ಮುಸ್ಲಿಂ ಸಮಾಜವತಿಯಿಂದ ಇಂದು ಬಕ್ರೀದ್ ಹಬ್ಬ ಆಚರಣೆ: ಹರಿಹರದ ಇದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ವಿಷೇಶ ನಮಾಜ್

ದಾವಣಗೆರೆ: ಮೌಲಾನ ಹಾಜಿ ಶಂಷುದ್ದೀನ್ ರವರ ನೇತೃತ್ವದಲ್ಲಿ ಸುಮಾರು ಸಾವಿರಾರು ಜನ ನಮಾಜ್ ಮಾಡಿ ಪರಸ್ಪರ ಹಬ್ಬದ ಶುಭಾಶಯ ಕೋರಿದರು.
ಈ ವೇಳೆ ಮೌಲಾನ ಹಾಜಿ ಶಂಷುದ್ದೀನ್ ಮಾತನಾಡಿ ಬಕ್ರೀದ್ ಹಬ್ಬದ ಮಹತ್ವ ತಿಳಿಸಿದರು. ಭಾರತ ದೇಶಕ್ಕೆ ಸಾವಿರಾರು ಜನ ತಮ್ಮ ಪ್ರಾಣ ಅರ್ಪಿಸಿ ಬಲಿದಾನ ನೀಡಿದ್ದಾರೆ. ಮುಸ್ಲಿಂ ಸಮಾಜದ ಕೊಡುಗೆ ಭಾರತ ದೇಶಕ್ಕೆ ಅಪಾರ. ಬಕ್ರೀದ್ ಹಬ್ಬದಲ್ಲಿ ನಾವು ಪ್ರಾಣಿ ಬಲಿ ಕೊಡುವುದು ವಿಷೇಶ ಆದರೆ ಈ ಬಾರಿ ಕರ್ನಾಟಕ ಸರ್ಕಾರ ವಿಧಿಸಿರುವ ನಿಯಮಗಳ ಕಾರಣ ಪ್ರಾಣಿ ಬಲಿ ನೀಡಲಾಗುತ್ತಿಲ್ಲಾ ಸರ್ಕಾರದ ವಿಧಿಸಿರುವ ಕಾನೂನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ನಮ್ಮ ಹರಿಹರ ಅಪಾರ ಶಾಂತಿ ನಗರ ಇಲ್ಲಿ ಕೋಮು ಗಲಭೆಗೆ ನಾವು ಆಸ್ಪದ ನೀಡುವುದಿಲ್ಲಾ ದಯಮಾಡಿ ಶಾಂತಿ ಕದಡಲು ಹೊಗಬೇಡಿ. ಎಲ್ಲ ಸಮಾಜದವರು ಸೇರಿ ಒಟ್ಟಾಗೆ ಬಾಳೊಣ ಎಂದರು.
ಈ ವೇಳೆ ಹರಿಹರ ಶಾಸಕ ಎಸ್ ರಾಮಪ್ಪ. ಆಪ್ ಪಕ್ಷ ಮುಖ್ಯಸ್ಥ ಗಣೇಶ್ ದುರ್ಗದ್. ಗೊವಿಂದ್. ಅಂಜುಮನ್ ಸಲಹ ಸಮಿತಿಯ ಬಿ ಮೊಹಮ್ಮದ್ ಫೈರೋಜ್. ಆಸೀಫ್ ಜುನೇದಿ. ನೂರ್ ಅಹ್ಮದ್. ಶಬ್ಬಿರ್ ಹಳ್ಳಳ್ಳಿ. ನಗರಸಭೆ ಸದಸ್ಯರಾದ ಶಂಕರ್ ಕಟವಕರ್. ಮುಜಮಿಲ್ ಬಿಲ್ಲು. ಕಾಂಗ್ರೆಸ್ ಮುಖಂಡರಾದ ದಾದಪೀರ್. ವಕೀಲ ನಾಗೇಂದ್ರಪ್ಪ. ಸನಾವುಲ್ಲಾ. ಪೈಲ್ವಾನ್ ಅಸೀಫ್. ಮತ್ತು ಹಾಜಿ ಅಲಿ. ಎಸ್.ಡಿ.ಪಿ.ಐ. ಜಿಲ್ಲಾ ಖಜಾಂಚಿ ಎ.ಆರ್ ತಾಹೀರ್ ಇದ್ದರು