ಹೊನ್ನಾಳಿ! ಮಗನ ಕೊಂದ ಕಿಡಿಗೇಡಿಗಳ ಪತ್ತೆಗೆ ಕುಮಾರ್ ತಾಯಿ ದೂರು

ದಾವಣಗೆರೆ: ಹೆಚ್.ಕೆ. ಕುಮಾರ್ ಆದ ನನ್ನ ಮಗನನ್ನು ಯಾವುದೋ ಕಾರಣಕ್ಕೆ ಕೊಲೆ ಮಾಡಿದ ಕೊಲೆಗಾರರನ್ನು ಪತ್ತೆ ಮಾಡುವಂತೆ ಕುಮಾರ್ ತಾಯಿ ಶಾರದಮ್ಮ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹೊನ್ನಾಳಿ ಪಟ್ಟಣದ ದುರ್ಗಿಗುಡಿ ನಿವಾಸಿಯಾದ ಶಾರದಮ್ಮ “ನನಗೆ ಎರಡು ಜನ ಹೆಣ್ಣು ಮಕ್ಕಳು ಒಬ್ಬನೇ ಗಂಡು ಮಗನಿರುತ್ತಾನೆ. ನನ್ನ ಮಗ ಕುಮಾರ ಹೆಚ್.ಕೆ ಈತನಿಗೆ ಚಂದ್ರಕಲಾ ಎಂಬುವರೊ0ದಿಗೆ ಮದುವೆ ಮಾಡಿದ್ದು ಇವರಿಗೆ ಸಂದೇಶ ಎಂಬ ಮಗನು ಸಹ ಇದ್ದಾನೆ.
ಕುಮಾರ್ ವ್ಯವಸಾಯ ಮಾಡಿಕೊಂಡಿದ್ದ ಮೇ. 22ರಂದು ಮದ್ಯಾಹ್ನ 12-30ಕ್ಕೆ ಯಾರದೋ ಬಳಿ ಹಣ ಇಸ್ಕೊಂಡು ಬರುತ್ತೇನೆ ಎಂದು ಮನೆಯಲ್ಲಿ ಹೇಳಿ ತನ್ನ ಕೆಎ-17 ಜಡ್-9455 ಸಂಖ್ಯೆಯ ಕಾರನ್ನು ತೆಗೆದುಕೊಂಡು ಹೋದವನು ರಾತ್ರಿಯಾದರೂ ಮನೆಗೆ ಬರಲಿಲ್ಲ. ಅವನ ಮೊಬೈಲ್ ನಂಬರ್ಗಳಿಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು ಎಂದು ಹೇಳಿದ್ದಾರೆ.
ಕುಮಾರ ಇತ್ತೀಚೆಗೆ ವ್ಯವಸಾಯದ ಜೊತೆಗೆ ರಿಯಲ್ ಎಸ್ಟೇಟ್ ವ್ಯವಹಾರವನ್ನು ಸಹ ಮಾಡಿಕೊಂಡಿದ್ದರಿ0ದ ಅವನ ವ್ಯವಹಾರಗಳಿಗೆ ಹೋಗಿರಬಹುದೆಂದು ತಿಳಿದುಕೊಂಡಿದ್ದೇವು. ಇಂತಹ ಸಂದರ್ಭದಲ್ಲಿ ಹೆಚ್. ಕಡದಕಟ್ಟೆ ಗ್ರಾಮಸ್ಥರು ನಮ್ಮ ಸಂಬ0ದಿ ವಿಜಯೇಂದ್ರಪ್ಪ ಎಂಬುವರಿಗೆ ಪೋನ್ ಮಾಡಿ ಕುಮಾರನು ಹೆಚ್. ಕಡದಕಟ್ಟೆ ಗ್ರಾಮದಿಂದ ನ್ಯಾಮತಿ ರಸ್ತೆಗೆ ಹೋಗಿ ಕೂಡುವ ಮಣ್ಣಿನ ರಸ್ತೆಯ ಪಕ್ಕದಲ್ಲಿ ಹೆಚ್. ಕಡದಕಟ್ಟೆ ಗ್ರಾಮದ ತಿಮ್ಮಪ್ಪ ಎಂಬುವರ ಜಮೀನಿನಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಪಕ್ಕದ ರಸ್ತೆಯಲ್ಲಿ ಕೆಎ-17 ಜಡ್-9455ನೇ ಕಾರು ನಿಂತಿದೆ ಎಂದು ತಿಳಿಸಿದ್ದನ್ನು ವಿಜಯೇಂದ್ರಪ್ಪ ನಮ್ಮ ಮನೆಗೆ ಬಂದು ತಿಳಿಸಿದರು.
ವಿಜಯೇಂದ್ರಪ್ಪನೊ0ದಿಗೆ ನಾನು ಮತ್ತು ನಮ್ಮ ಸಂಬ0ದಿಕರಾದ ಪೈಲ್ವಾನ್ ಸಿದ್ದಪ್ಪ, ಕವಳಿ ಬೆನಕಪ್ಪ, ಮಾದನಬಾವಿ ಮಲ್ಲಿಕಪ್ಪರವರುಗಳು ಅಲ್ಲಿಗೆ ಹೋಗಿ ನೋಡಿದಾಗ ನನ್ನ ಮಗನಿಗೆ ಹೊಟ್ಟೆಯ ಮೇಲೆ ಬೆನ್ನಿಗೆ, ಮುಖಕ್ಕೆ, ತಲೆಗೆ ಹಾಗು ಇತರೆ ಕಡೆಗಳಲ್ಲಿ ಗಾಯಗಳಾಗಿ ರಕ್ತಸ್ರಾವವಾಗಿ ಮುಖ ಮತ್ತು ದೇಹ ರಕ್ತದ ಮಡುವಿನಲ್ಲಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಜಮೀನಿನ ಪಕ್ಕದ ರಸ್ತೆಯ ಸ್ವಲ್ಪ ದೂರದಲ್ಲಿಯೇ ನನ್ನ ಮಗನ ಕೆಎ-17 ಜಡ್-9455 ನೇ ಕಾರು ನಿಂತಿದ್ದು ಅದರ ಚಾಲಕನ ಕಡೆಯ ಡೋರ್ ನ ಗ್ಲಾಸ್ ಹೊಡೆದಿರುತ್ತದೆ.ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶಕ್ಕೆ ನನ್ನ ಮಗನನ್ನು ಕರೆದುಕೊಂಡು ಹೋಗಿ ಯಾವುದೋ ಆಯುಧದಿಂದ ಗಾಯಗೊಳಿಸಿ ಕೊಲೆ ಮಾಡಿರುತ್ತಾರೆ. ನನ್ನ ಮಗ ಕುಮಾರನನ್ನು ಕೊಲೆ ಮಾಡಿದವರನ್ನು ಪತ್ತೆ ಮಾಡಿ ನಮಗೆ ನ್ಯಾಯ ಒದಗಿಸಿಕೊಡಿ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
garudavoice21@gmail.com 9740365719