿ ಪ್ರತಿನಿಧಿಯು, ಪ್ರಜೆಗಳಿಗೆ ಭೇಟಿಯಾಗಲು ಸಾಧ್ಯವಿಲ್ಲವೆಂದು, ಪ್ರಜೆಗಳಿಗೆ ಮುಂಗಡವಾಗಿ ತಿಳಿಸಬೇಕು. ಆಗ ಪ್ರತಿನಿಧಿಯ ಕಚೇರಿ ಕೆಲಸದವರು ಪ್ರಜೆಗಳ ಮನವಿಯನ್ನು ಸ್ವೀಕರಿಸಿ, ಅದನ್ನು ಪಟ್ಟಿ ಮಾಡಿ, ನಂತರ ಪ್ರತಿನಿಧಿ ಅಧಿವೇಶನದಿಂದ ಹಿಂದುರಿಗಿದಾಗ, ಅವನಿಗೆ/ಅವಳಿಗೆ ತಿಳಿಸಬೇಕು. ಅದರಂತೆ ಅವುಗಳನ್ನು ವಿಲೇವಾರಿ ಮಾಡಬೇಕು.
5. ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 9.00 ಗಂಟೆಯಿAದ ಸಂಜೆ 6.00 ಗಂಟೆಯವರೆಗೆ, ಪ್ರತಿನಿಧಿಯು, ಯಾವುದೇ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು. ಅದು ಪ್ರಜೆಗಳ ಹಾಗು ಆಡಳಿತದ ಸಮಯ. ಅzನ್ನು ಪ್ರಜೆಗಳಿಗಾಗಿ ಕಾದಿರಿಸಬೇಕು. ಮೇಲೆ ಹೇಳಿದ ಸಮಯದ ನಂತರ, ಅದು ಪ್ರತಿನಿಧಿಗೆ ಸಂಬAದಪಟ್ಟ ಖಾಸಗಿ ಸಮಯ. ಅವನು/ಅವಳು ಅದನ್ನು ಅವನಿಗೆ/ಅವಳಿಗೆ ಬೇಕಾದ ಹಾಗೆ ಉಪಯೋಗಿಸಬಹುದು. ಪ್ರಜೆಗಳು, ಆ ಸಮಯದಲ್ಲಿ ಅವನನ್ನು/ಅವಳನ್ನು ಪ್ರಜೆಗಳು ಸಂಪರ್ಕಿಸಬಾರದು.
6. ಮೇಲೆ ಹೇಳಿದ ಎಲ್ಲಾ ನಿಯಮಗಳು, ತುರ್ತು ಪರಿಸ್ಥಿತಿ ಬಂದಾಗ ಅನ್ವಯ ಆಗುವುದಿಲ್ಲ. ಆಗ ಸಮಯಕ್ಕೆ ತಕ್ಕಂತೆ ವರ್ತಿಸುವುದು ಅನಿವಾರ್ಯ.
7. ಮೇಲೆ ಹೇಳಿದ ಸಮಯದಲ್ಲಿ ಪ್ರತಿನಿಧಿಯು ಎಲ್ಲಿ ಇರುವನು ಎಂದು ಪ್ರಜೆಗಳಿಗೆ ತಿಳಿದಿರಬೇಕು. ತನ್ನ ಕಚೇರಿ ನೋಟೀಸ್ ಫಲಕದಲ್ಲಿ, ಅವನ/ಅವಳ ಕಾರ್ಯಕ್ರಮವನ್ನು ನಮೂದಿಸಿರಬೇಕು. ಸಾಧ್ಯವಾದರೆ, ಪ್ರಜೆಗಳಿಗೆ ಸಾಮಾಜಿಕ ಜಾಲತಾಣದ ಮೂಲಕ, ತನ್ನ ಸಮಯದ ವಿವರ ತಲುಪಿಸಬಹುದು.
