ಶಾಸಕರ ತಿಂಗಳ ಸಂಬಳ ಎಷ್ಟು ಗೊತ್ತಾ! ಸಂಬಳ ಪಡೆದು ಕೆಲಸ ಮಾಡುವ ಶಾಸಕರ‍್ಯಾಕಾದ್ರು ನಾಯಕರು?

mla sallary

ವಿದ್ಯಾನಾಯ್ಕ್ ಅರೇಹಳ್ಳಿ
ದಾವಣಗೆರೆ : ಒಂದು ಸಂಸ್ಥೆ ಅಥವಾ ಕಂಪನಿಗಳಲ್ಲಿ ಕೆಲಸ ಮಾಡುವ ವ್ಯಕ್ತಿಯನ್ನ ಕೆಲಸಗಾರ ಎಂದು ಕರೆಯುವ ನಾವು ಅದೇರೀತಿ ಜನರ ತೆರಿಗೆ ಹಣದಿಂದ ಸಂಬಳ ಪಡೆದು ಕೆಲಸ ಮಾಡುವ ಶಾಸಕರು, ಸಂಸದರು ನಮ್ಮೇಲ್ಲರ ನಾಯಕರಾದರು ಯಾಕೆ? ಹೌದು, ಈ ರೀತಿಯ ಪ್ರಶ್ನೆ ಬುದ್ದಿಜೀವಿಗಳಲ್ಲಿ ಮನೆ ಮಾಡಿದ್ದು, ವಿದ್ಯಾವಂತರಾದರೆ ಸಾಲದು, ಪ್ರಜ್ಞಾವಂತರಾಗಬೇಕಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹರಿಬಿಡಲಾಗಿದೆ. ಏಪ್ರಿಲ್-2022ರಿಂದ ಜಾರಿಗೆ ಬರುವಂತೆ ಶಾಸಕರುಗಳಿಗೆ ತಿಂಗಳಿಗೆ ಪಾವತಿಸ ಲಾಗುತ್ತಿರುವ ವೇತನ/ಭತ್ಯೆಗಳ ವಿವರವಿರುವ ಪೋಸ್ಟ್ವೊಂದನ್ನು ಹರಿಬಿಡಲಾಗಿದೆ. ಚಂದ್ರಶೇಖರ್ ಚನ್ನಗಿರಿ ಎಂಬುವವರು ಈ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಶಾಸಕರುಗಳಿಗೆ ವೇತನ, ಕ್ಷೇತ್ರಭತ್ಯೆ, ಚುನಾವಣಾ ಕ್ಷೇತ್ರದ ಪ್ರಯಾಣ ಭತ್ಯೆ, ಆಪ್ತ ಸಹಾಯಕ ಮತ್ತು ಕೊಠಡಿ ಸೇವಕನ ವೇತನ, ಅಂಚೆ ವೆಚ್ಚ, ದೂರವಾಣಿ ವೆಚ್ಚ ಸೇರಿದಂತೆ ಸರ್ಕಾರದಿಂದ ಲಕ್ಷಾಂತರ ರೂಗಳ ಸಂಬಳ ನೀಡಲಾಗುತ್ತಿದೆ. ರಾಜ್ಯದ ಪ್ರತಿಯೊಬ್ಬ ಶಾಸಕರುಗಳಿಗೆ ವೇತನಕ್ಕಾಗಿ ರೂ.40 ಸಾವಿರ, ಕ್ಷೇತ್ರ ಭತ್ಯೆಗೆ 60 ಸಾವಿರ, ಚುನಾವಣಾ ಕ್ಷೇತ್ರದ ಪ್ರಯಾಣ ಭತ್ಯೆ 60 ಸಾವಿರ, ಆಪ್ತ ಸಹಾಯಕ ಮತ್ತು ಕೊಠಡಿ ಸೇವಕನ ವೇತನಕ್ಕಾಗಿ 20 ಸಾವಿರ, ಅಂಚೆ ವೆಚ್ಚಕ್ಕಾಗಿ 5 ಸಾವಿರ, ದೂರವಾಣಿ ವೆಚ್ಚಕ್ಕಾಗಿ 20 ಸಾವಿರ ರೂಗಳು ಸೇರಿ ಒಟ್ಟು 2 ಲಕ್ಷದ 5 ಸಾವಿರ ರೂಗಳನ್ನು ತಿಂಗಳಿಗೆ ಸಂಬಳ ರೂಪದಲ್ಲಿ ಪಾವತಿಸಲಾಗುತ್ತದೆ. ಇನ್ನು 500-100 ರೂಗಳ ರಿಚಾರ್ಚ್ ಮಾಡಿಸಿದರೆ ತಿಂಗಳು ಪೂರ್ತಿ ದೂರವಾಣಿ ಕರೆ ಸಂಭಾಷಣೆ ಮಾಡುವ ಕಾಲದಲ್ಲಿ ದೂರವಾಣಿ ವೆಚ್ಚಕ್ಕಾಗಿ 20 ಸಾವಿರ ರೂಗಳ ಅವಶ್ಯಕತೆ ಇದೆಯೇ ಎಂಬ ಪ್ರಶ್ನೆಯು ಸಹ ಸಾರ್ವಜನಿಕ ವಲಯದಲ್ಲಿ ಉದ್ಬವವಾಗಿದೆ.

ರಾಜ್ಯ ಸರ್ಕಾರ ಕರ್ನಾಟಕ ವಿಧಾನಮಂಡಲದವರ ಸಂಬಳ, ನಿವೃತ್ತಿ ವೇತನ ಮತ್ತು ಭತ್ಯೆಗಳ ಅಧಿನಿಯಮ 1956ಕ್ಕೆ ತಿದ್ದುಪಡಿ ಮಾಡಿದ್ದು, ಈ ಹಿಂದೆ 2022ರ ತಿದ್ದುಪಡಿ ನಿಯಮಗಳನ್ನು ಬಿಡುಗಡೆಗೊಳಿಸಿತ್ತು. ಕರ್ನಾಟಕ ವಿಧಾನಮಂಡಲದವರ ಸಂಬಳ, ನಿವೃತ್ತಿ ವೇತನ ಮತ್ತು ಭತ್ಯೆಗಳ (ತಿದ್ದುಪಡಿ) ಅಧಿನಿಯಮ, 2022ಕ್ಕೆ ಮಾರ್ಚ್ 3ರಂದು ರಾಜ್ಯಪಾಲರ ಒಪ್ಪಿಗೆ ದೊರೆತಿತ್ತು. ಈ ಕುರಿತ ಅಂತಿಮ ರಾಜ್ಯಪತವ್ರು ಪ್ರಕಟವಾಗಿತ್ತು. ಇದರ ಪ್ರಕಾರ ರಾಜ್ಯದ ಮುಖ್ಯಮಂತ್ರಿ, ಎಂಎಲ್‌ಎ, ಎಂಎಲ್‌ಸಿ, ವಿಧಾನ ಸಭೆ ಸಭಾಪತಿ, ವಿರೋಧ ಪಕ್ಷದ ನಾಯಕರ ವೇತನಗಳು, ಭತ್ಯೆಗಳು ಹೆಚ್ಚಾಗಿವೆ. ಕರ್ನಾಟಕ ವಿಧಾನಮಂಡಲದವರ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ ಅಧಿನಿಯಮ 1956 ರ ತಿದ್ದುಪಡಿ ಪ್ರಕಾರ, ರಾಜ್ಯ ಸರ್ಕಾರಕ್ಕೆ 25.40 ಕೋಟಿ ಹೆಚ್ಚುವರಿ ವೆಚ್ಚ ಆಗಲಿದೆ.

