ವಿಜ್ಞಾನ ಶಿಕ್ಷಕಿ ವೈಎಸ್ಎಸ್ ( ವೈ ಎಸ್ ಸುಮಂಗಳಾ ದೇವಿ) ನಿಧನ

IMG-20220810-WA0073

ಸಾಸ್ವೆಹಳ್ಳಿ: (ಹೊನ್ನಾಳಿ) ಸಾಹಿತಿ ಕೆ.ಪಿ ದೇವೇಂದ್ರಯ್ಯನವರ ಪತ್ನಿ ನಿವೃತ್ತ ವಿಜ್ಞಾನ ಶಿಕ್ಷಕಿ ವೈ.ಎಸ್.ಸುಮಂಗಳಾ ದೇವಿ (72) ಬುಧವಾರ ಸಂಜೆ ನಿಧನರಾಗಿದ್ದಾರೆ.

ದಾವಣಗೆರೆಯಲ್ಲಿ ಬಿಇಡಿ ಮುಗಿಸಿದ ನಂತರ ಬಿಇಡಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯ ಕಠಿಣ ಎಂದು ಅರಿತು  ಕನ್ನಡದಲ್ಲಿ ವಿಜ್ಞಾನ ಬೋಧನೆ ಎಂಬ ಕನ್ನಡ ಭಾಷೆಯಲ್ಲಿಯೇ ಪುಸ್ತಕ ಬರೆದು ಹಲವರಿಗೆ ವಿಜ್ಞಾನ ವಿಷಯವನ್ನು ಸರಳೀಕರಿಸಿದರು. ವಿಜ್ಞಾನ ಶಿಕ್ಷಕಿಯಾಗಿ ಶಿವಮೊಗ್ಗ ಜಿಲ್ಲೆಯ ಆನವೇರಿಯಲ್ಲಿ ವೃತ್ತಿ ಜೀವನ ಆರಂಭಿಸಿದರು.

ಸಾಸ್ವೆಹಳ್ಳಿಯ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುವಾಗ ನಿವೃತ್ತಿಯಾದರು. ಇವರಿಂದ ಪ್ರೇರಿತರಾದ ಸಾವಿರಾರು ವಿದ್ಯಾರ್ಥಿಗಳು ರಾಜ್ಯಾದ್ಯಾಂತ ನೆಲೆಸಿದ್ದಾರೆ.
ಪತಿ, ಪುತ್ರಿ ಹಾಗೂ ಪುತ್ರರನ್ನ ಅಗಲಿದ್ದಾರೆ.

ಇವರ ಅಂತ್ಯಕ್ರಿಯೆ 11-08-2022 ರ ಗುರುವಾರ ಮಧ್ಯಾಹ್ನ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿಯ ತೋಟದಲ್ಲಿ ನೆರೆವೇರುವುದು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.. ಸಂಪರ್ಕಕ್ಕೆ 8762784931

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!