ಲಾರಿ ಹಾಗೂ ಓಮ್ನಿ ನಡುವೆ ಅಪಘಾತ ಸ್ಥಳದಲ್ಲೇ 2 ಸಾವು, ಇಬ್ಬರ ಸ್ಥಿತಿ ಗಂಭೀರ

ಜಗಳೂರು:  ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಹೊಸಕೇರೆ ಗ್ರಾಮದ  ಬಳಿ ಲಾರಿ ಹಾಗೂ ಓಮಿನಿ ನಡುವೆ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇಬ್ಬರಿಗೆ ಗಂಭೀರ ಗಾಯ ಗೊಂಡಿರುವ ಘಟನೆ ಶನಿವಾರ ನಡೆದಿದೆ.

ಒಮ್ನಿ ವಾಹನದ ಚಾಲಕ ಹನುಮಂತಪ್ಪ (38), ಹಾಗೂ ಹಾಲಪ್ಪ – (60) ಮೃತ ದುರ್ದೈವಿಗಳು. ಮೃತ ಹಾಲಪ್ಪ ನವರ ಮಗಳು ಹಾಗೂ ಮೊಮ್ಮಗಳಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಜಗಳೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಗಳೂರು ಕಡೆಯಿಂದ ಕೊಟ್ಟರೂ ಕಡೆಗೆ ಹೊಗುತಿದ್ದ ಲಾರಿ ಹಾಗೂ ಚಿಕ್ಕ ಉಜ್ಜನಿಯಿಂದ ಜಗಳೂರು ಕಡೆಗೆ ಬರುತಿದ್ದ ಓಮ್ನಿ ವಾಹಕ್ಕೆ ಲಾರಿ ಡಿಕ್ಕಿ ಹೊಡೆದು, ಹೊಸಕೆರೆ ಕೃಷಿ ಇಲಾಖೆ ಕಚೇರಿ ಕಾಂಪೌಂಡ್ ಗೆ ಡಿಕ್ಕಿ ಹೊಡೆದಿದೆ.  ಲಾರಿ ಚಾಲಕನ ಅಜಾಗುರುಕತೆಯಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು. ಈ ಘಟನೆ ಸಂಭಂದ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!