ತುಪ್ಪದಹಳ್ಳಿ ಕೆರೆಗೆ ಬಾಗಿನ ಅರ್ಪಿಸಿದ ಸಿರಿಗೆರೆಯ ಶ್ರೀ ಗಳು ಹಾಗೂ ಸಂಸದರು, ಶಾಸಕರು

ದಾವಣಗೆರೆ: ಜಗಳೂರು ತಾಲ್ಲೂಕಿನ ತುಪ್ಪದಹಳ್ಳಿ ಗ್ರಾಮದ ಕೆರೆಗೆ ಸಿರಿಗೆರೆ ಶ್ರೀಗಳು, ಸಂಸದರು, ಶಾಸಕರುಗಳು ಸೇರಿ ಬಾಗೀನ ಅರ್ಪಿಸಿದರು. ಈ ಸಂದರ್ಭದಲ್ಲಿ ಶ್ರೀಗಳು ದಿವ್ಯ ಸಾನ್ನಿಧ್ಯ ವಹಿಸಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ದಾವಣಗೆರೆ ಜಿಲ್ಲೆ ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಜಗಳೂರಿನ ಶಾಸಕ ಎಸ್.ವಿ ರಾಮಚಂದ್ರಪ್ಪ ಅವರು ಸಹ ಮಾತನಾಡಿದರು. 57 ಕೆರೆ ತುಂಬಿಸುವ ಯೋಜನೆಯ ಹೋರಾಟಗಾರರು ಹಾಗೂ ಬಿಜೆಪಿ ಮುಖಂಡರಾದ ದಿವಂಗತ ಡಾ. ಮಂಜುನಾಥ ಗೌಡ್ರು ಅವರಿಗೆ ವೇದಿಕೆಯಲ್ಲಿ 2 ನಿಮಿಷಗಳ ಕಾಲ, ಮೌನಚರಣೆ ನಡೆಸಿದರು. ಈ ಸಂದರ್ಭದಲ್ಲಿ ತಾಲ್ಲೂಕಿನ ಜನಪ್ರತಿನಿಧಿಗಳು, ಕಾರ್ಯಕರ್ತರು, ಮಹಿಳೆಯರು, ಯುವಕರು ಉಪಸ್ಥಿತರಿದ್ದರು.