ಪತ್ರಕರ್ತರಿಗಾಗಿ ಯುನಿಸೆಫ್ ಹಾಗೂ ಮೈಸೂರು ವಿಶ್ವವಿದ್ಯಾನಿಲಯ ಆಯೋಜಿಸಿದ್ದ ಎರಡು ದಿನದ ಸಂವೇದನಾ ಕಾರ್ಯಗಾರ ಯಶಸ್ವಿ

ಮೈಸೂರು: ಕೋವಿಡ್ ಅವಧಿಯ ನಂತರದ ಮಕ್ಕಳ ಸಮಸ್ಯೆಗಳ ಕುರಿತು ನಡೆಸಿದ ಕಾರ್ಯಗಾರ ಪ್ರತಿಯೊಬ್ಬರಿಗೂ ಅನುಕೂಲವಾಗಿದೆ ಎಂದು ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಪತ್ರಕರ್ತರ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಗಮಿಸಿರುವ ಪತ್ರಕರ್ತರು ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿ, ಮಕ್ಕಳ ಸಮಸ್ಯೆಯನ್ನು ಅರಿತು ಅವರಿಗೆ ಹೆಚ್ಚಿನ ಶಿಕ್ಷಣ ನೀಡುವುದರ ಜೊತೆಗೆ ಕಲಿಕೆಯಲ್ಲಿ ಸಹಾಯ ಮಾಡುವ ಮನಸ್ಥಿತಿಯನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದು ತಮ್ಮದೇ ಆದ ಅಭಿಪ್ರಾಯವನ್ನು ಹಂಚಿಕೊಂಡರು. ಪ್ರತಿ ಜಿಲ್ಲೆಯಲ್ಲೂ ಮಕ್ಕಳಲ್ಲಿ ಬರುವ ಸಮಸ್ಯೆಗಳನ್ನ ಅರಿತು ಮಕ್ಕಳಿಗೆ ಪೂರಕವಾಗುವ ಹೊಸ ಕಲ್ಪನೆಯ ಜೊತೆಗೆ ಅವರಲ್ಲಿ ಹುಮ್ಮಸ್ಸು ಹೆಚ್ಚಿಸುವಂತಹ ಕೆಲಸಗಳನ್ನು ನಿರ್ವಹಿಸಬೇಕು ಎಂದು ಪತ್ರಕರ್ತರು ಅಭಿಪ್ರಾಯ ಪಟ್ಟರು.
ಇನ್ನು ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದ ಪತ್ರಕರ್ತೆ ಚೇತನ ಬೆಳಗೆರೆ, ಮಕ್ಕಳ ಸಮಸ್ಯೆಗಳನ್ನು ಮೊದಲು ನಾವು ಅರಿತು ನಂತರ ಅವುಗಳನ್ನು ಸರಿಪಡಿಸಲು ಚಿಂತಿಸಬೇಕು. ಅಲ್ಲದೆ ಕಲಿಕೆಯಲ್ಲಿ ಮತ್ತು ಜ್ಞಾನದಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಪತ್ರಕರ್ತರಾದ ಪ್ರತಿಯೊಬ್ಬರು ಮಕ್ಕಳ ಗುಣಮಟ್ಟದ ಶಿಕ್ಷಣದ ಬಗ್ಗೆ ಹೆಚ್ಚಿನ ಗಮನವಹಿಸಬೇಕು ಎಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಮಾತ್ರವಲ್ಲದೇ ಸ್ಲಂ ಪ್ರದೇಶ ಗಳಲ್ಲಿ ಕೂಡ ಮಕ್ಕಳ ಬಗ್ಗೆ ವರದಿಯನ್ನು ಮಾಡಲು ಹೆಚ್ಚಿನ ಆದ್ಯತೆ ನೀಡಬೇಕು ಮಕ್ಕಳ ಮನಸ್ಸನ್ನು ಅರಿತು ಅವರಿಗೆ ಸ್ಪೂರ್ತಿ ನೀಡಬೇಕು ಎಂದರು.
