ಎಸ್ ಎಸ್ ಮಲ್ಲಿಕಾರ್ಜುನ್ ರ 55 ನೇ ಜನ್ಮದಿನೋತ್ಸವ ಹಿನ್ನೆಲೆ ‘ಕಿರುಚಿತ್ರದ ವಿಡಿಯೋ’ ಬಿಡುಗಡೆ

ದಾವಣಗೆರೆ: ಮಾಜಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್ ರವರು ಸೆಪ್ಟೆಂಬರ್ 22 ರಂದು ತಮ್ಮ 55ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ, ಅವರ ಅಭಿಮಾನಿ ಬಳಗದ ವತಿಯಿಂದ ಎಂಬಿಎ ಕಾಲೇಜ್ ಆವರಣದಲ್ಲಿ ಅದ್ದೂರಿಯಾಗಿ ಹುಟ್ಟು ಹಬ್ಬದ ಆಚರಣೆ ಹಮ್ಮಿಕೊಳ್ಳಲಾಗಿದೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯದ ಹಾಗೂ ಜಿಲ್ಲೆಯ ಘಟಾನುಘಟಿ ನಾಯಕರುಗಳು ದರ್ಶನ್, ಹರಿಕೃಷ್ಣ ಸೇರಿದಂತೆ ಪ್ರಸಿದ್ಧ ಚಲನಚಿತ್ರ ನಟರು, ಸಂಗೀತ ನಿರ್ದೇಶಕರು ಆಗಮಿಸಲಿದ್ದಾರೆ ಅವರೆಲ್ಲ ಅತಿಥಿಗಳು.
ತನ್ನ ಜನರಿಗೆ ನಿರಂತರವಾಗಿ ಕುಡಿಯುವ ನೀರು ದೊರೆಯಲಿ ಎಂಬ ಮುಂದಾಲೋಚನೆಯಿಂದ 20 ವರ್ಷ ಮೊದಲೇ ಕುಂದವಾಡ ಕೆರೆ ನಿರ್ಮಿಸಿ, ನಿರಂತರವಾಗಿ ಕುಡಿಯುವ ನೀರು ದೊರೆಯುವಂತೆ ಮಾಡಿದ ಆ ನಾಯಕನ ಹುಟ್ಟು ಹಬ್ಬಕ್ಕೆ ನಾವುಗಳು ಆಗಮಿಸಬೇಕಲ್ಲವೇ…..
ಮುಂದಿನ ದಿನಗಳಲ್ಲಿ ಬಡವರು ದಾವಣಗೆರೆ ನಗರದಲ್ಲಿ ಒಂದು ನಿವೇಶನವನ್ನು ಕೊಳ್ಳಲು ಸಾಧ್ಯವಿಲ್ಲ ಎಂದು ಮನಗಂಡು, 20 ವರ್ಷದ ಮೊದಲೇ 15 ಸಾವಿರ ಆಶ್ರಯ ಮನೆ ನೀಡಿ, 15 ಸಾವಿರ ಕುಟುಂಬಗಳಿಗೆ ನೆಮ್ಮದಿಯ ಜೀವನ ನಡೆಸಲು ಕಾರಣೀ ಭೂತನಾದ ನಾಯಕನ ಹುಟ್ಟುಹಬ್ಬಕ್ಕೆ ನಾವುಗಳು ಹೋಗಲೇ ಬೇಕಲ್ಲವೇ…..
ನಗರವೆಲ್ಲ ಗುಂಡಿಗಳಿಂದ ಕೂಡಿದ್ದ ಸಂದರ್ಭದಲ್ಲಿ, ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶದ ಹೊಲಗಳ ರಸ್ತೆಗಳನ್ನು ಸಹ ಸಿಮೆಂಟ್ ರಸ್ತೆಯನ್ನಾಗಿಸಿ ನಗರವನ್ನು ಸುಂದರವಾಗಿಸುವ ಜೊತೆಗೆ ನಮ್ಮ ಆಸ್ತಿಗಳ ಮೌಲ್ಯವನ್ನು ದುಪ್ಪಟ್ಟು ಮಾಡಿ ನಮ್ಮನ್ನು ಆರ್ಥಿಕವಾಗಿ ಸಬಲರನ್ನಾಗಿಸಿದ ನಾಯಕನ ಹುಟ್ಟುಹಬ್ಬಕ್ಕೆ ನಾವುಗಳು ಹೋಗಲೇ ಬೇಕಲ್ಲವೇ…..
