ಡಿಸಿಪ್ಲಿನರಿ ಪ್ರೋಸಿಡಿಂಗ್ಸ್ ತಿದ್ದುಪಡಿಯಾದರೆ ಪೊಲೀಸರಿಗೆ ಸಂಕಷ್ಟ.! ಸರ್ಕಾರದ ನಡೆ ವಿರುದ್ಧ ಧ್ವನಿ ಎತ್ತಿದ ನಿವೃತ್ತ PSI ಕೃಷ್ಣಪ್ಪ

ಡಿಸಿಪ್ಲಿನರಿ ಪ್ರೋಸಿಡಿಂಗ್ಸ್ ತಿದ್ದುಪಡಿಯಾದರೆ ಪೊಲೀಸರಿಗೆ ಸಂಕಷ್ಟ
ದಾವಣಗೆರೆ : ಪಿಸಿಯಿಂದ ಡಿಎಸ್ಪಿ ತನಕ ತಪ್ಪಿತಸ್ಥ ಸಿಬ್ಬಂದಿಗೆ ವಿಧಿಸಲಾಗುವ ದಂಡನೆಯ ನಿಯಮ 4 ‘ಎ’ ಮತ್ತು ಅದರ ಉಪನಿಯಮಗಳಲ್ಲಿ ನಿರ್ದಿಷ್ಟಪಡಿಸಿದ ದಂಡನೆಯಾಗಿದ್ದಲ್ಲಿ ಇನ್ಮುಂದೆ ಯಾವುದೇ ಮೇಲ್ಮನವಿಯನ್ನು ಸಲ್ಲಿಸಲು ಅವಕಾಶವಿಲ್ಲ ಎಂದು ಕರಡು ಪ್ರತಿಯಲ್ಲಿ ನಮೂದಿಸಲಾಗಿದ್ದು, ನಿವೃತ್ತ ಪೊಲೀಸರಿಂದ ವಿರೋಧ ವ್ಯಕ್ತವಾಗಿದೆ.
ಕರ್ನಾಟಕ ರಾಜ್ಯ ಪೊಲೀಸ್ (ಡಿಸಿಪ್ಲಿನರಿ ಪ್ರೋಸಿಡಿಂಗ್ಸ್) ತಿದ್ದುಪಡಿ ನಿಯಮ-2022ರ ಕರಡನ್ನು ಸರಕಾರ ರಾಜ್ಯಪತ್ರದಲ್ಲಿ ಪ್ರಕಟಿಸಿದ್ದು, ಆಕ್ಷೇಪಣೆಗಳನ್ನೂ ಆಹ್ವಾನಿಸಿದೆ. ಹೊಸ ತಿದ್ದುಪಡಿ ನಿಯಮದ ಪ್ರಕಾರ ತಪ್ಪು ಮಾಡಿದ ಪೊಲೀಸರು ಈಗ ಕೋರ್ಟ್ಗೆ ಹೋಗಿಯೇ ತಮ್ಮ ಮೇಲಿರುವ ಆಪಾದನೆಯನ್ನು ಬಗೆಹರಿಸಿಕೊಳ್ಳಬೇಕು. ಈ ನಿಯಮ ಜಾರಿಯಾದಲ್ಲಿ ಇನ್ನು ಮುಂದೆ ಆಪಾದಿತ ಸಿಬ್ಬಂದಿಯು ತಮ್ಮ ಇನ್ಕ್ರೀಮೆಂಟ್ ಮತ್ತು ಬಡ್ತಿ ತಡೆಹಿಡಿದಾಗ ಮನವಿ ಸಲ್ಲಿಸುವಂತಿಲ್ಲ.
ಪ್ರಸ್ತುತ ‘ಮೇಲಾಧಿಕಾರಿಗಳಿಗೆ ವಿವೇಚನಾ ಅಕಾರ ನೀಡಲಾಗಿದ್ದು, ಅವರು ಅವರದ್ದೇ ಆದ ವಿವೇಚನೆ ಬಳಸಿ ಕೆಳಗಿನ ಅಕಾರಿಗಳ ಮೇಲೆ ಕ್ರಮ ಕೈಗೊಳ್ಳಬಹುದು. ಆದರೆ ಈ ನಿಯಮ ಜಾರಿಯಾದರೆ ಮೇಲಾಧಿಕಾರಿ ತನ್ನ ವಿವೇಚನಾ ಅಧಿಕಾರ ಬಳಸಿ ಪೂರ್ವಗ್ರಹ ಪೀಡಿತರಾಗಿ, ಯಾರದೋ ಮಾತನ್ನು ಕೇಳಿ ಮನಸಿಗೆ ಬಂದಹಾಗೆ ಶಿಸ್ತು ಕ್ರಮ ಕೈಗೊಳ್ಳಬಹುದು. ಇದರಿಂದ ಪೊಲೀಸ್ ಸಿಬ್ಬಂದಿಗಳಿಗೆ ಆತಂಕ ಶುರುವಾಗಿದೆ.