ಮುಖ್ಯಮಂತ್ರಿಗೆ 50 ಸಾವಿರದಿಂದ 75 ಸಾವಿರಕ್ಕೆ ಹೆಚ್ಚಿಸಿ ಮೂಲವೇತನ ನೀಡಲಾಗುತ್ತಿದೆ. ಸಚಿವರುಗಳಿಗೆ 40 ಸಾವಿರದಿಂದ 60 ಸಾವಿರ, ವಿಧಾನಸಭೆ ಸದಸ್ಯ (ಎಂಎಲ್‌ಎ) 25 ಸಾವಿರದಿಂದ 40 ಸಾವಿರ, ವಿಧಾನ ಪರಿಷತ್ ಸದಸ್ಯ (ಎಂಎಲ್‌ಸಿ) 25 ಸಾವಿರದಿಂದ 40 ಸಾವಿರ, ವಿಧಾನಸಭೆ ಸಭಾಪತಿ 50 ಸಾವಿರದಿಂದ 75 ಸಾವಿರ, ವಿಧಾನ ಪರಿಷತ್ ಅಧ್ಯಕ್ಷರಿಗೆ 50 ಸಾವಿರದಿಂದ 75 ಸಾವಿರ, ವಿರೋಧ ಪಕ್ಷದ ನಾಯಕರಿಗೆ 40 ಸಾವಿರದಿಂದ 60 ಸಾವಿರಕ್ಕೆ ಹೆಚ್ಚಿಸಿ ತಿದ್ದುಪಡಿ ಮಾಡಿ ಆದೇಶಿಸಲಾಗಿತ್ತು.  ಇನ್ನು ಮನೆ ಬಾಡಿಗೆ, ಮನೆ ನಿರ್ವಹಣೆ, ಪ್ರತಿ ದಿನದ ಪ್ರಯಾಣ ಭತ್ಯೆ, ವಯಕ್ತಿಕ ಆಹಾರ, ವಸ್ತುಗಳ ಖರೀದಿ, ಇಂಧನ ಇತ್ಯಾದಿಗಳಿಗೆ ಬೇರೆಯೇ ಲೆಕ್ಕವಿದೆ.

ಇಷ್ಟೆಲ್ಲ ಸೌಲಭ್ಯ ಪಡೆಯುವ ಶಾಸಕರು, ಸಂಸದರು, ಮುಖ್ಯಮಂತ್ರಿಗಳು ಜನರ ಮನಸಲ್ಲಿ ನಾಯಕರಾಗಿ ಯಾಕೆ ಉಳಿಯುತ್ತಿದ್ದಾರೆ. ಎಲ್ಲರಂತೆ ಅವರು ಸಹ ಕೆಲಸಗಾರ, ಆದರೆ ಜನರ ಮನಸಲ್ಲಿ ನಾಯಕರಾಗಿ ಉಳಿಯುತ್ತಿದ್ದಾರೆ. ಕೆಲಸಗಾರರನ್ನು ನಾಯಕರನ್ನಾಗಿ ನೋಡುವ ಮನಸ್ಥಿತಿ ಬದಲಾಗಬೇಕಿದೆಯಲ್ಲವೇ? ಶಾಸಕರು ಶಾಸಕರಾಗಿಯೇ ಇದ್ದಾರೆ ಆದರೆ ಜನರಲ್ಲಿ, ಹಿಂಬಾಲಕರಲ್ಲಿ ನಾಯಕರಾಗಿ, ಬಂಧುವಾಗಿ ಇದ್ದಾರೆ. ಈ ಮನಸ್ಥಿತಿಯಿಂದ ಹೊರಬರಬೇಕಾಗಿದೆ. ಪ್ರಜೆಗಳ ತೆರಿಗೆ ಹಣದಿಂದ ಸಂಬಳ ಪಡೆದು ಜವಾಬ್ದಾರಿತನದಿಂದ ಕೆಲಸ ಮಾಡುವ ಶಾಸಕರನ್ನು ಜನನಾಯಕ, ಸೇವಕ, ಬಡವರ ಬಂಧು ಎಂದು ಹಾರ ಹಾಕಿ ಸಂಭ್ರಮಿಸುವ ಮನಸ್ಥಿತಿ ಮೂರ್ಖತನವಲ್ಲವೇ ಎಂಬುದು ಬುದ್ದಿಜೀವಿಗಳ ವಾದ.

 

 

garudavoice21@gmail.com 9740365719

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!