ಭೀಮಸಮುದ್ರದಲ್ಲಿ ಕೋವಿಡ್ ಲಸಿಕೆ ಹಾಕುವ ಅಭಿಯಾನಕ್ಕೆ ಚಾಲನೆ ನೀಡಿದ ಸಂಸದ ಜಿ.ಎಂ. ಸಿದ್ದೇಶ್ವರ್.

gm_siddeshwar_bhimasamudra_vaccination[1]

ಚಿತ್ರದುರ್ಗ: ಚಿತ್ರದುರ್ಗದ ಭಿಮಸಮುದ್ರ ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಭೀಮಸಮುದ್ರ ಗ್ರಾ.ಪಂ. ಸಂಯುಕ್ತಾಶ್ರಯದಲ್ಲಿ 18+ ಮೇಲ್ಪಟ್ಟವರಿಗೆ ಮುಂಚೂಣಿ ವರ್ಗದ ಕಾರ್ಯಕರ್ತರುಗಳಿಗೆ ಕೋವಿಡ್ ಲಸಿಕೆ ಅಭಿಯಾನವನ್ನು ಭಿಮಸಮುದ್ರದ ತರಳಬಾಳು ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕೇಂದ್ರ ಮಾಜಿ ಸಚಿವರು ಹಾಗೂ ದಾವಣಗೆರೆ ಸಂಸದರಾ ಜಿ.ಎಂ. ಸಿದ್ದೇಶ್ವರ್ ರವರು ಚಾಲನೆ ನೀಡುವ ಮೂಲಕ ದಿನದಿಂದ ದಿನಕ್ಕೆ ಕರೋನಾ ಗ್ರಾಮಗಳಲ್ಲಿ ಹೆಚ್ಚಾಗುತ್ತಿದ್ದು, ಕರೋನ ನಿಯಂತ್ರಣಕ್ಕೆ ನಮ್ಮ ಗ್ರಾಮ ಪಂಚಾಯ್ತಿ ಸಕಲ ಸಿದ್ದತೆ ಮಾಡಿದ್ದಾರೆ. ಜನರಲ್ಲಿ ಕರೋನಾ ಬಗ್ಗೆ ಭಯಬೇಡ ಎಲ್ಲರೂ ಲಸಿಕೆ ಹಾಕಿಸಿ ಸರ್ಕಾರದ ನಿಯಮ ಪಾಲಿಸಿ ಕರೋನಾದಿಂದ ನಮ್ಮ ಗ್ರಾಮವನ್ನು ಮುಕ್ತಗೊಳಿಸಿ ಎಂದು ಗ್ರಾಮಸ್ಥರಿಗೆ ತಿಳಿಸುವುದರ ಮೂಲಕ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಸಂಸದರ ಪುತ್ರ ಅನಿತ್‍ರವರು ಶ್ರೀಮತಿ ಹಾಲಮ್ಮ ಮಲ್ಲಿಕಾರ್ಜುನಪ್ಪ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಶ್ರೀತರಳಬಾಳು ಕಲ್ಯಾಣ ಮಂಟಪದಲ್ಲಿ ಕರೋನಾ ರೋಗಿಗಳಿಗೆ 40 ಹಾಸಿಗೆಯುಳ್ಳ ಕೋವಿಡ್ ಕೇರ್ ಸೆಂಟರ್ ರೋಗಿಗಳ ಸೇವೆಗೆ ಸಕಲ ಸಿದ್ದವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿ.ಜೆ.ಪಿ. ಅಧ್ಯಕ್ಷರಾದ ಎ.ಮುರುಳಿ, ಆರೋಗ್ಯಾಧಿಕಾರಿಗಳಾದ ಮೊಹಮ್ಮದ್ ಸೌದಿಕುಲ್ಲಾ ಷರೀಫ್, ಭೀಮಸಮುದ್ರ ಗ್ರಾ.ಪಂ. ಅಧ್ಯಕ್ಷರಾದ ಪಾರ್ವತಮ್ಮ, ಉಪಾಧ್ಯಕ್ಷರಾದ ಶರತ್ ಪಾಟೀಲ್, ಸದಸ್ಯರಾದ ಅಶೋಕ್, ರಮೇಶ್ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!