ದಾವಣಗೆರೆ ಎಂ ಸಿ ಸಿ ಬಡಾವಣೆಯ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಕಳ್ಳತನ.!

ದಾವಣಗೆರೆ: ದಾವಣಗೆರೆ ನಗರದ ಎಂ ಸಿ ಸಿ ಬಿ ಬ್ಲಾಕ್ ನಲ್ಲಿರುವ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ.
ಕಳ್ಳರು ಶನಿವಾರ ರಾತ್ರಿಯ ವೇಳೆಯಲ್ಲಿ ದೇವಸ್ಥಾನದ ಮುಖ್ಯ ದ್ವಾರವನ್ನ ಹಾನಿ ಮಾಡಲು ಪ್ರಯತ್ನಿಸಿದ್ದಾರೆ ಆದರೆ ಅದೂ ಸಾಧ್ಯವಾಗದೇ ಪ್ರಯತ್ನ ವಿಫಲವಾಗಿದೆ. Venkateshwara temple theft, Davanagere police ನಂತರ ದೇವಸ್ಥಾನದ ಉತ್ತರ ದ್ವಾರದ ಕಬ್ಬಿಣದ ಸರಳುಗಳು ಹಾಗೂ ಬಾಗಿಲನ್ನು ಆಯುಧಗಳಿಂದ ಒಡೆದು ದೇವಸ್ಥಾನದ ಪ್ರವೇಶಿಸಿದ್ದಾರೆ. ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸಲು ಪ್ರಯತ್ನ ಪಟ್ಟರು ಸಾಧ್ಯವಾಗದೇ ಇದ್ದುದರಿಂದ ಎರಡು ಹುಂಡಿಗಳನ್ನು ಹೊಡೆದು ಅದರಲ್ಲಿನ ಹಣವನ್ನ ದೋಚಿ ಪರಾರಿಯಾಗಿದ್ದಾರೆ, ಎರಡು ತಿಂಗಳ ಹಿಂದೆ ಹುಂಡಿಯ ಹಣವನ್ನ ದೇವಸ್ಥಾನದ ಕಮಿಟಿಯವರು ತೆಗೆದಿದ್ದರಿಂದ ಅಂದಾಜು 50 ಸಾವಿರ ಹಣ ಕಳ್ಳತನ ಆಗಿರಬಹುದು ಎನ್ನಲಾಗಿದೆ.
ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿರುವ ದೇವರ ಅಭರಣಗಳಿದ್ದ ಬಾಗಿಲನ್ನು ತೆರೆಯಲು ಪ್ರಯತ್ನಿಸಿ ವಿಫಲರಾಗಿದ್ದು, ಸಿಸಿಟಿವಿ cctv footage ಹಾಗೂ storage drive ಡ್ರೈವ್ ಗಳನ್ನ ಕಳ್ಳರು ಹಾನಿಮಾಡಿದ್ದಾರೆ. ಯಾವುದೇ ದೃಶ್ಯಗಳು ದಾಖಲಾಗಿಲ್ಲದಿರುವುದರಿಂದ ಪೋಲೀಸ್ ರಿಗೆ ಸಿಸಿಟಿವಿ ದೃಷ್ಯಾವಳಿ ಪಡೆಯಲು ಸಾಧ್ಯವಾಗಿಲ್ಲ. ಪೊಲೀಸ್ ಇಲಾಖೆಯ police sniper dog ಶ್ವಾನ ಕೂಡ ದೇವಸ್ಥಾನದ ಹಿಂಬಾಗಿಲ ವರೆಗೆ ಹೋಗಿ ವಾಪಸ್ ಬಂದಿದ್ದು ಹೆಚ್ಚಿನ ತನಿಖೆಗೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಕಳ್ಳತನದ ವಿಷಯ ತಿಳಿದು ದಾವಣಗೆರೆಯ ಬಡಾವಣೆ ಪೊಲೀಸರು ದೇವಸ್ಥಾನಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ದೇವಸ್ಥಾನದ ಕಮಿಟಿಯವರಿಂದ ದೂರು ನೀಡಲಿದ್ದಾರೆ.
ದಾವಣಗೆರೆಯಲ್ಲಿ ಇತ್ತೀಚಿಗೆ ದೇವಸ್ಥಾನದಲ್ಲಿ ಹಾಗೂ ಮನೆಗಳಲ್ಲಿ ಕಳ್ಳತನ ಕಡಿಮೆಯಾಗಿತ್ತು ಆದರೆ ಇಂದಿನ ಘಟನೆಯಿಂದ ಸಾರ್ವಜನಿಕರು ಹುಷಾರಾಗಿರಬೇಕು ಎಂಬ ಎಚ್ಚರಿಕೆಯ ಘಂಟೆಯನ್ನು ಆ ವೆಂಕಟೇಶ್ವರ ಸ್ವಾಮಿ ಹೇಳಿದಂತೆ ಭಾಸವಾಗುತ್ತಿದೆ.
ಸುದ್ದಿಗಾಗಿ ಸಂಪರ್ಕಿಸಿ: garudavoice21@gmail.com 9740365719