ಸರ್ಕಾರ 18ರಿಂದ 45 ವರುಷದ ಒಳಗಿನವರಿಗೆ ಲಸಿಕೆ ನೀಡಲು ಒಪ್ಪಿದರೆ ನಾವು ಸಹ ಉಚಿತವಾಗಿ ಲಸಿಕೆ ನೀಡಲು ಡಾ|| ಶಾಮನೂರು ಶಿವಶಂಕರಪ್ಪ

ದಾವಣಗೆರೆ: ದಾವಣಗೆರೆ ಮಹಾಜನತೆಗೆ ಉಚಿತವಾಗಿ ಕೋವಿಶೀಲ್ಡ್ ಲಸಿಕೆ ನೀಡುತ್ತಿದ್ದು, ಸರ್ಕಾರದ ಸೂಚನೆಯಂತೆ 45 ವರುಷದ ಮೇಲ್ಪಟ್ಟವರಿಗೆ ಮಾತ್ರ ನೀಡಲಾಗುತ್ತಿದ್ದು, ಸರ್ಕಾರ 18ರಿಂದ 45 ವರುಷದ ಒಳಗಿನವರಿಗೆ ಲಸಿಕೆ ನೀಡಲು ಒಪ್ಪಿದರೆ ನಾವು ಸಹ ಉಚಿತವಾಗಿ ಲಸಿಕೆ ನೀಡಲು ಸಿದ್ದವಿರುವುದಾಗಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ತಿಳಿಸಿದ್ದಾರೆ.
ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಭಿಕಾ ದೇವಸ್ಥಾನದ ಬಳಿ ಕಳೆದ 2 ದಿನಗಳ ಹಿಂದೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರೇ ಲಸಿಕೆ ಪಡೆಯುವ ಮೂಲಕ ಉದ್ಘಾಟಿಸಿದ್ದು, ಈಗಾಗಲೇ 45ವರುಷ ಮೇಲ್ಪಟ್ಟ ಸಾವಿರಾರು ಜನರು ಮೊದಲ ಹಂತದ ಲಸಿಕೆ ಪಡೆದಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ.
18ರಿಂದ 45 ವರುಷದ ಒಳಗಿನವರಿಗೆ ಲಸಿಕೆ ನೀಡುವಂತೆ ಸಾಕಷ್ಟು ಬೇಡಿಕೆ ಇದೆ ಸರ್ಕಾರವೂ ಸಹ 18ರಿಂದ 45 ವರುಷದ ಒಳಗಿನವರಿಗೆ ಲಸಿಕೆ ನೀಡದಂತೆ ನಿರ್ಬಂಧ ಹೇರಿದ್ದು, ಇದನ್ನು ತೆರವುಗೊಳಿಸಿದರೆ ನಾವು 18ರಿಂದ 45 ವರುಷದ ಒಳಗಿನವರಿಗೆ ಲಸಿಕೆ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಯುವ ಜನ ಈ ದೇಶ ನಿರ್ಮಾಣದಲ್ಲಿ ಬಹು ಪ್ರಮುಖ ಪಾತ್ರ ವಹಿಸಲಿದ್ದು, ಇದನ್ನು ದೃಷ್ಠಿಯಲ್ಲಿಟ್ಟುಕೊಂಡು ಸರ್ಕಾರ 18ರಿಂದ 45 ವರುಷದ ಒಳಗಿನವರಿಗೆ ಲಸಿಕೆ ನೀಡಲು ಅನುಮತಿ ನೀಡಬೇಕು ಹಾಗೂ ಸರ್ಕಾರವೂ ಸಹ ಎಲ್ಲಾ ಕಡೆಗಳಲ್ಲಿ 18ರಿಂದ 45 ವರುಷದ ಒಳಗಿನವರಿಗೆ ಲಸಿಕೆ ನೀಡಬೇಕೆಂದು ಆಗ್ರಹಿಸಿದ್ದಾರೆ.