ದಾವಣಗೆರೆಯಲ್ಲಿ 6 ಜನ ಬೈಕ್ ಕಳ್ಳರ ಬಂಧನ! 38 ದ್ವಿಚಕ್ರ ವಾಹನಗಳ ವಶ

ದಾವಣಗೆರೆ: ಬೈಕ್ ಕಳ್ಳತನ ಮಾಡುತ್ತಿದ್ದ 6 ಜನ ಆರೋಪಿತರನ್ನು ಬಂಧಿಸಿ ಒಟ್ಟು 38 ಪ್ರಕರಣಗಳ ಪೈಕಿ ಅಂದಾಜು ಮೌಲ್ಯ 14,80,000/-ರೂ ಬೆಲೆಯ 38 ದ್ವಿಚಕ್ರ ವಾಹನ (ಬೈಕ್)ಗಳನ್ನು ವಶಪಡಿಸಿಕೊಳ್ಳಲಾಗಿದೆ.
ದಾವಣಗೆರೆ ಜಿಲ್ಲೆಯ ಹರಿಹರ ನಗರ ಪೊಲೀಸ್ ಠಾಣೆ-08, ಮಲೆಬೆನ್ನೂರು ಪೊಲೀಸ್ ಠಾಣೆ-04, ಚನ್ನಗಿರಿ ಠಾಣೆ-02, ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ- 02 ಹದಡಿ ಪೊಲೀಸ್ ಠಾಣೆ-02, ಮಾಯಕೊಂಡ ಪೊಲೀಸ್ ಠಾಣೆ-01, ಸಂತೆಬೆನ್ನೂರು ಪೊಲೀಸ್ ಠಾಣೆ-01, ಹೊನ್ನಾಳಿ ಪೊಲೀಸ್ ಠಾಣೆ-01 ಹಾಗೂ ಹಾವೇರಿ ಜಿಲ್ಲೆಯ ರಟ್ಟಹಳ್ಳಿ ಪೊಲೀಸ್ ಠಾಣೆ-05, ಹಿರೇಕರೂರು ಪೊಲೀಸ್ ಠಾಣೆ – 04, ಬ್ಯಾಡಗಿ ಪೊಲೀಸ್ ಠಾಣೆ – 02, ಹಲಗೇರಿ ಪೊಲೀಸ್ ಠಾಣೆ-01, ರಾಣೆಬೆನ್ನೂರು ನಗರ ಪೊಲೀಸ್ ಠಾಣೆ-01, ಕುಮಾರಪಟ್ಟಣಂ ಪೊಲೀಸ್ ಠಾಣೆ-01, ಹಂಸಬಾವಿ ಪೊಲೀಸ್ ಠಾಣೆ- 02 ಹಾಗೂ ವಿಜಯ ನಗರ ಜಿಲ್ಲೆಯ ಹಿರೆಹಡಗಲಿ ಪೊಲೀಸ್ ಠಾಣೆ -01 ಒಟ್ಟು 38 ದ್ವಿಚಕ್ರ ವಾಹನ (ಬೈಕ್)ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೈಕ್ ಕಳ್ಳತನ ಪ್ರಕರಣಗಳ ಪತ್ತೆಗಾಗಿ ಹರಿಹರ ವೃತ್ತ ನಿರೀಕ್ಷಕರಾದ ಸತೀಶ್ ಕುಮಾರ ನೇತೃತ್ವದಲ್ಲಿ ಹರಿಹರ ನಗರ ಠಾಣೆಯ ಪಿಎಸ್ಐ ಸುರೇಶ (ಕಾ.ಸು & ಸಂಚಾರ), ಲತಾ ವಿ ತಾಳೇಕರ್ ಪಿ.ಎಸ್.ಐ (ತನಿಖೆ) ಹಾಗೂ ಸಿಬ್ಬಂದಿಯವರನ್ನೊಳಗೊ0ಡ ತಂಡವನ್ನು ರಚಿಸಲಾಗಿತ್ತು.
ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಸಹಾಯಕ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಕನ್ನಿಕಾ ಸಿಕ್ರಿವಾಲ್ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಬೈಕ್ ಕಳ್ಳತನದ ಆರೋಪಿತರ ಪತ್ತೆ ಮತ್ತು 38 ಬೈಕ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ತಂಡದ ಅಧಿಕಾರಿಗಳಾದ ಸತೀಶ ಕುಮಾರ ಸಿಪಿಐ ಹರಿಹರ ವೃತ್ತ ರವರ ನೇತೃತ್ವದ ತಂಡವಾದ ಸುರೇಶ ಪಿ.ಎಸ್.ಐ (ಕಾ.ಸು & ಸಂಚಾರ), ಲತಾ ಬಿ ತಾಳೇಕರ್ ಪಿ.ಎಸ್.ಐ (ತನಿಖೆ) ಹಾಗೂ ಸಿಬ್ಬಂದಿಗಳಾದ ನಾಗರಾಜ ಸುಣಗಾರ, ದೇವರಾಜ್ ಸೂರ್ವೆ, ಮಂಜುನಾಥ ಕ್ಯಾತಮ್ಯನವರ್, ಶಿವರಾಜ ಎಂ.ಎಸ್. ಹನುಮಂತ ಗೋಪನಾಳ, ಸತೀಶ್ ಐ.ವಿ, ಸಿದ್ದರಾಜು.ಎಸ್.ಐ, ನಾಗರಾಜ ಸಿ.ಎಂ. ಬೀರಲಿಂಗೇಶ ಗುಡಿಯವರ, ರಿಜ್ಜಾನ್ ನಾಸೂರ್, ಕರಿಯಪ್ಪ, ಕಾಂತರಾಜ್, ದಿಲೀಪ್.ಕೆ.ಸಿ, ಲಿಂಗರಾಜ, ದಿಳ್ಳೆಪ್ಪ ಸಿರಿಗೆರೆ, ರವಿನಾಯ್ಕ್, ಮುರಳಿದರ್, ರಾಘವೇಂದ್ರ, ಉಮೇಶ ಬಿನ್ನಾಳ್, ಶಾಂತರಾಜ್ ಎಂ.ಎಸ್ ರವರುಗಳನ್ನು ಮಾನ್ಯ ಪೊಲೀಸ್ ಅಧೀಕ್ಷಕರಾದ ಸಿ.ಬಿ. ರಿಷ್ಯಂತ್ ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರಾಮಗೊಂಡ ಬಸರಗಿ ಕೆ.ಎಸ್.ಪಿ.ಎಸ್., ರವರುಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
garudavoice21@gmail.com 9740365719