ರಿಲಯನ್ಸ್ ಮಾರ್ಟ್ ಮುಂಭಾಗ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು ಕಳ್ಳತನ ಮಾಡಿರುವ ಖದೀಮರು!

ದಾವಣಗೆರೆ: ನಗರದ ರಿಲಯನ್ಸ್ ಮಾರ್ಟ್ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿರುವ ಅಪಾರ ಪ್ರಮಾಣದ ಬಂಗಾರ ಸೇರಿದಂತೆ ಇತರೆ ವಸ್ತುಗಳನ್ನು ಖದೀಮರು ದೋಚಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ರಿಲಯನ್ಸ್ ಮಾರ್ಟ್ ಪಾರ್ಕಿಂಗ್ ಸ್ಥಳದಲ್ಲಿ ಕಾರು ನಿಲ್ಲಿಸಿ ರೇಷನ್ ಕೊಳ್ಳಲು ಹೋಗಿ ಬರುವಷ್ಟರಲ್ಲಿ ಕಾರಿನ ಹಿಂಬದಿ ಗ್ಲಾಸ್ ಒಡೆದು ಬ್ಯಾಗುಗಳಲ್ಲಿ ಇಟ್ಟಿದ್ದ ಅಪಾರ ಪ್ರಮಾಣದ ಬಂಗಾರ, ಮೊಬೈಲ್ ಫೋನ್ ಸೇರಿದಂತೆ ಇತ್ಯಾದಿ ವಸ್ತುಗಳನ್ನು ಕಳ್ಳರು ದೋಚಿದ್ದಾರೆ.
ಈ ಕುರಿತು ಶ್ರೇಣಿಕರಾಜ ಎಸ್.ಪಿ ಎಂಬುವವರು ಈ ಕುರಿತು ದೂರು ದಾಖಲಿಸಿದ್ದು, ಅಕ್ಕಳ ಮಗಳ ನಾಮಕರಣ ಕಾರ್ಯಕ್ರಮಕ್ಕಾಗಿ ನಾನು, ನನ್ನ ತಂದೆ, ತಾಯಿ ಹಾಗು ನನ್ನ ಅಕ್ಕ ಮೇ. 22ರಂದು ಮದ್ಯಾಹ್ನ 3 ಗಂಟೆಗೆ ನನ್ನ ಕೆಎ 17-ಜೆಡ್-7390 ಸಂಖ್ಯೆಯ ಬಿಳಿ ಬಣ್ಣದ ಬ್ರಿಜಾ ಕಾರಿನಲ್ಲಿ ದಾವಣಗೆರೆ ನಗರಕ್ಕೆ ಬಂದು, ಮಂಡಿಪೇಟೆಯಲ್ಲಿರುವ ಕುಮಾರ ಜ್ಯುವೇಲರಿ ಅಂಗಡಿಯಲ್ಲಿ ನನ್ನ ಅಕ್ಕನ ಮಗುವಿಗೆ 1.5 ಗ್ರಾಂ ತೂಕದ ಎರಡು ಜೊತೆ ಬಂಗಾರದ ಕಿವಿಯೋಲೆ, (ಅಂದಾಜು ಬೆಲೆ 8 ಸಾವಿರ), ಎರಡು ಜೊತೆ ಬೆಳ್ಳಿ ಚಿಕ್ಕ ಮಕ್ಕಳ ಕಾಲು ಗೆಜ್ಜೆಗಳು, (ತೂಕ 90 ಗ್ರಾಂ ಅಂದಾಜು ಬೆಲೆ 5500/-ರೂಗಳು), 20 ಗ್ರಾಂ ತೂಕದ ಒಂದು ಚಿಕ್ಕ ಬೆಳ್ಳಿ ಲೋಟ್ (ಅಂದಾಜು ಬೆಲೆ 1500ರೂ.), 25 ಗ್ರಾಂ ತೂಕದ ಚಿಕ್ಕ ಮಕ್ಕಳ ಬೆಳ್ಳಿ ಕಡಗ (ಅಂದಾಜು ಬೆಲೆ 1500/- ರೂ) ಗಳನ್ನು ಖರೀದಿ ಮಾಡಿಕೊಂಡಿದ್ದೇವು.
