ದಾವಣಗೆರೆ ಜಿಮ್ ಟ್ರೈನರ್ ಧನ್ಯ ಕೊಲೆ ಆರೋಪಿಗಳನ್ನ ಬಂಧಿಸಿದ ವಿಜಯನಗರ ಪೋಲೀಸ್

ವಿಜಯನಗರ: ಕಳೆದ ಮೂರು ದಿನಗಳ ಹಿಂದಷ್ಟೇ ಕೊಲೆಯಾಗಿದ್ದ Davanagere Nittuvalli Gym Trainer Dhanyakumar murder case ನಿಟುವಳ್ಳಿಯ ಜಿಮ್ ಟ್ರೈನರ್ ಧನ್ಯಕುಮಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು Three person’s arrested by Vijayanagara police ಪೊಲೀಸರು ಬಂಧಿಸಿದ್ದಾರೆ.
ಕೆಟಿಜೆ ನಗರದ ರವಿ(೨೪), ಲೆನಿನ್ ನಗರದ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ (೨೫), ಸುದೀಪ್ ಅಲಿಯಾಸ್ ಸುಧಿ (೨೧) ಬಂಧಿತ ಆರೋಪಿಗಳು. ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳು ಮತ್ತು ಮೂರು ದ್ವಿಚಕ್ರವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸ್ನೇಹಿತ ಧನ್ಯಕುಮಾರ್ ಮತ್ತೊಂದು ಗುಂಪಿನೊಂದಿಗೆ ಸೇರಿ ಬೆಳೆದುಬಿಡುತ್ತಾನೆ ಎಂದು ಅವನನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ವಿಜಯನಗರ ಜಿಲ್ಲೆಯ ಎಸ್ಪಿ ಡಾ.ಅರುಣ್ ಕೆ SP Dr.Arun K ತಿಳಿಸಿದ್ದಾರೆ.
ಆರೋಪಿಗಳು ಮೂರು ದಿನಗಳ ಹಿಂದೆ ಸ್ನೇಹಿತರ ಜೊತೆ ಉಚ್ಚಂಗಿದುರ್ಗದ ಹಾಲಮ್ಮತೋಪಿಗೆ ಧನ್ಯಕುಮಾರ್ ಊಟಕ್ಕೆ ತೆರಳಿದ್ದಾಗ ಅವನನ್ನು ಮೂವತ್ತು ಕಡೆ ಮಾರಕಾಸ್ತ್ರಗಳಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿ, ಮೃತ ದೇಹವನ್ನು ಉಚ್ಚಂಗಿದುರ್ಗದ ಹಾಲಮ್ಮ ತೋಪಿನಿಂದ ಬೇವಿನಹಳ್ಳಿ ತಾಂಡದ ಜಾಗದಲ್ಲಿ ರಕ್ತಸಿಕ್ತವಾಗಿ ಬಿದ್ದಿರುವ ಧನ್ಯಕುಮಾರ್ ಮೃತ ದೇಹ ಪತ್ತೆಯಾಗಿತ್ತು, ವೈಯಕ್ತಿಕ ದ್ವೇಷಕ್ಕೆ ನಡೆದ ಹತ್ಯೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿತ್ತು ಎಂದು ತಿಳಿಸಿದ್ದಾರೆ.
ಪ್ರಕರಣ ಅರಸಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಪ್ರಕರಣದ ಜಾಡು ಹಿಡಿಯಲು ಹರಪನಹಳ್ಳಿ, ಅರಸಿಕೆರೆ ಪೊಲೀಸರ ತಂಡ ಆರೋಪಿಗಳ ಪತ್ತೆ ಕಾರ್ಯದಲ್ಲಿ ಯಶಸ್ವಿಯಾಗಿದೆ. ಕಾರ್ಯಾಚರಣೆಯಲ್ಲಿ ಹರಪನಹಳ್ಳಿ ಡಿವೈಎಸ್ಪಿ ಹಾಲಮೂರ್ತಿ ಮಾರ್ಗದರ್ಶನದಲ್ಲಿ ಸಿಪಿಐ ನಾಗರಾಜ್ ಎಂ. ಕಮ್ಮಾರ್ ನೇತೃತ್ವದಲ್ಲಿ ಅರಸಿಕೆರೆಯ ಪಿಎಸ್ಐ ಪ್ರಶಾಂತ್, ಗುರುರಾಜ, ಪ್ರಕಾಶ್, ನಾಗರಾಜ್, ರವಿ ದಾದಾಪುರ, ವಾಸುದೇವಯ್ಯ ಸೇರಿದಂತೆ ಸಿಬ್ಬಂದಿಗಳ ತಂಡ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ.
garudavoice21@gmail.com 9740365719