ಪತ್ರಿಕಾ ವಿತರಕರನ್ನು ನಿರ್ಲಕ್ಷಿಸಿರುವ ಸರ್ಕಾರ ವಿರುದ್ದ ಪತ್ರಿಕಾ ವಿತರಕರಿಂದ ಜಾಥಾ ನಡಿಗೆ

5

ದಾವಣಗೆರೆ: ಪತ್ರಿಕೆ ಓದುಗರೇ ನಮ್ಮ ಅನ್ನದಾತರು, ಪತ್ರಿಕೆಯೇ ನಮ್ಮ ಜೀವನ, ಜೀವಾಳವಾಗಿದೆ. ಸರ್ಕಾರ ಎಲ್ಲ ವರ್ಗದವರಿಗೂ ನ್ಯಾಯವನ್ನು ಕೊಡುತ್ತಿದ್ದು ಪತ್ರಿಕಾ ವಿತರಕರಿಗೂ ಸಹಾ ನ್ಯಾಯ ಒದಗಿಸಬೇಕು. ಸುದ್ದಿಗಳನ್ನು ಮನೆ ಮನೆಗೆ ತಲುಪಿಸುವ ನಮ್ಮನ್ನು ಸರ್ಕಾರ ದಯವಿಟ್ಟು ನಿರ್ಲಕ್ಷ್ಯ ಮಾಡುವುದು ಬೇಡ. ಸರ್ಕಾರ ಬಜೆಟ್‌ನಲ್ಲಿ ಎಲ್ಲ ವರ್ಗದವರಿಗೂ ಸಿಹಿ ಹಂಚಿತು, ಆದರೆ ಪತ್ರಿಕಾ ವಿತರಕರಿಗೆ ಕಹಿ ಹಾಗಲಕಾಯಿ ಕೊಟ್ಟಿತು. ನಮ್ಮಗಳ ಮೇಲೆ ಇಷ್ಟೊಂದು ನಿರ್ಲಕ್ಷ್ಯ, ತಾತ್ಸಾರ ಮನೋಭಾವ ಬೇಡ ಎಂದು ಕೆ. ಶಂಭುಲಿಂಗಪ್ಪ ಹೇಳಿದರು.

ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ, ದಾವಣಗೆರೆ ನಗರ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಪತ್ರಿಕಾ ವಿತರಕರ ಸಮಾವೇಶ, ಕಾರ್ಯಕಾರಿಣಿ ಸಭೆ ಪ್ರಯುಕ್ತ ನಗರದ ಜಯದೇವ ವೃತ್ತದಿಂದ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಮಾತನಾಡಿದ ಅವರು, ನಾವು ಎಲ್ಲಿಯೂ, ಯಾವಾಗಲೂ ಉದ್ಘಟತನ ಪ್ರದರ್ಶನ ಮಾಡಿಲ್ಲ. ದಯವಿಟ್ಟು ಸರ್ಕಾರ ನಮಗೆ ನಿರ್ಲಕ್ಷ್ಯ ಮಾಡುವುದು ಬೇಡ. ಎಲ್ಲರ ಹೋರಾಟಗಳನ್ನು ನೋಡಿಕೊಂಡು ಬಂದಿರುವವರು ನಾವು. ಹೋರಾಟ, ಏನೇ ಇರಲಿ ಸುದ್ದಿಗಳನ್ನು ಪ್ರತಿದಿನ ಮನೆ ಮನೆಗೆ ತಲುಪಿಸುತ್ತೇವೆ. ಕೋವಿಡ್ ಸಂದರ್ಭದಲ್ಲಿ ಪತ್ರಿಕೆ ಕೊಳ್ಳುವವರು, ಮನೆಗೆ ಹಾಕಿಸಿಕೊಳ್ಳುವವರು ಕೂಡಾ ಪತ್ರಿಕೆಗಳನ್ನು ಬೇಡ ಎಂದರು. ಕೊರೋನಾ ಭಯ ಬಿಟ್ಟು ಪತ್ರಿಕೆಗಳನ್ನು ಓದುವ ಮೂಲಕ ನಮ್ಮಂತಹ ಪತ್ರಿಕಾ ವಿತರಕರಿಗೆ ನೆರವಾಗಲು ಕರೆ ನೀಡಿದ್ದರು. ಕಾರಣ ಕೋವಿಡ್ ಇದೆ ಬೇಡ ಎಂದು. ಪ್ರಸ್ತುತ ದಿನಗಳಲ್ಲಿ ಪತ್ರಿಕೆಗಳನ್ನು ಕೊಳ್ಳುವವರ ಸಂಖ್ಯೆ ಕಡಿಮೆ ಆಗುತ್ತಿದೆ. ದಯವಿಟ್ಟು ಪತ್ರಿಕೆಗಳನ್ನು ಕೊಂಡು ಓದಿರಿ.

