ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆಡಳಿತ ವೈಫಲ್ಯ ಜೀವನ ನಡೆಸಲು ಪರದಾಡುತ್ತಿರುವ ಸಾರ್ವಜನಿಕರು – ಹರೀಶ್ ಬಸಾಪುರ

ದಾವಣಗೆರೆ: ಅಚ್ಚೇ ದಿನ್ ನೀಡುತ್ತೇವೆ ಎಂದು ಆಡಳಿತಕ್ಕೆ ಬಂದ ಕೇಂದ್ರ ರಾಜ್ಯ ಬಿಜೆಪಿ ಸರ್ಕಾರಗಳ ಆಡಳಿತ ವೈಫಲ್ಯದಿಂದ ಸಾರ್ವಜನಿಕರು ಜೀವನ ನಡೆಸಲು ಸಾಧ್ಯವಾಗದೆ ತತ್ತರಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದ ಅಧ್ಯಕ್ಷ ಕೆ.ಎಲ್.ಹರೀಶ್ ಬಸಾಪುರ ವಿಷಾದಿಸಿದ್ದಾರೆ. ಸಾರ್ವಜನಿಕರು ದಿನನಿತ್ಯ ಬಳಸುವ ಅಡಿಗೆ ಎಣ್ಣೆಯಿಂದ ಹಿಡಿದು ದಿನಸಿ ವಸ್ತುಗಳ ಬೆಲೆ ಗಗನಕ್ಕೇರಿದ್ದು ಹೀಗೆ ಮುಂದುವರೆದರೆ ಬಡವರು ಮೂರು ಹೊತ್ತಿನ ಊಟ ಮರೆತು ಉಪವಾಸದ ಜೀವನಕ್ಕೆ ಹೊಂದಿಕೊಳ್ಳುವ ದಿನ ದೂರವಿಲ್ಲ. ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲೆಂಡರ್ ಬೆಲೆಯಂತೂ ಕೈಗೆಟುಕದಂತಾಗಿದೆ ಮುಂದಿನ ದಿನಗಳಲ್ಲಿ ಜನರು ನಡೆದುಕೊಂಡು ಓಡಾಡುವ ಹಾಗೂ ಕಟ್ಟಿಗೆಯಿಂದ ಅಡಿಗೆ ಮಾಡುವ ದಿನ ದೂರವಿಲ್ಲ, ಬಿಜೆಪಿಯ ಎಂಟು ವರ್ಷದ ಸಾಧನೆ ಇದೆ ಎಂದರೆ ತಪ್ಪಾಗಲಾರದು.
ಮಧ್ಯಮ ವರ್ಗದವರು ತಮ್ಮ ಕನಸಿನ ಮನೆ ಕಟ್ಟೋಣವೆಂದರೆ ಇಟ್ಟಿಗೆ,ಸಿಮೆಂಟ್, ಕಬ್ಬಿಣ ದಿನದಿಂದ ದಿನಕ್ಕೆ ಬಿಜೆಪಿಯವರ ಸುಳ್ಳಿಗಿಂತ ವೇಗವಾಗಿ ಓಡುತ್ತಿದೆ. ರಷ್ಯಾ ಉಕ್ರೇನ್ ಯುದ್ಧದಿಂದ ಬೆಲೆ ಏರಿಕೆಯಾಗಿದೆ ಎಂದು ಬೆಲೆಯೇರಿಕೆಯನ್ನು ಸಮರ್ಥಿಸಿಕೊಳ್ಳುವ ಸರ್ಕಾರಗಳು, ಸತ್ಯ ಮರೆಮಾಚಿ ಸಾರ್ವಜನಿಕರಿಗೆ ವಂಚಿಸುತ್ತಿವೆ. ಅಭಿವೃದ್ಧಿಯ ವಿಷಯದ ಬಗ್ಗೆ ಚರ್ಚಿಸದೆ ಕೋಮು ದ್ವೇಷ ಬಿತ್ತುತ್ತ ಆಡಳಿತ ನಡೆಸುವವರು ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಸಾರ್ವಜನಿಕರನ್ನು ಕಾಪಾಡುವವರಾರು? ಇದಕ್ಕೆಲ್ಲ ತಾರ್ಕಿಕ ಅಂತ್ಯವನ್ನು ಮುಂದಿನ ಚುನಾವಣೆಯಲ್ಲಿ ಮತದಾರರು ತೀರ್ಮಾನಿಸದಿದ್ದಾರೆ, ಬರುವ ದಿನಗಳು ಇನ್ನು ಕಠಿಣವಾಗುವುದು ದೂರವಿಲ್ಲಾ, ಇದಕ್ಕೆಲ್ಲ ಮತದಾರರೇ ತಕ್ಕ ಉತ್ತರ ನೀಡಬೇಕಾಗಿದೆ ಎಂದು ತಿಳಿಸಿದರು.