ಈ ಸಾಮಾನುಗಳನ್ನು ಬ್ಯಾಗಿನಲ್ಲಿ ಇಟ್ಟು ಅದೇ ಬ್ಯಾಗಿನಲ್ಲಿ ನನ್ನ ಅಕ್ಕನಿಗೆ ಸೇರಿದ 12 ಗ್ರಾಂ ತೂಕದ ಒಂದು ಬಂಗಾರದ ಸರ (ಅಂದಾಜು ಬೆಲೆ 36 ಸಾವಿರ ರೂಗಳು ಹಾಗು 70 ಗ್ರಾಂ ತೂಕದ ಒಂದು ಜೊತೆ ಬೆಳ್ಳಿ ಕಾಲು ಚೈನುಗಳು ಅಂದಾಜು ಬೆಲೆ 3000/- ರೂಗಳು ಮತ್ತು ನನ್ನ ಅಕ್ಕನ ಓಪ್ಪೋ ಮೊಬೈಲ್ ಪೋನನ್ನು ಅಂದಾಜು ಬೆಲೆ 15 ಸಾವಿರ ರೂಗಳು ಹಾಗು ನನ್ನ ತಾಯಿ ಎಮ್ ಐ ಮೊಬೈಲ್ ಪೋನನ್ನು ಅಂದಾಜು ಬೆಲೆ 5 ಸಾವಿರ ರೂಗಳು ಹಾಗು 40 ಸಾವಿರ ರೂ ನಗದು ಹಣವನ್ನು ಬ್ಯಾಗುಗಳಲ್ಲಿ ಇಟ್ಟಿದ್ದೇವು. ಜ್ಯುವೇಲರಿ ಅಂಗಡಿಯಿ0ದ ಪಿ.ಬಿ ರಸ್ತೆಯಲ್ಲಿರುವ ಶಂಕರ್ ಕಂಫರ್ಟ್ಸ್ ಹತ್ತಿರ ಇರುವ ಲಲಿತ್ ಹೊಟೆಲ್ನಲ್ಲಿ ಊಟ ಮಾಡಿಕೊಂಡು ನಂತರ ಸಂಜೆ 6.50ಕ್ಕೆ ರಿಲಯನ್ಸ್ ಮಾರ್ಟ್ಗೆ ರೇಷನ್ ಕೊಳ್ಳಲು ಹೋದೆವು.
ರಿಲಯನ್ಸ್ ಮಾರ್ಟ್ನಿಂದ ರೇಷನ್ ಖರೀದಿಸಿ ಬರುವಷ್ಟರಲ್ಲಿ ಅಲ್ಲೇ ನಿಲ್ಲಿಸಿದ್ದ ಕಾರಿನ ಹಿಂಬದಿ ಗ್ಲಾಸ್ ಒಡೆದಿರುವುದು ಕಂಡು ಬಂದಿತು. ಕೂಡಲೇ ನಾವುಗಳು ಕಾರಿನಲ್ಲಿ ಇಟ್ಟಿದ್ದ ಬ್ಯಾಗಗಳನ್ನು ನೋಡಿದಾಗ ಬ್ಯಾಗಗಳು ಕಾಣಿಸಲಿಲ್ಲ. ಕಾರಿನ ಗ್ಲಾಸನ್ನು ಒಡೆದು ಕಾರಿನಲ್ಲಿ ಎರಡು ಬ್ಯಾಗುಗಳಲ್ಲಿ ಇಟ್ಟಿದ್ದ ಬಂಗಾರದ ಆಭರಣಗಳು, ಬೆಳ್ಳಿ ಸಾಮಾನುಗಳು 2 ಮೊಬೈಲ್ ಪೋನಗಳನ್ನು ಹಾಗು 40 ಸಾವಿರ ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಮೇಲ್ಕಂಡ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋದ ಕಳ್ಳರನ್ನ ಪತ್ತೆ ಮಾಡಿ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.
garudavoice21@gmail.com 9740365719