ಹೊಸಪೇಟೆ: ಬೆಂಕಿ ಅವಘಡಕ್ಕೆ ನಾಲ್ವರು ಬಲಿ

hospete 1

ಹೊಸಪೇಟೆ: ವಿದ್ಯುತ್ ಶಾಟ್೯ ಸರ್ಕ್ಯೂಟ್ ನಿಂದ‌ ಮನೆಗೆ ಬೆಂಕಿ ತಗುಲಿ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟ‌ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮಹಳ್ಳಿ‌ ಗ್ರಾಮದಲ್ಲಿ‌‌ ಶುಕ್ರವಾರ ನಸುಕಿನಲ್ಲಿ ನಡೆದಿದೆ.

ಗ್ರಾಮದ 5 ನೇ ವಾರ್ಡಿನ ನಿವಾಸಿ ರಾಘವೇಂದ್ರ ಶೆಟ್ಟಿ ಎಂಬುವವರ‌ ಮನೆಯಲ್ಲಿ ಇದ್ದಕ್ಕಿದ್ದಂತೆ ವಿದ್ಯುತ್ ಸರ್ಕ್ಯೂಟ್ ಆಗಿ‌ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ರಾಘವೇಂದ್ರ ಶೆಟ್ಟಿ‌ ಮತ್ತು ಅವರ‌ ಪತ್ನಿ‌ ರಾಜಶ್ರೀ ಮನೆಯಿಂದ ಹೊರ ಬಂದಿದ್ದಾರೆ. ಆದರೆ, ಮನೆಯ ಮಹಡಿಯ ಬೆಡ್ ರೂಮ್ ನಲ್ಲಿ ಮಲಗಿ ನಿದ್ರಿಸುತ್ತಿದ್ದ ರಾಘವೇಂದ್ರ ಶೆಟ್ಟಿಯವರ ಪುತ್ರ ವೆಂಕಟ್ ಪ್ರಸಾದ್ (42) ಅವರ ಪತ್ನಿ (38)ಚಂದ್ರಕಲಾ, ಮಕ್ಕಳಾದ ಅದ್ವಿಕ್ (16) ಹಾಗೂ‌ ಪ್ರೇರಣಾ (8‌) ಮನೆಯಿಂದ ನಿಂದ ಹೊರ‌‌ ಬರಲು ಆಗದೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಮರಿಯಮ್ಮನಹಳ್ಳಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿಗಾಗಿ ಸಂಪರ್ಕಿಸಿ: garudavoice21@gmail.com  9740365719

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!