ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ನಿಧನ.! ಸಿಎಂ ಬೊಮ್ಮಾಯಿ ಕಣ್ಣೀರು.!

ಬೆಂಗಳೂರು : ಮುಖ್ಯಮಂತ್ರಿಗಳ ಮಾಧ್ಯಮ ಜವಾಬ್ದಾರಿಯನ್ನು ಹೊತ್ತಿದ್ದ ಗುರುಲಿಂಗಸ್ವಾಮಿ ಹೋಳಿಮಠ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ದೈವಾಧೀನರಾಗಿದ್ದರೆ.ಬೆಳಗ್ಗೆ ಎಂದಿನಂತೆ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಲಘು ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ.ತಕ್ಷಣವೇ ಹತ್ತಿರದ ಆಸ್ಪತ್ರೆ ಯೂನಿಟ್ ಲೈಫ್ ಆಸ್ಪತ್ರೆಗೆ ಕರೆದುಕೊಂಡು ಹೋದರು ಮಾರ್ಗಮಧ್ಯದಲ್ಲಿ ಅಸುನೀಗಿದರು.
2 ದಶಕಗಳ ಪತ್ರಿಕೋದ್ಯಮದಲ್ಲಿ ಸಾಕಷ್ಟು ಪತ್ರಿಕೆ ಮತ್ತು ಟಿವಿ ಮಾಧ್ಯಮದಲ್ಲಿ ಕೆಲಸ ಮಾಡಿದ್ದ ಗುರುಲಿಂಗಸ್ವಾಮಿಯವರು ತಮ್ಮದೇ ಆದ ಸ್ನೇಹಬಳಗವನ್ನು ಸಂಪಾದಿಸಿದ್ದರು.ಬೊಮ್ಮಾಯಿಯವರು ಗೃಹಸಚಿವರಾದಗಿನಿಂದಲೂ ಅವರ ಮಾಧ್ಯಮ ವಿಭಾವವನ್ನು ನೋಡಿಕೊಳ್ಳುತ್ತಿದ್ದು ಇಂದು ಇಲ್ಲವಾಗಿದ್ದರೆ.ಗುರುಲಿಂಗಸ್ವಾಮಿಯವರ ನಿಧನಕ್ಕೆ ಇಡೀ ಮಾಧ್ಯಮ ಬಳಕ ಕಂಬನಿಮಿಡಿದಿದೆ.ಮೃತರ ಸ್ವಗೃಹಕ್ಕೆ ಅನೇಕ ಹಿರಿಯ ಪತ್ರಕರ್ತರು,ಸಂಪಾದಕರು ಆಗಮಿಸಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಗುರುಲಿಂಗಸ್ವಾಮಿ ನಿಧನಕ್ಕೆ ಕಣ್ಣೀರಾಕಿದ ಸಿಎಂ ಬೊಮ್ಮಾಯಿ
ತಮ್ಮ ಸಿಬ್ಬಂದಿಯ ಸಾವಿನ ವಿಷಯ ತಿಳಿದು ಸಿಎಂ ಬೊಮ್ಮಾಯಿ ಗುರುಲಿಂಗಸ್ವಾಮಿಯವರ ಸ್ವಗೃಹಕ್ಕೆ ಆಗಮಿಸಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದುಕೊಂಡರು.ಈ ವೇಳೆ ಗುರುಲಿಂಗಸ್ವಾಮಿಯವರ ಪತ್ನಿ ಮತ್ತು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ಗುರುಲಿಂಗಸ್ವಾಮಿಯವರು ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದು,ಮಕ್ಕಳ ಜೊತೆ ಮಾತನಾಡುವಾಗ ಸಿಎಂ ಬೊಮ್ಮಾಯಿ ಕೂಡ ಕಣ್ಣೀರಿಟ್ಡರು.ಧೈರ್ಯ ತೆಗೆದುಕೊಳ್ಳಿ ನಿಮ್ಮೊಂದಿಗೆ ನಾನಿದ್ದೇನೆ ಎಂದು ಭರವಸೆ ನೀಡಿದರು.
ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಗುರುಲಿಂಗ ಸ್ವಾಮಿ ನನ್ನ ಯುವ ಸ್ನೇಹಿತ.ಅವರ ಅಕಾಲಿಕ ಮರಣ ನನಗೆ ದುಃಖ ತಂದಿದೆ.
ನನಗೆ 20 ವರ್ಷದಿಂದ ಪರಿಚಯ.ರಾಮದುರ್ಗದ ಹಳ್ಳಿಯಿಂದ ಬಂದು ಕಷ್ಟಪಟ್ಟು ಓದಿ ಪಾಸ್ ಆಗಿ ಮಾಧ್ಯಮದಲ್ಲಿ ಕೆಲಸ ಪಡೆದುಕೊಂಡ.ಪತ್ರಿಕೋದ್ಯಮದ ಆರಂಭದಿನಗಳಿಂದಲೂ ನಾನು ಅವರನ್ನು ಬಲ್ಲೆ.ಅನೇಕ ಟಿ.ವಿ ಮಾಧ್ಯಮದಲ್ಲೂ ಕೆಲಸ ಮಾಡಿದ್ದರು.ಅತ್ಯಂತ ಕ್ರಿಯಾಶೀಲ ಪತ್ರಕರ್ತರಾಗಿದ್ದರು
ವರದಿಯ ನಿಖರತೆ ಪಡೆದುಕೊಂಡು ಮುಂದುವರೆಯುವ ಜವಾಬ್ದಾರಿಯುತ ಪತ್ರಕರ್ತನಾಗಿದ್ದರು.ಅವನೊಬ್ಬನೇ ಬೆಳೆಯಲಿಲ್ಲ, ತನ್ನ ಜೊತೆ ಇತರರನ್ನೂ ಬೆಳೆಸಿದ್ದ.ಸಹಾಯ ಕೇಳಿ ಬಂದವರಿಗೆ ಇಲ್ಲ ಎನ್ನುತ್ತಿರಲಿಲ್ಲ.ಗೃಹ ಸಚಿವರಾಗಿದ್ದಾಗಿನಿಂದ ನನ್ನ ಜೊತೆ ಇದ್ದ.ಪ್ರತಿ ದಿನ ಹಲವರಿಗೆ ಸಹಾಯ ಮಾಡುತ್ತಿದ್ದ.
ಸಿಎಂ ಫಂಡ್ ಫೈಲಿಗೆ ಸಹಿ ಹಾಕಿಸಿ ಸಹಾಯ ಮಾಡ್ತಿದ್ದ.
ನಿನ್ನೆ ಎಂಟು ಗಂಟೆಗೆ ಮನೆಗೆ ಹೋಗ್ತೀನಿ ಅಂದ. ಬೆಳಗ್ಗೆ ಎದ್ದು ಇಂತಹ ಸುದ್ದಿ ಬರುತ್ತೆ ಅಂತ ಅಂದುಕೊಂಡಿರಲಿಲ್ಲ.ಇದು ದುಃಖಕರ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.