ಇನ್ನು ಕಾರ್ಯಗಾರ ಉದ್ದೇಶಿಸಿ ಮಾತನಾಡಿದ ಗದಗ ಜಿಲ್ಲೆಯ ಪತ್ರಕರ್ತ ಪ್ರಭುಸ್ವಾಮಿ, ಮಕ್ಕಳ ಅಭಿವೃದ್ಧಿಗಾಗಿ ಹಾಗೂ ಮಕ್ಕಳ ಉಜ್ವಲ ಭವಿಷ್ಯದ ಜೊತೆಗೆ ಮಕ್ಕಳಿಗೆ ಬೇಕಾದ ಎಲ್ಲಾ ರೀತಿಯ ಸಹಾಯ ಮಾಡಲು ಸದಾ ಸಿದ್ಧವಾಗಿರುತ್ತೆವೆ ಎಂದು ಅಭಿಪ್ರಾಯಪಟ್ಟರು. ದೇಶದಲ್ಲಿರುವ ಮಕ್ಕಳ ಸಮಸ್ಯೆಗಳನ್ನು ಹೋಗಲಾಡಿಸುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು. ದೇಶವನ್ನು ಸಮಾಜವನ್ನು ಮುನ್ನಡೆಸಬೇಕಾದರೆ, ಪ್ರತಿಯೊಬ್ಬರು ಶ್ರಮವಹಿಸಿ ಹಗಲು ರಾತ್ರಿ ಎನ್ನದೆ ದೇಶಕ್ಕಾಗಿ ದುಡಿಯಬೇಕು. ಇಂದಿನ ಮಕ್ಕಳು ಭಾರತ ದೇಶದ ಮುಂದಿನ ಭವ್ಯ ಪ್ರಜೆಗಳಾಗುತ್ತಾರೆ ಅವರ ನಿಲುವುಗಳನ್ನು ನಾವು ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ಮಾಡಬೇಕು.
ಯುನಿಸೆಫ್ ಮತ್ತು ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗ ಆಯೋಜಿಸಿದ್ದ ಎರಡು ದಿನದ ಕಾರ್ಯಗಾರ ಅತ್ಯಂತ ಯಶಸ್ಸು ಕಂಡಿದೆ ಎಂದು ಪ್ರೊಫೆಸರ್ ಸ್ವಪ್ನ ತಿಳಿಸಿದರು.
ಜಿಲ್ಲೆಯ ಮೂಲೆ ಮೂಲೆಗಳಿಂದ ಆಗಮಿಸಿದ್ದ ಪ್ರತಿಯೊಬ್ಬ ಪತ್ರಕರ್ತರಿಗೂ ಅನೇಕ ವಿಷಯಗಳನ್ನು ಕಲಿತುಕೊಳ್ಳಲು ಸಹಾಯ ಮಾಡಿದೆ. ಪತ್ರಕರ್ತರು ತಮ್ಮದೇ ಆದ ರೀತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸಬೇಕು ಜೊತೆಗೆ ಮಕ್ಕಳ ಜೊತೆ ಹೆಚ್ಚಾಗಿ ಬೆರೆಯಬೇಕು. ವಯಸ್ಸಿನ ಅಂತರಾ ಮರೆತು ಎಲ್ಲಾ ತರದ ಚಟುವಟಿಕೆಗಳನ್ನು ಮಕ್ಕಳನ್ನು ಭಾಗಿಯಾಗುವಂತೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.
ರಾಜ್ಯದ ಜಿಲ್ಲೆಗಳಿಂದ ಪತ್ರಕರ್ತರನ್ನು ಕರೆಸಿ ಅವರಿಗೆ ಮಕ್ಕಳ ಸಮಸ್ಯೆಗಳನ್ನು ಬಗ್ಗೆ ಹರಿವು ಮೂಡಿಸಿ ಅವರನ್ನ ಮಕ್ಕಳ ಜೊತೆ ಬೆರೆಯುವಂತೆ ಮಾಡುವುದು ಹಾಗೂ ಮಕ್ಕಳನ್ನು ಜವಾಬ್ದಾರಿಯುತ ವಾಗಿ ಬೆಳೆಸಲು ಪತ್ರಕರ್ತರಿಗಾಗಿ ಈ ಕಾರ್ಯಕಾರವನ್ನ ಆಯೋಜನೆ ಮಾಡಲಾಗಿತ್ತು. ಕಾರ್ಯಗಾರ ಮುಗಿಸಿ ಹೋಗಿದ ಬಳಿಕ ಪ್ರತಿಯೊಬ್ಬರ ವರದಿಯು ವಿಭಿನ್ನ ರೀತಿಯಲ್ಲಿ ಪ್ರಸಾರವಾಗಿ ಮಕ್ಕಳ ಮನಸ್ಸಿನ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಾಗರದಲ್ಲಿ ಭಾಗವಹಿಸಿದ್ದ ಪತ್ರಕರ್ತರಿಗೆ ಸರ್ಟಿಫಿಕೇಟ್ ನೀಡಲಾಯಿತು, ಈ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
A two-day sensitization workshop organized by UNICEF and University of Mysore for journalists was a success