8. ಇಲ್ಲಿ ಪ್ರಜೆಗಳೂ, ತಮ್ಮ ಕಡೆಯಿಂದ ಶಿಸ್ತು ಪಾಲಿಸುವುದು ಅತೀ ಅವಶ್ಯ. ಪ್ರತಿನಿಧಿಯ ಖಾಸಗಿ ಹಾಗು ವೈಯಕ್ತಿಕ ವಿಚಾರದಲ್ಲಿ ಅಥವಾ ಸಮಯದಲ್ಲಿ ಹಸ್ತಕ್ಷೇಪ ಮಾಡಬಾರದು. ಅವನ/ಅವಳ ಮನೆಗೆ ಹೋಗುವ ಸಂಸ್ಕೃತಿ ಸಂಪೂರ್ಣ ನಿಲ್ಲಬೇಕು. ಅವನೂ/ಅವಳೂ ನಮ್ಮ ಹಾಗೆ ಒಬ್ಬ ಪ್ರಜೆ ಹಾಗು ಅವರಿಗೂ ಸ್ವಂತ ಕುಟುಂಬ ಹಾಗು ಖಾಸಗಿ ವಿಷಯ/ಸಮಯ ಬೇಕಾಗುವುದು.
9. ಮೂರು ತಿಂಗಳಿಗೆ ಒಮ್ಮೆ ಅಥವಾ ಆರು ತಿಂಗಳಿಗೆ ಒಮ್ಮೆ, ವಿಧಾನಸಭಾ ಸದಸ್ಯರು, ತಮ್ಮ ಕ್ಷೇತ್ರದ ಎಲ್ಲಾ ಪ್ರತಿನಿಧಿಗಳ ಸಭೆ ನಡೆಸಬೇಕು ಹಾಗು ಇದರ ಖರ್ಚು ಸರಕಾರದಿಂದ ಆಗಬೇಕು. ಅವನ/ಅವಳ ಕ್ಷೇತ್ರದ ಗ್ರಾಮ ಪಂಚಾಯಿತಿ ಸದಸ್ಯರು, ತಾಲೂಕು ಪಂಚಾಯಿತಿ ಸದಸ್ಯರು, ಜಿಲ್ಲಾ ಪಂಚಾಯಿತಿ ಸದಸ್ಯರು, ಕೌನ್ಸಿಲರು ಹಾಗು ಕಾರ್ಪೊರೇಟರ್ಗಳನ್ನು ಈ ಸಭೆಗೆ ಅಹ್ವಾನಿಸಬೇಕು. ನೆನಪಿರಲಿ, ಅವರೆಲ್ಲರೂ ಪ್ರಜೆಗಳ ಪ್ರತಿನಿಧಿಗಳು (ಯಾವುದೇ ಪಕ್ಷದವರಾಗಿರಲಿ, ಚುನಾಯಿಸಿ ಬಂದ ಮೇಲೆ ಅವರು ಪ್ರಜೆಗಳಿಗೆ ಜವಾಬ್ದಾರರು). ಅವರೊಡನೆ ಕ್ಷೇತ್ರದ ಅಭಿವೃಧ್ಧಿಯ ವಿಷಯ ವಿಮರ್ಶೆ ಆಗಬೇಕು. ಆ ಕ್ಷೇತ್ರದ ಲೋಕಸಭಾ ಸದಸ್ಯ, ವಿಧಾನ ಪರಿಷತ್ ಸದಸ್ಯ ಹಾಗು ರಾಜ್ಯ ಸಭಾ ಸದಸ್ಯರನ್ನು ಅತಿಥಿಯಾಗಿ ಕರೆಯಬಹುದು.
