ರಸ್ತೆ ಮೇಲೆ ನಿಂತ ಬಿಡಾಡಿ ದನಗಳು, ರಸ್ತೆ ಸಂಚಾರಕ್ಕೆ ವ್ಯತ್ಯಯ – ಡಾ. ಎಚ್. ಕೆ. ಎಸ್. ಸ್ವಾಮಿ

ದಾವಣಗೆರೆ:ಎಲ್ಲೆಂದರಲ್ಲಿ ಬಿಡಾಡಿ ದನಗಳು ನಿಲ್ಲುವುದರಿಂದ, ವಾಹನ ಸವಾರರು ಜೀವ ಭಯದಲ್ಲಿ ವಾಹನಗಳನ್ನು ಚಾಲನೆ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಸಂಚಾರಕ್ಕೆ ವ್ಯತ್ಯಯ ಉಂಟು ಮಾಡುವಷ್ಟು ಬಿಡಾಡಿ ದನಗಳು, ನಗರದ ರಸ್ತೆಗಳ ಮೇಲೆ ನಿಂತು, ಕುಳಿತು, ಮಲಗಿರುತ್ತವೆ. ಅವುಗಳ ನಿವಾರಣೆಗಾಗಿ ನಗರಸಭೆಯವರು, ಹಸು ಸಾಕುವವರಿಗೆ, ಅವುಗಳನ್ನ ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳುವ0ತೆ ಅವರಿಗೆ ಸೂಚನೆಗಳನ್ನು ನೀಡಬೇಕು. ಏಕೆಂದರೆ ಫುಟ್ಬಾತ್ ಮೇಲೆ ಮತ್ತು ರಸ್ತೆಯ ಅಧ ಭಾಗದ ಮೇಲೆ, ಐದಾರು ದನಗಳು ನಿಂತು, ಸಂಚಾರ ವ್ಯವಸ್ಥೆಯನ್ನೇ ಏರುಪೇರು ಮಾಡುತ್ತಿವೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿಯವರು ದೂರಿದ್ದಾರೆ.
ಮಕ್ಕಳು ರಸ್ತೆ ದಾಟುವಾಗ, ಈ ದನಗಳ ಭಯ ಉಂಟಾಗಿ, ರಸ್ತೆ ಮಧ್ಯೆ ಭಾಗಕ್ಕೆ ಬಂದು, ಪ್ರಾಣ ಕಳೆದುಕೊಳ್ಳುವ ಸಂಭವವಿರುತ್ತದೆ, ಹಾಗೆಯೇ ದನಗಳೇ ಸ್ವಲ್ಪ ಕತ್ತು ತಿರುಗಿಸಿದರೆ ಅಥವಾ ಅದರ ದೇಹವನ್ನ ಚಲಿಸಿದ ತಕ್ಷಣ, ಮಕ್ಕಳು ರಸ್ತೆ ಮಧ್ಯಕ್ಕೆ ಓಡಿಹೋಗುತ್ತಾರೆ. ವೇಗವಾಗಿ ಬರುವ ವಾಹನಗಳಿಗೆ ಸಿಕ್ಕಿ ಪ್ರಾಣ ಕಳೆದುಕೊಳ್ಳುವ ಸಂಭವವಿರುತ್ತದೆ. ಹಾಗೆಯೇ ಸೈಕಲ್ ಸವಾರರು, ದ್ವಿಚಕ್ರವಾಹನರು, ಇಲ್ಲಿ ವೇಗವಾಗಿ ಬಂದಾಗ, ಈ ದನಗಳಿಂದ ತಪ್ಪಿಸಿಕೊಳ್ಳಲಾರದೇ, ಗಾಡಿ ನಿಯಂತ್ರಿಸಲಾಗದೆ ಅಪಘಾತಕ್ಕೀಡಾಗುವ ಸಂಭವ ಹೆಚ್ಚಾಗಿರುತ್ತದೆ. ಹಾಗಾಗಿ ವಾಹನ ಸವಾರರು ಸಹ ದನಗಳು ಇದ್ದಾಗ, ನಿಧಾನವಾಗಿ ಚಲಿಸಿ, ಸ್ವಲ್ಪ ಹೊತ್ತು ಕಾದು, ನಂತರ ಅವುಗಳನ್ನ ಓವರ್ ಟೇಕ್ ಮಾಡಿ, ರಸ್ತೆ ಪಕ್ಕಕ್ಕೆ ಬರಬೇಕಾಗುತ್ತದೆ. ಇಲ್ಲದಿದ್ದರೆ ರಸ್ತೆ ಮಧ್ಯ ಭಾಗಕ್ಕೆ ಬಂದಾಗ, ದೊಡ್ಡ ವಾಹನಗಳಿಗೆ ಸಿಕ್ಕಿ ಅಪಘಾತಗಳಾಗುವ ಸಂಭವಗಳಿರುತ್ತವೆ ಎಂದಿದ್ದಾರೆ.
