91 ನೇ ಹುಟ್ಟುಹಬ್ಬದ ಪ್ರಯುಕ್ತ ಶಾಮನೂರು ಶಿವಶಂಕರಪ್ಪ ಸಾರ್ವಜನಿಕರಿಗೆ ನೀಡಿದ ಸಂದೇಶ ಏನು…?

ದಾವಣಗೆರೆ: ದಾವಣಗೆರೆ ನಗರದ ಬಂಧುಗಳೇ,ಅಭಿಮಾನಿ, ಹಿತೈಷಿಗಳೇ, ನಿಮ್ಮೆಲ್ಲರ ಹಾರೈಕೆ ಹಾಗೂ ದೇವರ ಆಶೀರ್ವಾದದಿಂದ ನಾನು ಆರೋಗ್ಯವಾಗಿದ್ದೇನೆ. ನಿಮ್ಮೆಲ್ಲರ ಜೊತೆ ಇದ್ದು, ಜನಸೇವೆ ಮಾಡುವ ಭಾಗ್ಯ ಪಡೆದಿದ್ದೇನೆ.
ಜೂನ್ 16 ನನ್ನ ಜನ್ಮದಿನ. ನಿಮ್ಮ ಹಾರೈಕೆ ಹಾಗೂ ಶುಭಾಶಯಗಳು ಸದಾ ನನ್ನ ಜೊತೆ ಇದ್ದೇ ಇರುತ್ತವೆ ಎಂದು ನಂಬಿದ್ದೇನೆ. ಈ ಬಾರಿ ಕೋರೋನಾ ಇರುವುದರಿಂದ ಜನ್ಮದಿನದ ಶುಭಾಶಯ ತಿಳಿಸಲು ತಾವುಗಳು ಗುಂಪು-ಗುಂಪಾಗಿ ಬರದೆ ನೀವು ಇದ್ದ ಕಡೆಯಿಂದಲೇ ನನಗೆ ಶುಭ ಹಾರೈಸಬೇಕೆಂದು ವಿನಂತಿಸುತ್ತೇನೆ. ಅದೇ ರೀತಿ ಪ್ರತಿಯೊಬ್ಬರು ಲಸಿಕೆ ಪಡೆಯಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ.
ಪರಸ್ಪರ ಅಂತರ ಕಾಪಾಡುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿರುವುದರಿಂದ ಅದನ್ನು ಪಾಲಿಸೋಣ. ಹಾರ-ತುರಾಯಿಗಳಿಗಿಂತ ನಿಮ್ಮ ಹೃದಯಾಳದ ಹಾರೈಕೆ ಅಮೂಲ್ಯ ಎಂದು ನಾನು ಭಾವಿಸಿದ್ದೇನೆ. ದೇವರು ನಿಮ್ಮೆಲ್ಲರ ಸೇವೆ ಮಾಡಲು ಕಲ್ಪಿಸಿರುವ ಈ ಅವಕಾಶಕ್ಕೆ ಸದಾ ಋಣಿಯಾಗಿರುತ್ತೇನೆ.
ಸರ್ವೇ ಜನಾಃ ಸುಖಿನೋ ಭವಂತುಃ ಡಾ|| ಶಾಮನೂರು ಶಿವಶಂಕರಪ್ಪ ಶಾಸಕರು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ.