ಬಂಜಾರ ಜನಾಂಗದ ಪ್ರತಿಭಾವಂತ ಕಲಾವಿದರಿಗೆ ಸನ್ಮಾನ

banjara 2

ದಾವಣಗೆರೆ : ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲೂಕು ವ್ಯಾಪ್ತಿಯ ಕೂಡ್ಲಹಳ್ಳಿ ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಬಂಜಾರ ಜನಾಂಗದ ಪ್ರತಿಭಾವಂತ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಹಿರಿಯೂರು ತಾಲೂಕು ವ್ಯಾಪ್ತಿಯ ಕೂಡ್ಲಹಳ್ಳಿ ಗ್ರಾಮದಲ್ಲಿ ಶ್ರೀ ಸೇವಾಲಾಲ್ ಮರಿಯಮ್ಮದೇವಿಯ ಮಂಡಲ ಪೂಜೆ ಹಾಗೂ ನೂತನವಾಗಿ ಕಟ್ಟಿಸಿದ ದೇವಾಲಯದ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಂಜಾರ ಸಮುದಾಯದ ನಾಲ್ವರು ಪ್ರತಿಭಾವಂತ ಕಲಾವಿದರನ್ನು ಸನ್ಮಾನಿಸಲಾಯಿತು.


ಬಂಜಾರ ಜನಾಂಗದ ಹೆಸರಾಂತ ಗಾಯಕ, ಲೇಖಕ ಹಾಗೂ ಸಂಗೀತಗಾರ ಕುಬೇರನಾಯ್ಕ್, ದಾವಣಗೆರೆ ಇವರಿಗೆ “ಬಂಜಾರ ಸಂಗೀತ ರತ್ನಾ”, ಬಂಜಾರ ಜನಾಂಗದ ಚಲನಚಿತ್ರ, ನಿರ್ಮಾಪಕಿ, ನಿರ್ದೇಶಕಿ ಹಾಗೂ ನಟಿ ಅನುತೇಜ ರಮೇಶ್ ಬೆಂಗಳೂರು, ಇವರಿಗೆ “ಬಂಜಾರ ಅಭಿನೇತ್ರಿ” ಬಂಜಾರ ಜನಾಂಗದ ಗೊರಬೋಲಿ ಭಾಷಾ ವೇಲ್ ವೆಲ್ಡಿಯ ಮುಖ್ಯಸ್ಥ ರಾಮು ಓ ರಾಥೋಡ್, ಮಸ್ಕಿ ಇವರಿಗೆ “ಬಂಜಾರ ಸಾಹಿತ್ಯ ರತ್ನಾ” ಹಾಗೂ ಕುಮಾರಿ ನಿಹಾರಿಕ ರಾಥೋಡ್, ಇವರಿಗೆ ” ಗಾನ ಕಿಶೋರಿ ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯೂರು ಶಾಸಕಿ ಪೂರ್ಣಿಮಾ ಶಿವರಾಜ್ ಆಗಮಿಸಿದ್ದರು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀ ಸೇವಾಲಾಲ್ ಸರ್ದಾರ್ ಸ್ವಾಮೀಜಿ ಬಂಜಾರ ಮಠ ಚಿತ್ರದುರ್ಗ, ಶಿವಸಾದ್ ಮಹಾರಾಜ್ ಬಾಲಾಜಿ ಮಠ ಇವರು ವಹಿಸಿದ್ದರು. ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಗಿರೀಶ್ ಇದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!