ಲಿಂಗವ್ವನಾಗತಿಹಳ್ಳಿ ಗ್ರಾಮದ ಸಂಪರ್ಕ ಕಡಿತ.!ಹರಿಯುವ ನೀರಿನಲ್ಲಿ ರಸ್ತೆ ದಾಟಲು ಗ್ರಾಮಸ್ತರ ಹರಸಾಹಸ

ದಾವಣಗೆರೆ: ರಾಜ್ಯಾದ್ಯಂತ ಶನಿವಾರ ಸುರಿದ ಮಳೆಗೆ ಗ್ರಾಮಸ್ಥರು ಅನೇಕ ತೊಂದರೆಗಳಾಗಿವೆ. ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಹೋಬಳಿ ಚಿಕ್ಕಬೆನ್ನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಲಿಂಗವ್ವನಾಗತಿಹಳ್ಳಿ ಗ್ರಾಮದ ಸಂಪರ್ಕ ರಸ್ತೆಯ ಮೇಲೆ ನೀರು ರಭಸದಿಂದ ಹರಿಯುತ್ತಿದೆ ಇದರಿಂದ ಮೂರು ಗ್ರಾಮದ ರಸ್ತೆ ಸಂಪರ್ಕ ಕಡಿತವಾಗಿದೆ.
ರೈತರು ಹೊಲಗಳಿಗೆ ಹೋಗುವ ರಸ್ತೆ ಸಂಪರ್ಕ ಕಡಿತವಾಗಿದೆ. ಇದರಿಂದ ಗ್ರಾಮಸ್ಥರು ಟ್ರಾಕ್ಟರ್ ಮೂಲಕ ಹಾಗೂ ಹರಿಯುವ ನೀರಿನಲ್ಲಿ ಹರ ಸಾಹಸಪಟ್ಟು ಚಲಿಸುವಂತಾಗಿದೆ.
ಇದರ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಿ ಸಾರ್ವಜನಿಕರಿಗೆ ಹಾಲಿ ರಸ್ತೆಗೆ ಮೇಲ್ಸೇತುವೆ ನಿರ್ಮಾಣ ಮಾಡಿಕೊಡಬೇಕೆಂದು ಲಿಂಗವ್ವ ನಾಗತಿಹಳ್ಳಿ, ಕರಿಯಮ್ಮನಹಟ್ಟಿ, ಹನುಮನಹಳ್ಳಿ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.