ತೋಟಗಾರಿಕಾ ಬೆಳೆಗಳಿಗೆ ವಿಮಾ ನೋಂದಣಿ

vima nondani

ದಾವಣಗೆರೆ : ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳ ಸಂಯೋಜನೆಗಳನ್ನು ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಅಡಿ ಅಧಿಸೂಚಿಸಿ ತೋಟಗಾರಿಕಾ ಬೆಳೆಗಳಿಗೆ ವಿಮೆ ನೋಂದಣಿ ಮಾಡಿಸಲು ಜಿಲ್ಲೆಯ ದಾವಣಗೆರೆ, ಚನ್ನಗಿರಿ, ಹೊನ್ನಾಳಿ, ನ್ಯಾಮತಿ, ಹರಿಹರ ಮತ್ತು ಜಗಳೂರು ತಾಲ್ಲೂಕುಗಳಿಗೆ ಸಂಬ0ಧಿಸಿದ0ತೆ ತೋಟಗಾರಿಕೆ ಬೆಳೆಗಳಾದ ಅಡಿಕೆ, ದಾಳಿಂಬೆ, ವಿಳ್ಯದೆಲೆ, ಕಾಳಮೆಣಸು ಮತ್ತು ಮಾವು ಬೆಳೆಗಳು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಅವಕಾಶ ಕಲ್ಪಿಸಲಾಗಿದೆ.

ಅಡಿಕೆ, ದಾಳಿಂಬೆ, ವಿಳ್ಯದೆಲೆ, ಕಾಳುಮೆಣಸು ಬೆಳೆಗಳ ನೋಂದಣಿಗೆ ಜೂನ್ 30 ಹಾಗೂ ಮಾವು ಬೆಳೆಯ ನೋಂದಣಿಗೆ ಜುಲೈ 31 ಅಂತಿಮ ದಿನವಾಗಿರುತ್ತದೆ. ಜಿಲ್ಲೆಗೆ ಸರ್ಕಾರವು ಎಸ್‌ಬಿಐ ಜನರಲ್ ಇನ್ಸರೆನ್ಸ್ ಕಂಪನಿ ಲಿಮಿಟೆಡ್ ವಿಮಾ ಸಂಸ್ಥೆಯನ್ನು ಆಯ್ಕೆ ಮಾಡಿದ್ದು, ಆದೇಶದನ್ವಯ ಪ್ರತಿ ಹೆಕ್ಟೆರ್ ಗೆ(ರೂ.ಗಳಲ್ಲಿ) ಅಡಿಕೆ ಬೆಳೆಗೆ ವಿಮಾ ಮೊತ್ತ 128000, ಪ್ರೀಮಿಯಂ ಮೊತ್ತ 6400. ದಾಳಿಂಬೆ ಬೆಳೆಗೆ ವಿಮಾ ಮೊತ್ತ 127000, ಪ್ರೀಮಿಯಂ ಮೊತ್ತ 6350. ವಿಳ್ಯದೆಲೆ ಬೆಳೆಗೆ ವಿಮಾ ಮೊತ್ತ 117000, ಪ್ರೀಮಿಯಂ ಮೊತ್ತ 5850. ಕಾಳುಮೆಣಸು ಬೆಳೆಗೆ ವಿಮಾ ಮೊತ್ತ 47000, ಪ್ರೀಮಿಯಂ ಮೊತ್ತ 2350. ಮಾವು ಬೆಳೆಗೆ ವಿಮಾ ಮೊತ್ತ 80000, ಪ್ರೀಮಿಯಂ ಮೊತ್ತ 4000 ಗಳಾಗಿರುತ್ತದೆ.

ಆಸಕ್ತಯುಳ್ಳ ರೈತರು ಸಮೀಪದ ಬ್ಯಾಂಕ್ ಶಾಖೆ, ಗ್ರಾಮ ಪಂಚಾಯಿತಿ ಕಚೇರಿ, ಸಾಮಾನ್ಯ ಸೇವಾ ಕೇಂದ್ರಗಳು, ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆಯ ತೋಟಗಾರಿಕೆ ಉಪನಿರ್ದೇಶಕರು (ಜಿಪಂ) ದಾವಣಗೆರೆ 08192-297090, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ದಾವಣಗೆರೆ 08192-250153 / 9482129648, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ಚನ್ನಗಿರಿ 08189-228170 / 9449759777, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ಹೊನ್ನಾಳಿ 08188-252990 / 8296358345, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ನ್ಯಾಮತಿ 08188-252990 / 8296358345, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ಹರಿಹರ 08192-242803 / 7625078054, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ಜಗಳೂರು 08196-227389 / 9353175240 ಕಛೇರಿಗೆ ಅಥವಾ ಟೋಲ್ ಫ್ರೀ ನಂಬರ್: 18001021111 ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!