ದಾವಣಗೆರೆ ಪಿಐ ಗುರುಬಸವರಾಜ್ ಸೇರಿ ರಾಜ್ಯದ 6 ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವರ ಅತ್ಯುತ್ತಮ ತನಿಖಾ ಪದಕ

ಬೆಂಗಳೂರು: ಕರ್ನಾಟಕ ರಾಜ್ಯದ ಆರು ಪೊಲೀಸ್ ಅಧಿಕಾರಿಗಳೂ ದಾವಣಗೆರೆಯ ಓರ್ವ ಇನ್ಸ್ಪೆಕ್ಟರ್ ಸೇರಿದಂತೆ ದೇಶದ ಒಟ್ಟು 151 ರಾಜ್ಯದ ಹಿರಿಯ ಪೊಲೀಸರಿಗೆ 2022ನೇ ಸಾಲಿನ ಅತ್ಯುತ್ತಮ ತನಿಖೆಗೆ ಕೇಂದ್ರ ಗೃಹ ಸಚಿವರ ಪದಕ ದೊರೆತಿದೆ.
ರಾಜ್ಯದ ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಲಕ್ಷ್ಮೀ ಗಣೇಶ್ ಕೆ,
ವೆಂಕಟಪ್ಪ ನಾಯಕ- ಡಿವೈಎಸ್ಪಿ,
ಮೈಸೂರು. ರಾಜೇಂದ್ರ ಗೌತಮ್ -ಡಿವೈಎಸ್ಪಿ.
ಶಂಕರ ಕಾಳಪ್ಪ ಮಾರಿಹಾಳ್- ಡಿವೈಎಸ್ಪಿ.
ಶಂಕರಗೌಡ ವೀರನಗೌಡ ಪಾಟೀಲ್ -ಡಿವೈಎಸ್ಪಿ.
ಗುರುಬಸವರಾಜ ಹೆಚ್ ಹಿರೇಗೌಡರ್ – ಸರ್ಕಲ್ ಇನ್ಸ್ಪೆಕ್ಟರ್ ದಾವಣಗೆರೆ.
ಇವರುಗಳಿಗೆ 2021-2022 ನೇ ಸಾಲಿನಲ್ಲಿ ವಿವಿಧ ಅಪರಾಧಗಳನ್ನು ಅತ್ಯುತ್ತಮವಾಗಿ ತನಿಖೆ ಮಾಡಿರುವ ಸಾಧನೆಗಾಗಿ ಭಾರತ ದೇಶದ ಕೇಂದ್ರ ಗೃಹ ಸಚಿವರ ಶ್ರೇಷ್ಠ ತನಿಖಾ ಪದಕಕ್ಕೆ ಭಾಜನರಾಗಿದ್ದಾರೆ.