ದೇಶ ವಿದೇಶಗಳಲ್ಲಿ ಟಿವಿ ಗಳ ಮೂಲಕ ನೋಡುತ್ತಿದ್ದ ವಿದ್ಯುತ್ ಅಲಂಕೃತ ದೀಪಗಳನ್ನು, ವಿದೇಶಿ ಗಿಡಗಳನ್ನು ನಮ್ಮ ನಗರಕ್ಕೆ ತಂದು ನಗರವನ್ನು ಸುಂದರವಾಗಿಸುವ ಜೊತೆಗೆ ನಮ್ಮಗಳ ಸಂತೋಷಕ್ಕೆ ಕಾರಣಿ ಭೂತನಾದ ನಾಯಕನ ಹುಟ್ಟುಹಬ್ಬಕ್ಕೆ ನಾವುಗಳು ಹೋಗಲೇ ಬೇಕಲ್ಲವೇ…..
ಸಮುದಾಯ ಸಮುದಾಯಗಳ ನಡುವೆ ವಿಷ ಬೀಜ ಬಿತ್ತುವ ನಾಯಕರುಗಳು ಇರುವಂತ ಸಂದರ್ಭದಲ್ಲಿ, ಪ್ರತಿಯೊಂದು ಸಮುದಾಯದ ಮುಖಂಡರನ್ನು ಕರೆದು ಅತಿ ಕಡಿಮೆ ದರದಲ್ಲಿ ಸರ್ಕಾರಿ ನಿವೇಶನ ನೀಡುವ ಮೂಲಕ, ಪ್ರತಿಯೊಂದು ಸಮುದಾಯವೂ ಆರ್ಥಿಕವಾಗಿ ಸಬಲರನ್ನಾಗಿಸುವ ಯೋಜನೆ ಮಾಡಿದ ನಾಯಕನ ಹುಟ್ಟುಹಬ್ಬಕ್ಕೆ ನಾವುಗಳು ಹೋಗಲೇ ಬೇಕಲ್ಲವೇ….
ಸ್ಮಾರ್ಟ್ ಸಿಟಿ ಎಂಬ ಯೋಜನೆಯ ಕಲ್ಪನೆ ಪ್ರಾರಂಭವಾದ ಸಂದರ್ಭದಲ್ಲಿ, ಅದಕ್ಕೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆ ಮಾಡುವ ಮೂಲಕ ಪ್ರಥಮ ಹಂತದಲ್ಲಿಯೇ ನಗರಕ್ಕೆ ಸ್ಮಾರ್ಟ್ ಸಿಟಿ ಯೋಜನೆ ತರಲು ಕಾರಣಿಬೂತನಾದ ನಾಯಕನ ಹುಟ್ಟುಹಬ್ಬಕ್ಕೆ ನಾವುಗಳು ಹೋಗಲೇ ಬೇಕಲ್ಲವೇ….
ವಿಶ್ವದಲ್ಲಿಯೇ 2 ನೇ ಸ್ಥಾನ ಪಡೆದಂತಹ ಗಾಜಿನ ಮನೆ, ವಿಶ್ವದಲ್ಲಿಯೇ ವಿಶಿಷ್ಟವಾದ ಜಾನುವಾರು ಮಾರುಕಟ್ಟೆ ಹೀಗೆ ಅವರ ಅಭಿವೃದ್ಧಿ ಕಾರ್ಯಗಳಿಗೆ ಕೊನೆಯಿಲ್ಲ, ಇಂಥ ನಾಯಕನ ಸಾರ್ಥಕ ಹುಟ್ಟುಹಬ್ಬದ ಸಂದರ್ಭದಲ್ಲಿ ನಾವುಗಳೆಲ್ಲ ತೆರಳಿ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುತ್ತ, ನಿಂತಿರುವ ಅಭಿವೃದ್ಧಿ ಕಾರ್ಯಗಳ ಚಾಲನೆಗೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಆಶ್ವಾಸನೆ ನೀಡಲು ನಾವುಗಳು ನಾಳೆ ಎಂಬಿಎ ಕಾಲೇಜ್ ಆವರಣಕ್ಕೆ ತೆರಳೋಣವೇ…..
ನೀವು ಬನ್ನಿ ಭ್ರಷ್ಟಾಚಾರ ರಹಿತ, ದೂರ ದೃಷ್ಟಿಯುಳ್ಳ, ಅಭಿವೃದ್ಧಿ ಬಯಸುವ ನಿಮ್ಮ ಸ್ನೇಹಿತರನ್ನು ಕರೆತನ್ನಿ, ನಾಳೆ ತಾನು ಮಾಡಿದ ಅಭಿವೃದ್ಧಿ ಕಾರ್ಯಗಳು ಜನರ ರೂಪದಲ್ಲಿ ನನ್ನ ಮುಂದಿದೆ ಎನ್ನುವ ಭಾವನೆ ಅಭಿವೃದ್ದಿ ನಾಯಕನಿಗೆ ಬರುವಂತೆ ಮಾಡೋಣ ಅಲ್ಲವೇ…….
*ಕೆ.ಎಲ್.ಹರೀಶ್ ಬಸಾಪುರ.*