ಸ್ವ ಅಭಿವೃದ್ದಿಯೇ ದಾವಣಗೆರೆ ಅಭಿವೃದ್ದಿಯೇ ಎಂದುಕೊ0ಡ ಎಸ್ಎಸ್ಎಂ! ಮೇಯರ್ ಜಯಮ್ಮ ಗೋಪಿನಾಯ್ಕ್

ದಾವಣಗೆರೆ: ಬಾಪೂಜಿ ಸಂಸ್ಥೆ, ತಮ್ಮ ಮತ್ತು ತಮ್ಮ ಸಂಬ0ಧಿಕರ ಮನೆ ಹತ್ತಿರದ ಕಾಂಕ್ರೀಟ್ ರಸ್ತೆ ನಿರ್ಮಾಣ ಸೇರಿದಂತೆ ಸ್ವ ಅಭಿವೃದ್ದಿಯನ್ನೇ ಎಸ್. ಎಸ್. ಮಲ್ಲಿಕಾರ್ಜುನ್ ಅವರು ದಾವಣಗೆರೆ ಅಭಿವೃದ್ದಿ ಎಂದುಕೊ0ಡಿದ್ದಾರೆ0ದು ಮೇಯರ್ ಜಯಮ್ಮ ಗೋಪಿನಾಯ್ಕ್ ಎಸ್.ಎಸ್ ಮಲ್ಲಿಕಾರ್ಜುನ್ ನೀಡಿದ್ದ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.
ಬಿಜೆಪಿ ಪಕ್ಷ ಜಿಲ್ಲೆಯಲ್ಲಿ ಯಾವುದೇ ರೀತಿಯ ಅಭಿವೃದ್ದಿ ಕೆಲಸ ಮಾಡಿಲ್ಲವೆಂಬ ಎಸ್.ಎಸ್ ಮಲ್ಲಿಕಾರ್ಜುನ್ ಅವರ ಹೇಳಿಕೆಗೆ ವಿರುದ್ದ ಮರುಹೇಳಿಕೆ ನೀಡಿರುವ ಮೇಯರ್ ಜಯಮ್ಮ ಗೋಪಿನಾಯ್ಕ್ ಚುನಾವಣೆಯಲ್ಲಿ ಸೋಲುವ ಹತಾಶೆಯಿಂದ ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರು ಈ ರೀತಿಯ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಇವರ ಈ ಹೇಳಿಕೆ ಹಾಸ್ಯಸ್ಪದವಾಗಿದೆ ಎಂದರು.
ದಾವಣಗೆರೆಯಲ್ಲಿ ಅಭಿವೃದ್ದಿಯಾಗದ ಹಲವು ಬಡಾವಣೆಗಳಿವೆ. ದಾವಣಗೆರೆ ಅಭಿವೃದ್ದಿಯಾಗಿದೆ ಎಂದು ಬಾಯಿಮಾತಿಗೆ ಹೇಳುವುದು ಸುಲಭ. ಸಚಿವರಾಗಿದ್ದ ಕಾಲದಲ್ಲಿ ಎಸ್ಎಸ್ಎಂ ಸರ್ಕಾರದ ಯಾವುದೇ ಕೆಲಸಗಳಿರಲಿ ಟೆಂಡರ್ ಕರೆಯದೆ ತಮಗೆ ಬೇಕಾದ ಸಂಸ್ಥೆಯೊ0ದಕ್ಕೆ ಕೆಲಸ ನೀಡಿ, ಸರ್ಕಾರದ ಎಷ್ಟು ಹಣ ಕೊಳ್ಳೆಹೊಡೆದಿದ್ದಾರೆ ಎನ್ನುವುದು ಬಹಿರಂಗಗೊಳ್ಳಬೇಕಿದೆ ಎಂದು ಹೇಳಿದರು.