ಹಾಗಾಗಿ ರಸ್ತೆ ಬದಿಯಲ್ಲಿ, ರಸ್ತೆ ಮೇಲೆ ನಿಂತುಕೊಳ್ಳುವ, ಕುಳಿತುಕೊಳ್ಳುವ ದನಗಳ ಮಾಲೀಕರಿಗೆ, ಆದಷ್ಟು ಅವುಗಳನ್ನು ರಸ್ತೆಗೆ ಬಿಡದಂತೆ ಮನವೊಲಿಸಬೇಕಾಗಿದೆ, ರಸ್ತೆಯ ಮಧ್ಯಭಾಗದಲ್ಲೇ ಕುಳಿತುಕೊಳ್ಳುವ, ಸ್ವಚ್ಚವಾಗಿರುವ ರಸ್ತೆ ಮಧ್ಯದಲ್ಲಿ, ಕುಳಿತುಕೊಂಡು ನಿದ್ರಿಸುವ ದನಗಳ ಸಂಖ್ಯೆಯೂ ಮಳೆಗಾಲದಲ್ಲಿ ಹೆಚ್ಚಾಗುತ್ತಿದೆ. ಇವುಗಳ ಬಗ್ಗೆ ಜನರಲ್ಲಿ ಮತ್ತು ಮಾಲೀಕರಲ್ಲಿ ಜಾಗೃತಗೊಳಿಸಿ, ಅವುಗಳನ್ನು ರಸ್ತೆಯ ಮಧ್ಯೆಕ್ಕೆ ಬರದಂತೆ ತಡೆದು, ಅವರಿಗೆ ಮನೆಯಲ್ಲೇ ಮೇವು, ಆಹಾರ ಒದಗಿಸಿ, ಇಲ್ಲದಿದ್ದರೆ ಅವುಗಳನ್ನ ಗೋಶಾಲೆಗೆ ಕಳುಹಿಸುವ ಎಚ್ಚರಿಕೆ ನೀಡಬೇಕಾಗಿದೆ ಎಂದಿದ್ದಾರೆ.