ಇದರಿಂದ ಸಂಪೂರ್ಣ ಕ್ಷೇತ್ರದಲ್ಲಿ ನಡೆಯಬೇಕಾದ ಅಭಿವೃಧ್ಧಿ ಹಾಗು ಅವಶ್ಯಕತೆಗಳ ನೇರ ವಿವರಗಳು ಲಭ್ಯವಾಗುವುದು. ಅಷ್ಟೇ ಅಲ್ಲ, ಕೆಲವೊಂದು ತುರ್ತು ಪರಿಸ್ಥಿತಿ (ಕೊರೋನಾ ಪೆಂಡಮಿಕ್)ಯ ಸಮಯದಲ್ಲಿ, ಪ್ರತಿಯೊಂದು ಪ್ರಜೆಗಳ ಅವಶ್ಯಕತೆಗಳನ್ನು ನೇರವಾಗಿ ತಿಳಿಯಬಹುದು ಹಾಗು ಅವರಿಗೆ ಬೇಕಾದ ತುರ್ತು ವ್ಯವಸ್ಥೆಯನ್ನು, ಈ ಪ್ರತಿನಿಧಿಗಳ ಮೂಲಕ ನೇರವಾಗಿ ತಲುಪಿಸಬಹುದು. ಇಂತಹ ಸಭೆಗಳಿಗೆ, ತಹಶೀಲ್ದಾರರನ್ನು ಹಾಗು ಜಿಲ್ಲಾಧಿüಕಾರಿಯನ್ನೂ ಅತಿಥಿಯಾಗಿ ಕರೆಯಬಹುದು. ಈ ಪ್ರತಿನಿಧಿಗಳ ಮೂಲಕ ಪ್ರತಿಯೊಬ್ಬ ಪ್ರಜೆಯ ಮೊಬೈಲ್ ಸಂಖ್ಯೆ ಪಡೆದು, ಕ್ಷೇತ್ರವಾರು ವಾಟ್ಸ್ ಆ್ಯಪ್ ಮಾಡಿ, ಎಲ್ಲರನ್ನೂ ಸಂಪರ್ಕದಲ್ಲಿ ಇಟ್ಟುಕೊಳ್ಳಬಹುದು. ಮುಂದೆ, ಪ್ರಜೆಗಳಿಂದ ಅಭಿಪ್ರಾಯ ತಿಳಿಯಲು, ಇದು ಉಪಯೋಗವಾಗುವುದು.
ಈ ಪ್ರಕ್ರಿಯೆ, ಚಮತ್ಕಾರವನ್ನೆ ಸೃಷ್ಟಿಸಲಿದೆ ಹಾಗು ಒಂದು ದೊಡ್ಡ ಟೀಮ್ ಸೃಷ್ಟಿ ಆಗುವುದು. ಪ್ರತೀ ಹಳ್ಳಿ ಪ್ರದೇಶದ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 600 ರಿಂದ 1000 ಪ್ರತಿನಿಧಿಗಳು ಇರುವರು. ಕೇವಲ ಪಟ್ಟಣ ಪ್ರದೇಶದಲ್ಲಿ, 10 ರಿಂದ 40 ಪ್ರತಿನಿಧಿಗಳು (ಕೌನ್ಸಿಲರ್/ಕಾರ್ಪರೇಟರ್) ಗಳು ಇರುವರು. ಬೆಂಗಳೂರಿನAತಹ ಬೃಹತ್ ಪಟ್ಟಣಗಳಲ್ಲಿ ಕೇವಲ 10 ಕಾರ್ಪೊರೇಟರ್ಗಳು ಸಿಗುವರು.
10. ವಿಧಾನಸಭಾ ಸದಸ್ಯ, ವಿಧಾನ ಪರಿಷತ್ ಸದಸ್ಯ, ಲೋಕಸಭಾ ಸದಸ್ಯ ಹಾಗು ರಾಜ್ಯಸಭಾ ಸದಸ್ಯರುಗಳು ತಮ್ಮ ಖಾಸಗಿ ಸಮಯದಲ್ಲಿ ಮಾರ್ಕೇಟ್ ಅಥವಾ ಸಾರ್ವಜನಿಕ ಪ್ರದೇಶದಲ್ಲಿ ಕಾಣಿಸಿಕೊಂಡರೆ, ಯಾವ ಪ್ರಜೆಯೂ ಅವರನ್ನು ಸಂಪರ್ಕಿಸಬಾರದು ಹಾಗು ಅವರ ಖಾಸಗಿ ಸಮಯವನ್ನು, ಅವರಿಗೆ ಬೇಕಾದ ಹಾಗೆ, ಅವರು ತಮ್ಮ ಕುಟುಂಬದೊAದಿಗೆ ಉಪಯೋಗಿಸುವಂತೆ ಆಗಬೇಕು. ಅವರಿಗೆ, ಯಾವುದೇ ಸ್ಪೆಷಲ್ ಟ್ರೀಟ್ಮೆಂಟ್ ಇರಬಾರದು. ಅವರೂ, ಸಾಮಾನ್ಯ ಪ್ರಜೆಗಳಂತೆ ಸಾರ್ವಜನಿಕ ಪ್ರದೇಶದಲ್ಲಿ ತಿರುಗುವಂತಾಗಬೇಕು. ಆಗ ಯಾವ ಸೆಕ್ಯುರಿಟಿ ಅವಶ್ಯಕತೆ ಇರುವುದಿಲ್ಲ. ಇದು ಪ್ರಜೆಗಳ ಜವಾಬ್ದಾರಿ.
11. ಪ್ರಜೆಗಳು ಅಥವಾ ಯಾವುದೇ ಸಂಸ್ಥೆಗಳು, ಇವರನ್ನು ಆಮಂತ್ರಿಸುವಾಗ ಸಮಯದ ಅರಿವು ಮಾಡಿಕೊಂಡು, ಅವರ ಖಾಸಗಿ ಸಮಯದಲ್ಲಿಯೇ ಇರುವ ಕಾರ್ಯಕ್ರರ್ಮಗಳಿಗೆ ಅಮಂತ್ರಿಸಬೇಕು.
12. ನಾವು ಪ್ರಜೆಗಳು ಕೂಡಾ, ಯಾವುದೇ ರೀತಿಯ ಅನೈತಿಕ, ಕಾನೂನು ಬಾಹಿರ ಹಾಗು ಭ್ರಷ್ಟಚಾರ ರೀತಿಯಲ್ಲಿ ಮಾಡುವ ಕಾರ್ಯವನ್ನು ಅವರಿಂದ ಮಾಡಿಸಲು, ಅವರ ಮೇಲೆ ಒತ್ತಡ ಹೇರಬಾರದು.
13. ಪ್ರತಿನಿಧಿಯ ಕಚೇರಿಯಲ್ಲಿ, ಒಂದು ರಿಜಿಸ್ಟರ್ನಲ್ಲಿ ಎಲ್ಲಾ ಪ್ರಜೆಗಳ ದೂರು ದಾಖಲಾಗಬೇಕು. ಅದನ್ನು ಸಮಯ-ಸಮಯಕ್ಕೆ ಪರಿಶೀಲಿಸಿ, ಆ ದೂರುಗಳಿಗೆ ಸರಿಯಾದ ಪರಿಹಾರ ಮಾಡುವಂತಿರಬೇಕು. ಇದು, ಮುಂದೆ, ಪ್ರತಿನಿಧಿಯ ಕೆಲಸದ ವಿಷಯ, ಪ್ರಜೆಗಳಲ್ಲಿ ಪೋಲಿಂಗ್ ಮಾಡುವಾಗ ಅತೀ ಉಪಯುಕ್ತವಾಗುವುದು. ಬೇಕಾದರೆ, ಅದಕ್ಕೆ ಒಂದು ಫಾರ್ಮೇಟ್ ಮಾಡಿ, ಅದರಲ್ಲಿ ಪ್ರಜೆಗಳ ದೂರು ಬರೆಯಲು ಹೇಳಿ, ಅವರ ಎಲ್ಲಾ ವಿವರಗಳನ್ನು ನಮೂದಿಸಿರಬೇಕು. ಅದನ್ನು ನಿಯಮಿತವಾಗಿ ಫೈಲ್ ಮಾಡಬೇಕು. ಅದರ ಪರಿಹಾರ ಕಂಡುಕೊAಡ ಮೇಲೆ, ಅದನ್ನು ಬೇರೆ ಫೈಲ್ಗೆ ಹಾಕಬೇಕು. ಅದೇ, ಮುಂದೆ, ಪ್ರತಿನಿಧಿಯ ಸಾಧನೆ ಆಗುವುದು.
