ರಾಜ್ಯದ ಜನತೆಗೆ ಸುಳ್ಳು ಮಾಹಿತಿ ನೀಡಿದ, ಬೇಜವಾಬ್ದಾರಿ ಗೃಹಮಂತ್ರಿ ಅರಗ ಜ್ಞಾನೇಂದ್ರ ರಾಜೀನಾಮೆ ಪಡೆಯಬೇಕು – ಕೆ.ಎಲ್.ಹರೀಶ್ ಬಸಾಪುರ

ದಾವಣಗೆರೆ: ಜವಾಬ್ದಾರಿಯುತ ಸ್ಥಾನದಲ್ಲಿದ್ದ, ರಾಜ್ಯದ ಗೃಹ ಮಂತ್ರಿಗಳು home minister ಅರಗ ಜ್ಞಾನೇಂದ್ರ Aaraga Jnanendra ರವರು ನಿನ್ನೆ ನಡೆದ ಚಂದ್ರು ಎಂಬ ಯುವಕನ ಹತ್ಯೆ ಪ್ರಕರಣದಲ್ಲಿ ಮಾಧ್ಯಮಗಳಿಗೆ Media Statement ತಪ್ಪು ಹೇಳಿಕೆ ನೀಡಿದ್ದು, ಇದನ್ನು ರಾಜ್ಯದ ಜನತೆಗೆ ಕೋಮು ಪ್ರಚೋದನೆ ನೀಡಿದ ಪ್ರಕರಣ ಎಂದು ಭಾವಿಸಿ ಇದರ ನೈತಿಕ ಹೊಣೆ ಹೊತ್ತು ಗೃಹ ಮಂತ್ರಿಗಳು ರಾಜೀನಾಮೆ Resignation ನೀಡಬೇಕು ಅಥವಾ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರು Chief Minister Basavaraj Bommai ತಕ್ಷಣವೇ ಅವರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಬೇಕು.
ಯಾವುದೇ ಒಂದು ಪ್ರಕರಣ ನಡೆದಾಗ ಅದರ ಪೂರ್ಣ ಮಾಹಿತಿ ಪಡೆದು ಹೇಳಿಕೆ ನೀಡಬೇಕಾದದ್ದು ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದಂತಹ ನಾಯಕರುಗಳ ಕರ್ತವ್ಯವಾಗಿದೆ ಆದರೆ ಮಾನ್ಯ ಗೃಹ ಮಂತ್ರಿಗಳು ಕೇವಲ ಯಾರೋ ಹೇಳಿದರು ಎನ್ನುವ ಆಧಾರದ ಮೇಲೆ ಹೇಳಿಕೆ ನೀಡಿ, ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಸ್ಥಾನದಲ್ಲಿರುವ ಇವರೇ ಅದನ್ನು ಮುರಿಯುವ ಕೆಲಸ ಮಾಡಿದ್ದಾರೆ, ಇಂತಹ ವ್ಯಕ್ತಿಗಳು ಸಚಿವ ಸ್ಥಾನದಲ್ಲಿ ಇರಲು ಅಲ್ಲದೇ, ರಾಜಕಾರಣಿಗಳಾಗಲು ಸಹ ಅನರ್ಹರು ಎಂದು ಭಾವಿಸಬೇಕಾಗಿದೆ
ರಾಜ್ಯದ ಹಿತದೃಷ್ಟಿಯಿಂದ ಇಂತಹ ಸಚಿವರನ್ನು ಮುಖ್ಯಮಂತ್ರಿಗಳು ವಜಾ ಮಾಡುತ್ತಾರೋ ಅಥವಾ ಇವರೇ ಮುಖ್ಯಮಂತ್ರಿಗಳ ಪಾಲಿಗೆ ಅರ್ಹ ಸಚಿವರು ಎಂದು ಭಾವಿಸಿ ಮುಂದುವರಿಸುತ್ತಾರೋ ಕಾದು ನೋಡೋಣ..
ಕೆ.ಎಲ್.ಹರೀಶ್ ಬಸಾಪುರ – ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥ
ಸುದ್ದಿಗಾಗಿ ಸಂಪರ್ಕಿಸಿ:- garudavoice21@gmail.com 9740365719