ನಗರೀಕರಣವಾಗಿರುವ ಪ್ರಯುಕ್ತ ದನಗಳಿಗೆ ಮೇವಿನ ವ್ಯವಸ್ಥೆ ಸಿಗದೇ, ಅವುಗಳಿಗೆ ಯಾವುದಾದರೂ ಮೈದಾನಗಳಿಗೆ ಬಿಡುವ ವ್ಯವಸ್ಥೆ ಮಾಡಬೇಕು, ಅವುಗಳಿಗೆ ಗೋಮಾಳವಾಗಲಿ, ಮೈದಾನವಾಗಲಿ ಸಿಗದೇ, ಅವುಗಳು ರಸ್ತೆ ಬದಿಯಲ್ಲಿ ಆಹಾರ ಸೇವನೆ ಮಾಡುತ್ತಾ ಬರುತ್ತಿರುತ್ತವೆ. ಬಹಳಷ್ಟು ದನಗಳು ರಸ್ತೆಯಲ್ಲಿ ಹಾಕಿರುವ ಹುಲ್ಲು, ತರಕಾರಿ, ಹಣ್ಣು, ಕಸವನ್ನು ತಿನ್ನುತ್ತಾ ಬದುಕುತ್ತಿವೆ. ಜನರು ಹಾಕಿದ ಕಸದ ರಾಶಿಯಲ್ಲಿ ಹೋಗಿ, ಪ್ಲಾಸ್ಟಿಕ್ ಜೊತೆ ಮಿಶ್ರಿತ ಆಹಾರ ಸೇವನೆ ಮಾಡಿ, ತಮ್ಮ ಆರೋಗ್ಯವನ್ನು ಕೆಡಿಸಿಕೊಂಡು, ಅವು ನೀಡುವ ಹಾಲನ್ನು ಸಹ ವಿಷಮಯವಾಗಿಬಿಡುತ್ತಿದೆ. ಜನರು ಸಹ ಪ್ಲಾಸ್ಟಿಕ್ ಕವರ್ನಲ್ಲಿ, ಆಹಾರವನ್ನು ತುಂಬಿ ರಸ್ತೆ ಬದಿಯಲ್ಲಿ ಎಸೆಯಬಾರದು, ರಸ್ತೆ ಬದಿ ಆಹಾರ ಹುಡುಕುತ್ತಾ, ಈ ದನಗಳು ರಸ್ತೆಯ ಬದಿಯ ಮಾರುಕಟ್ಟೆ, ತರಕಾರಿ, ಹಣ್ಣು ಹಂಪಲು ಮಾರುವವರು ಸುತ್ತಮುತ್ತ, ಬೇಕರಿ, ಹೋಟೆಲ್ಗಳ ಸುತ್ತಮುತ್ತ ನಿಲ್ಲುವ ದೃಶ್ಯ ಸಾಮಾನ್ಯವಾಗಿದೆ. ಅವು ಆಹಾರ ಸೇವನೆಯಾದ ಮೇಲೆ, ವಿರಾಮಕ್ಕಾಗಿ ರಸ್ತೆಯ ಬದಿಯಲ್ಲಿಯೋ, ರಸ್ತೆ ಮಧ್ಯದಲ್ಲೋ ಬಂದು ಮಲಗುತ್ತಿವೆ. ಅವುಗಳನ್ನ ನಿಯಂತ್ರಿಸಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಗಾಡಿಗಳ ಹಾರನ್ ಹೊಡೆದರೂ ಸಹ ಪಕ್ಕಕ್ಕೆ ಸರಿಯುವುದಿಲ್ಲ, ಯಾರಾದರೂ ವ್ಯಕ್ತಿಗಳು ಕೋಲಿನಿಂದ ಓಡಿಸಿದರೆ ಮಾತ್ರ ಸ್ವಲ್ಪ ದೂರ ಹೋಗುತ್ತವೆ, ಇಲ್ಲದಿದ್ದರೆ ಅಲ್ಲೇ ಮತ್ತೆ ಬಂದು ನಿಲ್ಲುತ್ತಿವೆ. ಮಳೆಗಾಲದಲ್ಲಿ ರಸ್ತೆಗಳ ಪಕ್ಕ ಕೆಸರು ಹೆಚ್ಚಾಗಿ ಅವುಗಳು ಮಲಗದೇ, ಒಣಗಿದ ರಸ್ತೆಗಳ ಮಧ್ಯೆ, ಪ್ಲೆöÊಓವರಗಳ ಕೆಳಗೆ ಮಲಗಿಬಿಡುತ್ತಿವೆ, ಅವುಗಳಿಗೆ ಮಲಗಲು ರಸ್ತೆಗಳೇ ಸೂಕ್ತವಾದ ಸ್ಥಳವೆಂದು ತಿಳಿದು, ಸರ್ಕಲ್ಗಳಲ್ಲಿ, ರಸ್ತೆ ಮಧ್ಯಭಾಗದಲ್ಲಿ, ಹೈವೇಗಳಲ್ಲಿಯೂ ಸಹ ಮಲಗುವ ದೃಶ್ಯವನ್ನು ನಾವು ಸಾಮಾನ್ಯವಾಗಿ ನೋಡುತ್ತಿದ್ದೇವೆ. ದೊಡ್ಡ ದೊಡ್ಡ ವಾಹನ ಚಾಲಕರಂತೂ ನಿಯಂತ್ರಣ ತಪ್ಪಿ, ಇವುಗಳ ಮೇಲೆಯೇ ವಾಹನ ಚಲಾಯಿಸಿ, ಅವುಗಳ ಸಾವುಗಳಿಗೇ ಮತ್ತು ತಮ್ಮ ಜೀವಕ್ಕೂ ತೊಂದರೆ ತೆಗೆದುಕೊಳ್ಳುತ್ತಾರೆ, ಹಾಗಾಗಿ ಬಿಡಾಡಿ ದನಗಳನ್ನು ಸಾಕುವವರು ಬಲು ಎಚ್ಚರಿಕೆಯಿಂದ ಸಾಕÀಬೇಕಿದೆ ಎಂದಿದ್ದಾರೆ.
ಬಹಳಷ್ಟು ದನಗಳನ್ನು, ರೈಲ್ವೆ ಹಳಿಯ ಮೇಲೆ ಓಡಾಡುತ್ತಾ, ರೈಲ್ವೆಗೆ ಸಿಕ್ಕು ಸಾಯುತ್ತಿರುವ ದೃಶ್ಯವೂ ಸಾಮಾನ್ಯವಾಗಿದೆ, ಗೋಪೂಜೆ ಮಾಡುವ ದೇಶದಲ್ಲಿ, ನಾವು ಬಹಳಷ್ಟು ದನಗಳನ್ನ ನಾವು ರಸ್ತೆ ಅಪಘಾತದಲ್ಲಿ, ರೈಲ್ವೆ ಅಪಘಾತದಲ್ಲಿ ಸಾಯಿಸುವ ದೃಶ್ಯ ಸಾಮಾನ್ಯವಾಗಿದೆ. ಇದರ ಬಗ್ಗೆ ಎಚ್ಚರವಹಿಸಿ, ದನಗಳ ಮಾಲೀಕರು ಇವುಗಳ ನಿಯಂತ್ರಣ ಮಾಡಿಕೊಳ್ಳಬೇಕು ಎಂದಿದ್ದಾರೆ.
ಹಾಗೆ ಪ್ರಾಣಿಗಳಿಗೆ ಆಹಾರ ಸಮಸ್ಯೆಯನ್ನು ಪರಿಹರಿಸಿ, ಅವುಗಳಿಗೆ ಸರಿಯಾದ ಮೇವು, ನೀರು, ಒದಗಿಸಿದಾಗ ಮಾತ್ರ, ಅವು ರಸ್ತೆ ಮಧ್ಯದಲ್ಲಿ ಬಿಡಾಡಿಯಾಗಿ, ಓಡಾಡುವುದು ತಪುö್ಪತ್ತದೆ ಎಂದಿದ್ದಾರೆ. ಪೋಲಿಸ್ ಇಲಾಖೆಯವರು, ನಗರಾಡಳಿತದವರು, ರಸ್ತೆ ಬದಿ ನಿಂತಿರುವ ದನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಅವುಗಳನ್ನ ತೆರವುಗೊಳಿಸುವುದರ ಬಗ್ಗೆ ಪ್ರಯತ್ನ ಪಡಬೇಕು ಎಂದು ವಿನಂತಿಸಿಕೊ0ಡಿದ್ದಾರೆ.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