ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಕೆ.ಎಂ.ಚಂದ್ರಶೇಖರಯ್ಯ ನಿಧನ

ದಾವಣಗೆರೆ:ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರು, ಶಾಮನೂರು ಶಿವಶಂಕರಪ್ಪನವರ ಆಪ್ತ ಸಹಾಯಕರಾದ ಕುರುಡಿ ಗಿರೀಶ್ ಅವರ ತಂದೆಯವರಾದ ಕೆ.ಎಂ.ಚಂದ್ರಶೇಖರಯ್ಯ ಅವರು ದಿನಾಂಕ: 29-7-2022ರಂದು ಬೆಳಗಿನ ಜಾವ 12-15 ಗಂಟೆಗೆ ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ.
ಕೆ.ಎಂ.ಚಂದ್ರಶೇಖರಯ್ಯನವರು ಪತ್ನಿ, ಮೂವರು ಪುತ್ರರಾದ ಕುರುಡಿ ಗಿರೀಶ್, ಕೆ.ಎಂ.ಜಗದೀಶ್, ಕೆ.ಎಂ.ಪ್ರಣಿತ್ ಕುಮಾರ್, ಸೊಸೆಯಂದಿರು,ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮನೆ ಸಂಖ್ಯೆ 1675/190, 17ನೇ ಕ್ರಾಸ್, ಲಕ್ಷ್ಮೀ ವೆಂಕಟೇಶ್ವರ ಗ್ರಾನೈಟ್ ಹತ್ತಿರ, ರಂಗನಾಥ ಬಡಾವಣೆ, ದಾವಣಗೆರೆ ಇಲ್ಲಿ ಅಂತಿಮ ದರ್ಶನಕ್ಕಿಡಲಾಗುವುದು.
ಮೂಲತಃ ದಾವಣಗೆರೆ ತಾಲ್ಲೂಕಿನ ಕುರುಡಿ ಗ್ರಾಮದವರಾದ ಚಂದ್ರಶೇಖರಯ್ಯನವರು ಸರಕಾರಿ ಶಿಕ್ಷಕರಾಗಿ ಉತ್ತಮ ಹೆಸರು ಗಳಿಸಿದ್ದು, 2000ರಲ್ಲಿ ರಾಜ್ಯ ಪ್ರಶಸ್ತಿಯನ್ನು ಹಾಗೂ ರಲ್ಲಿ 2002 ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದರು. ನಿವೃತ್ತಿ ನಂತರ ಸಾಹಿತ್ಯ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ದಿನಾಂಕ:29-7-2022 ರಂದು ಮಧ್ಯಾಹ್ನ 3-00 ಗಂಟೆಗೆ ದಾವಣಗೆರೆ ಶಾಮನೂರು ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.