14. ಗ್ರಾಮ ಪಂಚಾಯಿತಿ ಸದಸ್ಯ, ತಾಲೂಕು ಪಂಚಾಯಿತಿ ಸದಸ್ಯ, ಜಿಲ್ಲಾ ಪಂಚಾಯಿತಿ ಸದಸ್ಯ, ಕೌನ್ಸಿಲರ್ ಹಾಗು ಕಾರ್ಪರೇಟರ್ಗಳಿಗೆ ಅವರ ಕುಟುಂಬ ನಡೆಸುವಷ್ಟು ಸಂಭಾವನೆ ಸಿಗುವಂತೆ ಸರಕಾರದ ಮೂಲಕ ಪ್ರಯತ್ನಿಸಬೇಕು. ಇದು, ಅತೀ ಅವಶ್ಯ ಇರುವುದು.
15. ಎಲ್ಲಾ ತಾಲೂಕು ಕೇಂದ್ರ ಹಾಗು ಜಿಲ್ಲಾ ಕೇಂದ್ರಗಳು ನಗರ-ಪಟ್ಟಣಗಳಾಗಿ ಪರಿವರ್ತನೆ ಆಗಿರುವುದು. ಅಲ್ಲಿ, ಈಗಾಗಲೆ, ಕೌನ್ಸಿಲರ್ ಅಥವಾ ಕಾರ್ಪರೇಟರ್ಗಳು ಇರುವುದರಿಂದ, ತಾಲೂಕು ಪಂಚಾಯಿತಿ ಹಾಗು ಜಿಲ್ಲಾ ಪಂಚಾಯಿತಿಯನ್ನು ಸಂಪೂರ್ಣ ತೆಗೆದು ಹಾಕಬೇಕು. ಇಲ್ಲಿಯ ಸ್ಥಳಿಯ ಆಡಳಿತ ಮಾಡಲು ಟೌನ್ ಪಂಚಾಯಿತಿ, ನಗರಸಭೆ ಹಾಗು ನಗರ ಪಾಲಿಕೆಗಳು ಇರುವುದು. ಸರಕಾರದ ಎಲ್ಲಾ ಅನುದಾನಗಳು ಕೇವಲ ಗ್ರಾಮ ಪಂಚಾಯಿತಿ ಹಾಗು ಪಟ್ಟಣ-ನಗರ ಸಭೆಗಳಿಗೆ ಬರುವುದರಿಂದ, ಇವುಗಳ ಅವಶ್ಯಕತೆಯೇ ಇರುವುದಿಲ್ಲ. ಇದನ್ನು ತೆಗೆದು ಹಾಕಿದರೆ, ಕರ್ನಾಟಕದಲ್ಲಿ ಸುಮಾರು 6,000 ಪ್ರತಿನಿಧಿಗಳು ಕಡಿಮೆ ಆಗುವರು. ಕೋಟಿಗಟ್ಟಲೆ ಇವರ ಚುನಾವಣೆಗೆ ಸರಕಾರದಿಂದ ಆಗುವ ಖರ್ಚು- ವೆಚ್ಚ ಉಳಿತಾಯವಾಗುವುದು. ಬಹುಶ, ಪಂಚಾಯಿತಿ ರಾಜ್ಯ ಕಾನೂನು 1993 ರಲ್ಲಿ ಬದಲಾವಣೆ ಮಾಡಬೇಕಾಗುವುದು ಹಾಗು ಭಾರತದ ಸಂವಿಧಾನದ 73 & 74 ಅದಿನಿಯಮದಂತೆ ಇದಕ್ಕೆ ಮಾನ್ಯತೆ ಸಿಗಬೇಕಾಗುವುದು.
