ಮುಖ್ಯಮಂತ್ರಿಗಳೆ ಪತ್ರಿಕಾ ವಿತರಕರು ಎಂದರೆ ಇಷ್ಟು ನಿರ್ಲಕ್ಷ ಏಕೆ..? – ಎ ಎನ್ ಕೃಷ್ಣಮೂರ್ತಿ

ದಾವಣಗೆರೆ: ಕರ್ನಾಟಕ ರಾಜ್ಯದ ಎಲ್ಲಾ ಪತ್ರಿಕಾ ವಿತರಕರಿಂಧ ಮಾನ್ಯ ಮುಖ್ಯಮಂತ್ರಿಗಳೇ ಪ್ರತಿದಿನ ನಿಮ್ಮ ಕಚೇರಿ ಗೆ ನಿಮ್ಮ ಮನೆ ದಿನಪತ್ರಿಕೆ ಹಾಕುವ ವರ್ಗವನ್ನೆ ಮರೆತುಬಿಟ್ಟಿದ್ದೀರಾ. ಕರೋನ ಸಮಯದಲ್ಲಿ ವಿತರಕರ ನಿಮ್ಮ ಮನೆಬಾಗಿಲಿಗೆ ಪತ್ರಿಕೆ ಹಾಕಿಲ್ಲವಾ. ಕರೋನ ಸಮಯದಲ್ಲಿ ದಿನಪತ್ರಿಕೆ ವಿತರಕರು ಮನೆ ಬಾಗಿಲಿಗೆ ಕರೋನವನ್ನೆ ಎದುರಿಸಿ ತಲುಪಿಸಿದ್ದಾರೆ.ಯಾಕೆ ಅಷ್ಟು ಕಡೆಗಣೆ ಮಾಡುತ್ತೀರಾ.
ನಮ್ಮಲ್ಲಿ ಸಾಕಷ್ಟು ಸಾವು ನೋವು ಗಳಾಗಿದ್ದರು ಕರೋನಾ ಸಂದರ್ಭದಲ್ಲಿ ಯಾವುದೇ ರೀತಿ ದೃತಿಗೆಡದೆ ನಮ್ಮ ಜೀವನಾಂಶವನ್ನು ನಾವೇ ದುಡಿದು ಸ್ವಾಭಿಮಾನದಿಂದ ಬದುಕಿದ್ದೆವು ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ದಿನಪತ್ರಿಕೆಗಳ ಪ್ರಸರಣಕ್ಕೆ ಶ್ರಮಿಸುತ್ತಿರುವ ಪತ್ರಿಕಾ ವಿತರಕರ ಕಲ್ಯಾಣಕ್ಕಾಗಿ ಬಜೆಟ್ ಕಾರ್ಯಕ್ರಮ ಘೋಷಿಸಲಿ ಎಂದು ನಗರದ ಹಿರಿಯ ಪತ್ರಿಕಾ ವಿತರಕ “ಎ.ಎನ್ ಕೃಷ್ಣಮೂರ್ತಿ ” ಒತ್ತಾಯಿಸಿದ್ದಾರೆ ಅಭಿವೃದ್ಧಿ ಮಂಡಳಿ ಆರೋಗ್ಯ ಸೇವೆ ನಿರೀಕ್ಷೆ ಇದೆ ಹೆಚ್ಚುವರಿ ಬಜೆಟ್ನಲ್ಲಿ ಆದರೂ ಘೋಷಣೆಯನ್ನು ಮಾಡಿರಿ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ ನಿಮ್ಮ ಈ ಬಜೆಟ್ಗೆ ಪತ್ರಿಕಾ ವಿತರಕರ ಕಡಗಣನೆ ಮಾಡಿರುವುದು ಇದು ಎಷ್ಟರಮಟ್ಟಿಗೆ ಸರಿ ಎಂದು ತಾವೇ ಯೋಚಿಸಿ ಕೊರೋನಾ ಸಂದರ್ಭದಲ್ಲಿ ತಮ್ಮ ಸುದ್ದಿಗಳನ್ನು ಮನೆ ಮನೆಗೆ ತಲುಪಿಸಿದ ಸರ್ಕಾರದ ಸುದ್ದಿಗಳನ್ನು ಪ್ರಪಂಚದ ಎಲ್ಲಾ ಸುದ್ದಿಗಳನ್ನು ಮನೆ ಮನೆಗೆ ತಲುಪಿಸಿದ ಹೆಗ್ಗಳಿಕೆ ಪತ್ರಿಕಾ ವಿತರಕರಾದ ನಮ್ಮದು ಪತ್ರಕರ್ತರು ಎಷ್ಟೇ ಸುದ್ದಿ ಮಾಡಬಹುದು ಮನೆ ಮನೆಗೆ ತಲುಪಿಸುವ ನಮ್ಮನ್ನು ಕಡೆಗಣಿಸಿದ್ದು ಎಷ್ಟರ ಮಟ್ಟಿಗೆ ಸರಿ.