ಬಿಜೆಪಿ ಪಕ್ಷ ದಾವಣಗೆರೆಯಲ್ಲಿ ಜನಪರ ಕಾರ್ಯಗಳನ್ನು ಮಾಡುತ್ತಿದೆ. ಕೈಗಾರಿಕೆಗಳ ಸ್ಥಾಪನೆಗೆ ಮುಖ್ಯವಾಗಿ ಏರ್ಪೋರ್ಟ್ ಅವಶ್ಯವಿದೆ. ಇದರ ಪ್ರಯತ್ನದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ. ರವೀಂದ್ರನಾಥ ಇದ್ದಾರೆ. ಆದರೆ ಈ ಕಾರ್ಯ ನಡೆಯದಂತೆ ಯಾರು ಅಡ್ಡಿಪಡಿಸುತ್ತಿದ್ದಾರೆಂಬುದು ಜನತೆಗೆ ಗೊತ್ತಾಗಬೇಕು. ದೊಡ್ಡ ಆಸ್ಪತ್ರೆ, ಕೈಗಾರಿಕೆಗಳು ಬಾರದಂತೆ ಅಡ್ಡಿಪಡಿಸಿದರ್ಯಾರು? ಎಂದು ಪ್ರಶ್ನಿಸಿದ್ದಾರೆ.
ಸಂಸದ ಸಿದ್ದೇಶ್ವರ ಅವರು ಅತ್ಯಂತ ಪ್ರಾಮಾಣಿಕವಾಗಿ ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೆ ಪ್ರಯತ್ನಿಸುತ್ತಿದ್ದಾರೆ. ಇದು ನಮಗೆ ಹೆಮ್ಮೆ ಮತ್ತು ಗೌರವ. ದಾವಣಗೆರೆ ಇತಿಹಾಸದಲ್ಲಿ ಹೆಚ್ಚು ಪ್ರವಾಸ, ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಗಮನ ಕೊಟ್ಟಂತಹ ಜನಪ್ರತಿನಿಧಿ ಎಂದರೆ ಅದು ಸಿದ್ದೇಶ್ವರ. ಕ್ಷೇತ್ರದ ಜನರೊಂದಿಗೆ ನೇರ ಸಂಪರ್ಕದಲ್ಲಿರುವ ಜನಪ್ರತಿನಿಧಿಗಳಿದ್ದರೆ ಅದು ನಮ್ಮ ಬಿಜೆಪಿ ಜನಪ್ರತಿನಿಧಿಗಳು ಎಂಬ ಹೆಮ್ಮೆ ನಮಗಿದೆ. ದಾವಣಗೆರೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಶೀಘ್ರವೇ ನಿರ್ಮಾಣವಾಗಲಿದೆ. ಆದರೆ ಇದನ್ನು ತಪ್ಪಿಸಲು ಕೆಲ ವಿರೋಧಿ ಶಕ್ತಿಗಳು ಪ್ರಯತ್ನಿಸುತ್ತಿವೆ. ಈ ಪ್ರಯತ್ನ ವಿಫಲಗೊಳಿಸಿ ಮೆಡಿಕಲ್ ಕಾಲೇಜು ಆಗುವುದರಲ್ಲಿ ಅನುಮಾನವಿಲ್ಲ.
ತಾವು ತಯಾರಿಸಿದ ಅಭಿವೃದ್ಧಿ ಕಾರ್ಯಗಳ ಯೋಜನೆಯನ್ನು ಬಿಜೆಪಿ ಮಾಡುತ್ತಾ ಹೆಸರು ಪಡೆಯುತ್ತಿರುವುದಾಗಿ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಹೇಳಿಕೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ವೀರೇಶ್, ಅವರೇ ಯೋಜನೆಗಳನ್ನು ತಯಾರಿಸಿದ್ದಾಗಿದ್ದರೆ ಈಗೇಕೆ ನಮ್ಮ ಅಭಿವೃದ್ಧಿ ಕಾರ್ಯಗಳ ಬಗ್ಗೆ ದೂಷಿಸಬೇಕು. ಹಾಗಿದ್ದರೆ ಅವರು ತಯಾರಿಸಿದ ಯೋಜನೆಗಳಲ್ಲಿ ಲೋಪವಿದೆಯೇ.
