ಎಸ್ ಎಸ್ ಎಂ ಪ್ರಚಾರಕ್ಕೆ ಮುಖಭಂಗ.! ಜೆ ಎನ್ ಶ್ರೀನಿವಾಸ್ ರಾಜಕೀಯ ಭವಿಷ್ಯ ಗಟ್ಟಿ.!

ದಾವಣಗೆರೆ: ಮೇ.20ರಂದು ನಡೆದ ದಾವಣಗೆರೆ ಮಹಾನಗರ ಪಾಲಿಕೆ ಉಪಚುನಾವಣೆಯಲ್ಲಿ ಎಸ್.ಎಸ್. ಮಲ್ಲಿಕಾರ್ಜುನ್ಗೆ ಭಾರೀ ಮುಖಭಂಗವಾಗುವುದರ ಜೊತೆಗೆ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಭಾರೀ ಬಹುಮತಗಳ ಅಂತರದಿಂದ ಜಯಶೀಲರಾದ ಜೆ.ಎನ್. ಶ್ರೀನಿವಾಸ್ ರಾಜಕೀಯ ಭವಿಷ್ಯ ಘಟ್ಟಿಯಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ದಾವಣಗೆರೆ ಮಹಾನಗರಪಾಲಿಕೆಯ ವಾರ್ಡ್ ಸಂಖ್ಯೆ-37 ಹಾಗೂ ವಾರ್ಡ್ ಸಂಖ್ಯೆ – 28 ಮತ್ತು ಚನ್ನಗಿರಿ ಪುರಸಭೆಯ ವಾರ್ಡ್ ಸಂಖ್ಯೆ-16ಕ್ಕೆ ಮೇ. 20ರಂದು ಉಪ ಚುನಾವಣೆ ನಡೆದು ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಜಯಭೇರಿ ಬಾರಿಸಿದ್ದರು.
ದಾವಣಗೆರೆ ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 28ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನ ಹುಲ್ಲುಮನಿ ಗಣೇಶ್ 1884 ಮತಗಳನ್ನು ಪಡೆದರೆ, ಬಿಜೆಪಿಯ ಜೆ.ಎನ್ ಶ್ರೀನಿವಾಸ್ 2565 ಮತಗಳನ್ನು ಪಡೆದು 681 ಮತಗಳ ಅಂತರದಿಂದ ಭರ್ಜರಿ ಜಯಭೇರಿ ಬಾರಿಸಿದ್ದರು. ಜೆ.ಎನ್. ಶ್ರೀನಿವಾಸ್ ಅವರ ಈ ಗೆಲುವು ಅವರ ರಾಜಕೀಯ ಭವಿಷ್ಯದ ನೂತನ ದಾರಿಯ ಹೆಗ್ಗುರುತು ಎಂದು ಹೇಳಲಾಗುತ್ತಿದ್ದು, ಎಸ್.ಎಸ್.ಎಂಗೆ ವ್ಯಾಪಕ ಮುಖಭಂಗವಾಗಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವಿಗೆ ಎಸ್ಎಸ್ಎಂ ಬೀದಿಗಿಳಿದು ರೋಡ್ ಶೋ ನಡೆಸಿದ್ದರು.
ಇನ್ನು ವಾರ್ಡ್ ನಂಬರ್ 37ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ಶ್ವೇತಾ ಶ್ರೀನಿವಾಸ್ 2096 ಮತ ಪಡೆದು ಕಾಂಗ್ರೆಸ್ನ ರೇಖಾರಾಣಿ ಅವರನ್ನು ಸಹ ಸೋಲಿಸಿದ್ದರು. ಈ ಮೂಲಕ ಶ್ವೇತಾ ಶ್ರೀನಿವಾಸ್ 793 ಮತಗಳ ಅಂತರದಿಂದ ಭರ್ಜರಿ ಜಯ ಗಳಿಸಿ ಹೊಸದಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ಒಂದು ಕಡೆ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ ಸಂಖ್ಯಾಬಲಕ್ಕೆ ಇಬ್ಬರು ಸದಸ್ಯರು ಹೆಚ್ಚಾದರೆ, ಇನ್ನೊಂದು ಕಡೆ ಕಾಂಗ್ರೆಸ್ಗೆ ಮುಖಭಂಗವಾಗಿದೆ. ದಾವಣಗೆರೆ ಮಹಾನಗರ ಪಾಲಿಕೆಯಿಂದ ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾಗಿದ್ದ ಶ್ರೀನಿವಾಸ್ ಹಾಗೂ ಪತ್ನಿ ಶ್ವೇತಾ ಶ್ರೀನಿವಾಸ್ ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಜೆ.ಎನ್. ಶ್ರೀನಿವಾಸ್ ಮತ್ತು ಶ್ವೇತಾ ಶ್ರೀನಿವಾಸ್ ದಂಪತಿಗಳು ಬಹುಮತದಿಂದ ಸ್ಪರ್ಧಿಸಿ ಜಯಶೀಲರಾಗಿದ್ದು, ಕಾಂಗ್ರೆಸ್ ಮುಖಭಂಗವಾದಂತಾಗಿದೆ.
garudavoice21@gmail.com 9740365719