‘ಶಿಕ್ಷಕರು-ಶಿಕ್ಷಣ-ಶಿಕ್ಷೆ’ ಸಮಾಜ ತಿದ್ದುವ ಸಾಧನಗಳು – ಡಿಐಜಿ ರಾಮಕೃಷ್ಣ ಪ್ರಸಾದ್

ದಾವಣಗೆರೆ: ಶಿಕ್ಷಕರು ಉತ್ಸಾಹಭರಿತರಾಗಿ ಕಾರ್ಯನಿರ್ವಹಿಸಿದರೆ ಉತ್ತಮ ಭವಿಷ್ಯದ ಪ್ರಜೆಗಳನ್ನು ರೂಪಿಸಬಹುದು,ಶಿಕ್ಷಣದಿಂದ ವಂಚಿತರಾದ ಕೆಲವರು ಸಮಾಜದ್ರೋಹಿಗಳಾದರೆ ಶಿಕ್ಷೆ ಎಂಬ ದಂಡದ ಮೂಲಕ ಸಮಾಜವನ್ನು ಸರಿದಾರಿಗೆ ತರುವ ಕೆಲಸ ನಡೆಯುತ್ತದೆ.
ಸಮಾಜದಲ್ಲಿ ಶಿಕ್ಷಕರ ಪಾತ್ರ ಅತಿ ಅಮೂಲ್ಯವಾದದ್ದು, ಶಿಕ್ಷಕರು ಸದಾ ಕಾಲ ಕಲಿಕಾರ್ಥಿಗಳಾಗಿರಬೇಕು ಮತ್ತು ನಾವಿನ್ಯತೆಯಿಂದ ವಿಷಯದ ಮೇಲೆ ಪ್ರಭುತ್ವ ಹೊಂದಿ ಉತ್ತಮವಾಗಿ ಬೋಧಿಸುವ ಕೈಂಕರ್ಯದಲ್ಲಿ ತೊಡಗಬೇಕು.
ಕೊಂಡಜ್ಜಿಯ ಪೊಲೀಸ್ ಪಬ್ಲಿಕ್ ಶಾಲೆಗೆ ಭೇಟಿ ನೀಡಿದ ಡಿಐಜಿ ರಾಮಕೃಷ್ಣ ಪ್ರಸಾದ್ ಅವರು ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.ಪ್ರತಿ ತರಗತಿಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಪ್ರಕಾಶ್ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು, ಪ್ರಾಂಶುಪಾಲ ಯತೀಶ್ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.