ಸ್ಮಾರ್ಟ್ಸಿಟಿ ತಂದದ್ದು ತಾವೆಂದು ಹೇಳಿಕೊಳ್ಳುವ ಎಸ್.ಎಸ್. ಮಲ್ಲಿಕಾರ್ಜುನ್ ಯಾವ ಸಭೆಯಲ್ಲಿದ್ದರು, ರೆಸಲೂಷನ್ಗೆ ಸಹಿ ಹಾಕಿದ್ದಾರೆ ದಾಖಲೆ ಕೊಡಲಿ. 60-70 ವರ್ಷಗಳು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸ್ಮಾರ್ಟ್ಸಿಟಿ ಏಕೆ ತರಲಿಲ್ಲ. ಈಗ ನರೇಂದ್ರ ಮೋದಿ ಪ್ರಧಾನಿ ಆದಾಗಲೇ ಏಕೆ ಬಂತು. ಮಾತನಾಡಬೇಕಿದ್ದರೆ ಯೋಚನೆ ಮಾಡಿ, ದಾಖಲೆ ಸಹಿತ ಮಾತನಾಡಲಿ. ನಾವು ಸಂಸದ ಸಿದ್ದೇಶ್ವರ, ಶಾಸಕ ರವೀಂದ್ರನಾಥ ಅವರ ಅಭಿವೃದ್ಧಿ ಕಾರ್ಯಗಳನ್ನು ದಾಖಲೆ ಸಹಿತ ಬಹಿರಂಗಪಡಿಸುತ್ತೇವೆ. ಮುಕ್ತವಾಗಿ ಬಹಿರಂಗ ಚರ್ಚೆಗೆ ಬರಲಿ ಎಂದು ಹೇಳಿದರು.
ನಗರ ಪಾಲಿಕೆ ಉಪಚುನಾವಣೆಯಲ್ಲಿ ಈ ಬಾರಿ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವು ಖಚಿತ. ಇದಕ್ಕೆ ಆ ಎರಡು ವಾರ್ಡ್ಗಳಲ್ಲಿ ನಮ್ಮ ಪಕ್ಷದ ಅಭಿವೃದ್ಧಿ ಕಾರ್ಯಗಳೇ ಕೈ ಹಿಡಿಯಲಿವೆ. ಜೆ.ಎನ್. ಶ್ರೀನಿವಾಸ್ ಮತ್ತು ಶಿಲ್ಪಾ ದಂಪತಿ ಗೆಲುವು ನಿಶ್ಚಿತ. ಶ್ರೀನಿವಾಸ್ ತಮ್ಮ ವಾರ್ಡಿನ ಬಡ ಮತ್ತು ಸಂಕಷ್ಟದಲ್ಲಿನ ಜನರಿಗೆ ವೈಯಕ್ತಿಕವಾಗಿಯೂ ಸಹಾಯ ಹಸ್ತ ಚಾಚಿದ್ದಾರೆ. ಈಗಲೂ ಜನರ ಒಲವು ಶ್ರೀನಿವಾಸ ಮೇಲೆ ಅಪಾರವಾಗಿದ್ದು, ಅವರ ಗೆಲುವಿಗೆ ಇದೇ ಶಕ್ತಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಉಪಮೇಯರ್ ಗಾಯತ್ರಿ ಖಂಡೋಜಿರಾವ್, ಎಸ್.ಟಿ ವೀರೇಶ್, ಎಲ್.ಡಿ. ಗೋಣೇಪ್ಪ ಮತ್ತಿತರರಿದ್ದರು.
garudavoice21@gmail.com 9740365719