ಈ ಅಭಿಯಾನದ ಉದ್ದೇಶ ಓದುಗರಲ್ಲಿ ಜಾಗೃತರಾಗಿಸಿ ಪತ್ರಿಕೆಗಳನ್ನು ಕೊಂಡು ಓದುವ ಅಭ್ಯಾಸ ಬೆಳೆಸಿಕೊಳ್ಳಿ ಎಂದಾಗಿದೆ. ಅದಕ್ಕಾಗಿಯೇ ನಮ್ಮ ಮೊದಲ ಹಂತದ ಈ ಜಾಥಾ ಮಾಡಿದ್ದೇವೆ. ನಮ್ಮ ಈ ಜಾಥಾ ಯಶಸ್ವಿಯಾಗಿದೆ. ನಮ್ಮ ಎಲ್ಲಾ ವಿತರಕರು ಸಂಯಮದಿದ ಭಾಗವಹಿಸಿದ್ದೀರಿ ಅದಕ್ಕಾಗಿ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು.

ಈ ಜಾಥಾದಲ್ಲಿ ದಾವಣಗೆರೆ ನಗರ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಚಂದ್ರು, ಖಜಾಂಚಿ ಅರುಣಕುಮಾರ, ಬಂಕಾಪುರದ ಚನ್ನಬಸಪ್ಪ, ರಮೇಶ ವತನ್, ನಿಂಗಪ್ಪ, ಕೃಷ್ಣಮೂರ್ತಿ, ಮಂಜುನಾಥ, ಎಸ್.ಕೆ.ಪ್ರಕಾಶ, ದಿನೇಶ ಬಾಬು, ರವಿಪ್ರಸಾದ, ಶಿವು, ಪ್ರಕಾಶ, ಬಸವರಾಜ, ಬಿ.ಲೋಕೇಶ, ಸುಧಾಕರ, ಅಣ್ಣಪ್ಪ, ಹರೀಶ, ಆನಂದ, ಪ್ರದೀಪ, ಪಿ.ಪ್ರಕಾಶ, ಆನಂದ, ಕುಮಾರಸ್ವಾಮಿ, ಶಂಕರ ಹಾಗೂ ದಾವಣಗೆರೆ ಜಿಲ್ಲೆ ಸೇರಿದಂತೆ ತುಮಕೂರು, ಮೈಸೂರು, ಚಿಕ್ಕಮಗಳೂರು, ಬಿಜಾಪುರ, ಬಾಗಲಕೋಟೆ, ಧಾರವಾಡ, ಹುಬ್ಬಳ್ಳಿ, ಗದಗ್, ಸೇರಿದಂತೆ ಅನೇಕ ಜಿಲ್ಲೆ, ತಾಲೂಕುಗಳಿಂದ ಪದಾಧಿಕಾರಿಗಳು, ಸದಸ್ಯರುಗಳು ಭಾಗವಹಿಸಿದ್ದರು.

ಈ ಜಾಥಾ ಜಯದೇವ ವೃತ್ತದಿಂದ ಹೊರಟು ಪ್ರವಾಸಿ ಮಂದಿರ ರಸ್ತೆ, ಪಿ.ಬಿ.ರಸ್ತೆ, ಹಳೇ ಬಸ್ ನಿಲ್ದಾಣ, ಗಾಂಧಿ ಸರ್ಕಲ್, ಅಶೋಕ ರಸ್ತೆ, ಹದಡಿ ರಸ್ತೆ ಮೂಲಕ ತೆರಳಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ವಿದ್ಯಾರ್ಥಿ ಭವನದವರೆಗೆ ನಡೆಯಿತು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!