16. ಪ್ರತಿಯೊಬ್ಬ ವಿಧಾನಸಭಾ ಸದಸ್ಯರು ಕಂಪ್ಯೂಟರ್ ಉಪಯೋಗಿಸುವಷ್ಟು ತರಬೇತಿ ಪಡೆದಿರಬೇಕು. ಆದ್ದರಿಂದ ಚುನಾವಣೆ ನಿಲ್ಲುವ ಪ್ರತಿ ಉ.ಪಿ.ಪಿ. ಅಭ್ಯರ್ಥಿಯು ಕಂಪ್ಯೂಟರ್ ಉಪಯೋಗಿಸುವ ಬೇಸಿಕ್ ತರಬೇತಿ ಪಡೆದು ಕೊಂಡಿರಬೇಕು. ಇದು ಅತೀ ಅವಶ್ಯ. ಮುಂದೆ ಎಲ್ಲವೂ ಕಂಪ್ಯೂಟರ್ ಮುಖಾಂತರವೇ ನಡೆಯುವುದು.
17. ಸರಕಾರದ ಯಾವುದೇ ಯೋಜನೆಯಲ್ಲಿ ಪ್ರತಿನಿಧಿ ಅಥವಾ ಪಕ್ಷದ ಹೆಸರು ಹಾಕಬಾರದು. ಪ್ರಜೆಗಳ ಹಣದಿಂದ ಮಾಡುವ ಯೋಜನೆಗಳಲ್ಲಿ, ಪ್ರಜೆಗಳ ಅಭಿಪ್ರಾಯದಂತೆ ಹೆಸರು ಹಾಕಬೇಕು ಅಥವಾ ನಾನು ಮಾಡಿದ್ದು, ನನ್ನ ಪಕ್ಷ ಮಾಡಿದ್ದು ಎಂದು ಖಂಡಿತಾ ಹೇಳುವಂತಿಲ್ಲ. ಪ್ರಜೆಗಳಿಗೆ ಬೇಕಾದಂತೆ, ಅವರು ಮಾಡಿಸಿಕೊಂಡಿದ್ದಾರೆ ಎಂದು ಹೇಳಬೇಕು. ಪ್ರತಿನಿಧಿಯ ಕೆಲಸವನ್ನು ಪ್ರಜೆಗಳು ಒಪ್ಪಿ, ಅವರು ಅದನ್ನು ಹೊಗಳಿದಾಗಲೇ ಪ್ರತಿನಿಧಿ ತೃಪ್ತಿ ಪಡಬೇಕು.
18. ಚುನಾಯಿಸಿ ಬಂದ ಕೂಡಲೇ, ಎಲ್ಲಾ ಮುಖ್ಯ ಸರಕಾರಿ ಅಧಿಕಾರಿಗಳ ಟೆಲಿಫೋನ್ ಸಂಖ್ಯೆ ಸಂಗ್ರಹಿಸಬೇಕು. ಬಹುಶ, ಇವುಗಳೆಲ್ಲಾ, ಜಿಲ್ಲಾಧಿಕಾರಿ ಕಚೇರಿಯಿಂದ ಲಭ್ಯ ಆಗಬಹುದು. ಕ್ಷೇತ್ರದ ಪೊಲೀಸ್ ಕೇಂದ್ರಗಳ ಟೆಲಿಫೋನ್ ಸಂಖ್ಯೆಗಳನ್ನು ಪಡೆದುಕೊಳ್ಳಬೇಕು. ಗ್ರಾಮ ಪಂಚಾಯಿತಿ ಹಾಗು ಕೌನ್ಸಿಲರ್- ಕಾರ್ಪೊರೇಟರ್ಗಳನ್ನು ಉಪಯೋಗಿಸಿ, ಕ್ಷೇತ್ರದ ಪ್ರಜೆಗಳ ಮೊಬೈಲ್ ಹಾಗು ವಾಟ್ಸ್ ಆಪ್ ಸಂಖ್ಯೆ ಸಂಗ್ರಹಿಸಿ, ವಾಟ್ಸ್ ಆ್ಯಪ್ ಗ್ರೂಪ್ಗಳನ್ನು ಮಾಡಬೇಕು. ಪ್ರಜೆಗಳ ಅಭಿಪ್ರಾಯ ತಿಳಿಯಲು, ಇವುಗಳನ್ನು ಉಪಯೋಗಿಸಬಹುದು. ಇದು ಅತೀ ಅವಶ್ಯ. ಮೊಬೈಲ್ ಸಂಖ್ಯೆ ಸಂಗ್ರಹಿಸಲು ಒಂದು ಸ್ವರೂಪ ಮಾಡಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಹಾಗು ಕೌನ್ಸಿಲರ್/ಕಾರ್ಪೋರೇಟರ್ಗಳಿಗೆ ಕೊಟ್ಟು ಪ್ರಜೆಗಳ ಹೆಸರು, ಮೊಬೈಲ್ ಸಂಖ್ಯೆ ಸಂಗ್ರಹಿಸಬೇಕು. ಅವುಗಳಿಗೆ, ಒಮ್ಮೆಲೆ ಸಂಪರ್ಕಿಸುವAತೆ, ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು.