ಪ್ರಸ್ತುತ ಇರುವ ನಿಯಮವೇನು : ಪ್ರಸ್ತುತ ನಿಯಮದ ಪ್ರಕಾರ ಪಿಸಿ ಯಿಂದ ಡಿಎಸ್ಪಿಯನ್ನು ಅಮಾನತು ಪಡಿಸಿದರೆ ಐಜಿ ಅಥವಾ ಎಸ್ಪಿ ಬಳಿ ಹೋಗಿ ತಮ್ಮ ಅಮಾನತುನ್ನು ರದ್ದುಪಡಿಸಬಹುದಾಗಿದೆ. ಆದರೆ ಹೊಸ ನಿಯಮದ ಪ್ರಕಾರ ಕೋರ್ಟ್ಗೆ ಹೋೋಗಿ ಅಮಾನತನ್ನು ರದ್ದುಪಡಿಸಿಕೊಳ್ಳಬೇಕು. ಕೋರ್ಟ್ಗೆ ಹೋದರೆ ದೀರ್ಘವಾದ ಸಮಯಬೇಕಾಗಿದ್ದು, ಅಮಾನತು ರದ್ದುಪಡಿಸುವ ತನಕ ಅವನಿಗೆ ದೊರೆಯುವ ವೇತನದಲ್ಲಿ ಕಡಿತವಾಗುತ್ತದೆ. ಹಣವೂ ಖರ್ಚಾಗಲಿದೆ. ಇದು ಪೊಲೀಸರಿಗೆ ಬೆಂಕಿ ಉಂಡೆಯಾಗಿದೆ.
ಪ್ರಸ್ತುತ ಕೆಲವೇ ಕೆಲ ಸಿಬ್ಬಂದಿಗೆ ಮಾತ್ರ ಔರಧ್ಕರ ವರದಿ ಜಾರಿಯಾಗಿದ್ದು, ಪೊಲೀಸ್ ಇಲಾಖೆಯಲ್ಲಿ ವರ್ಷಗಳ ಕಾಲ ಕೆಲಸ ಮಾಡಿದ ಸಿಬ್ಬಂದಿಗೆ ತಾರತಮ್ಯ ಮಾಡಲಾಗಿದೆ. ಅಲ್ಲದೇ ಅವರಿಗೆ ಆಗುವ ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಲು ಅವಕಾಶವಿಲ್ಲ. ಈಗ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವುದನ್ನು ತಪ್ಪಿಸಲಾಗುತ್ತಿದೆ. ಈ ಮೂಲಕ ಪೊಲೀಸ್ ಸಿಬ್ಬಂದಿಯ ತಾಳ್ಮೆಯನ್ನು ಪರೀಕ್ಷಿಸಲು ಹೊರಟಿದೆ. ಒಂದು ವೇಳೆ ಹಿರಿಯ ಅಕಾರಿಗಳ ತಾಳಕ್ಕೆ ತಕ್ಕಂತೆ ಕುಣಿಯದೇ ಹೋದರೆ ವಿನಾಕಾರಣ ಶಿಸ್ತು ಕ್ರಮ ಕೈಗೊಳ್ಳುವುದು ಹೆಚ್ಚಾಗಲಿದೆ. ಅಲ್ಲದೇ ಮೇಲಾಧಿಕಾರಿಗಳು ಯಾವುದೇ ತಪ್ಪು ಮಾಡಿದರೂ ಪ್ರಶ್ನಿಸುವಂತಿಲ್ಲ. ಇನ್ನು ಬೇರೆ ಇಲಾಖೆಗಳಿಗೆ ಅನ್ವಯವಾಗದ ನಿಯಮಗಳು ಪೊಲೀಸ್ ಇಲಾಖೆಗೆ ಏಕೆ’ ಎಂದು ನಿವೃತ್ತ ಪೊಲೀಸರು ಪ್ರಶ್ನಿಸುತ್ತಿದ್ದಾರೆ. ಅಲ್ಲದೇ ಈ ತಿದ್ದುಪಡಿ ನಿಯಮವನ್ನು ಜಾರಿಗೆ ತರಬಾರದು. ಮೇಲಾಧಿಕಾರಿಗಳು ಕ್ರಮ ಕೈಗೊಂಡಾಗ ಅದನ್ನು ಪ್ರಶ್ನಿಸಿ ಮೂರು ತಿಂಗಳೊಳಗೆ ಮೇಲ್ಮನವಿ ಸಲ್ಲಿಸಲು ಇದ್ದ ಅವಕಾಶವನ್ನು ಮುಂದುವರಿಸಬೇಕು ಎಂದು ನಿವೃತ್ತ ಪೊಲೀಸರು ಒತ್ತಾಯಿಸುತ್ತಿದ್ದಾರೆ.
ಕರ್ನಾಟಕ ರಾಜ್ಯ ಪೊಲೀಸ್ (ಡಿಸಿಪ್ಲಿನರಿ ಪ್ರೋಸಿಡಿಂಗ್ಸ್) ತಿದ್ದುಪಡಿ ನಿಯಮ-2022ರ ಕರಡನ್ನು ಸರಕಾರ ರಾಜ್ಯಪತ್ರದಲ್ಲಿ ಪ್ರಕಟಿಸಿದ್ದು, ಆಕ್ಷೇಪಣೆಗಳನ್ನೂ ಆಹ್ವಾನಿಸಿದ್ದು, ಸಮಯ ಮುಗಿದಿದೆ. ಈ ನಿಯಮ ತಿದ್ದುಪಡಿಯಾದರೆ ಮೇಲಾಧಿಕಾರಿಗಳು ಹೇಳಿದ ಹಾಗೆ ಕೇಳಬೇಕು. ಕೇಳದೆ ಹೋದರೆ ಪೊಲೀಸರ ಮೇಲೆ ಕ್ರಮ. ಅಮಾನತು ಹಿಂದೆ ತೆಗೆದುಕೊಳ್ಳಲು ಕೋರ್ಟ್ಗೆ ಹೋಗಬೇಕು. ಅಷ್ಟೋತ್ತಿಗೆ ಸಮಯ ಹೆಚ್ಚಾಗಲಿದ್ದು, ಹಣದ ಜತೆ ಪೊಲೀಸರು ಮಾನಸಿಕ ನೆಮ್ಮದಿ ಕೆಡಿಸಿಕೊಳ್ಳಬೇಕಾಗುತ್ತದೆ.
– ಕೃಷ್ಣಪ್ಪ, ನಿವೃತ್ತ ಪೊಲೀಸ್