19. ತಮ್ಮ ಕ್ಷೇತ್ರದಲ್ಲಿರುವ ಸರಕಾರಿ ಶಾಲೆ, ಕಾಲೇಜು, ಆರೋಗ್ಯ ಕೇಂದ್ರ, ಆಸ್ಪತ್ರೆಗಳಿಗೆ, ಪೊಲೀಸ್ ಕೇಂದ್ರಗಳಿಗೆ ಹಾಗು ಸಾರ್ವಜನಿಕ ವ್ಯವಸ್ಥೆಗಳಿಗೆ, ಸಮಯ-ಸಮಯಕ್ಕೆ ಭೇಟಿ ಕೊಟ್ಟು, ಅಲ್ಲಿಯ ನೂನ್ಯತೆಯನ್ನು ಸರಕಾರಕ್ಕೆ ಮನದಟ್ಟು ಮಾಡಿ, ಅಲ್ಲಿಯ ಸುಧಾರಣೆ ಆಗಬೇಕು.
20. ಮೊದಲ ಆದ್ಯತೆ, ಪ್ರಜೆಗಳ ಮೂಲಭೂತ ಸೌಕರ್ಯಗಳಾದ ನೀರು, ವಿಧ್ಯುತ್, ವಿಧ್ಯಾಭ್ಯಾಸ, ಆರೋಗ್ಯ, ಆಹಾರ, ವಸತಿ ಹಾಗು ಕಸ ವಿಲೆವಾರಿಗಳಿಗೆ ಕೊಡಬೇಕು.
21. ಚುನಾಯಿತ ಪ್ರತಿನಿಧಿಯು ಸಾರ್ವಜನಿಕ ಪ್ರದೇಶದಲ್ಲಿ ಬೇರೆ ಪ್ರಜೆಗಳಂತೆ ವರ್ತಿಸಬೇಕು. ತನ್ನ ಸ್ವಂತ ಕೆಲಸಕ್ಕಾಗಿ, ಯಾವುದೇ ಫೇವರ್ ಕೇಳಬಾರದು. ಆಗ ಎಲ್ಲಾ ಪ್ರಜೆಗಳೂ, ಶಿಸ್ತು ಪಾಲಿಸುವರು. ಇದು ಭ್ರಷ್ಟಾಚಾರವನ್ನು ನಾಶ ಮಾಡುವ ಮೊದಲ ಹೆಜ್ಜೆ ಆಗುವುದು. ಚುನಾಯಿತ ಪ್ರತಿನಿಧಿಯು ಎಲ್ಲರಿಗೂ ಮಾದರಿ ಆಗಬೇಕು.
ಜೈ ಪ್ರಜಾಕೀಯ
ಜೈ ಉತ್ತಮ ಪ್ರಜಾಕೀಯ ಪಕ್ಷ (ಉ.ಪಿ.ಪಿ.).