ವಿದ್ಯಾರ್ಥಿಗಳ ಕಷ್ಟಕ್ಕೆ ಸ್ಪಂದಿಸಿದ VTU ಉಪ ಕುಲಪತಿ ಡಾ.ವಿದ್ಯಾಶಂಕರ್ ಅವರಿಗೆ ಧನ್ಯವಾದ ಅರ್ಪಿಸಿದ ವಿದ್ಯಾರ್ಥಿಗಳು

ದಾವಣಗೆರೆ: ದಶಕದಿಂದ ಯಾವೊಬ್ಬ ಉಪ ಕುಲಪತಿಗಳು ವಿದ್ಯಾರ್ಥಿಗಳ ನೋವಿಗೆ ಸ್ಪಂದಿಸಿ, ಇಷ್ಟು ಶೀಘ್ರದಲ್ಲಿ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯ ಮಾಡಿರಲಿಲ್ಲ.
ವಿಟಿಯು ನಿಂದ ಕಡೆಗಣಿಸಲ್ಪಟ್ಟ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅನೇಕ ಬೇಡಿಕೆಗಳಿಗೆ ಸ್ಪಂದಿಸಿದ ಉಪ ಕುಲಪತಿಗಳಾದ ಡಾ.ವಿದ್ಯಾಶಂಕರ್ ಎಸ್ ರವರು, ವಿದ್ಯಾರ್ಥಿಗಳಿಗೆ ಮಾಡಿದ ವಾಯ್ದೆಯಂತೆ, ಕಾಲೇಜಿಗೆ ಬೇಟಿ ನೀಡಿ ಸಂಪೂರ್ಣ ದಿನ ಕಾಲೇಜಿನಲ್ಲಿಯೇ ಇದ್ದು, ವಿದ್ಯಾರ್ಥಿ ಮುಖಂಡರೊಂದಿಗೆ, ಅಧ್ಯಾಪಕರೊಂದಿಗೆ ಸಂವಾದ ನಡೆಸಿದರು ಮತ್ತು ಶುಲ್ಕ ಇಳಿಸುವುದರ ಜೊತೆಗೆ, ಹೊಸ ಹಾಸ್ಟೆಲ್ ಗೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಆದೇಶಿಸಿದರು ಹಾಗೂ ಅನೇಕ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬೇಡಿಕೆಯನ್ನು ಈಡೇರಿಸಿದರು.
ಇಲ್ಲಿಯವರೆಗೂ ಹಿಂದಿನ ಕುಲಪತಿಗಳು, ದಾವಣಗೆರೆಗೆ ಬಂದರೂ ಕಾಲೇಜಿಗೆ ಬೇಟಿ ನೀಡುತ್ತಿರಲಿಲ್ಲಾ, ಬಂದರೂ ಕೇವಲ ನೆಪ ಮಾತ್ರಕ್ಕೆ ಕಾಲೇಜಿಗೆ ಬೇಟಿ ನೀಡಿ ಯಾವುದೇ ಸಮಸ್ಯೆಗಳನ್ನು ಆಲಿಸುತ್ತಿರಲಿಲ್ಲಾ. ಆದರೆ ಹಾಲಿ ಕುಲಪತಿಗಳ ಈ ಕಾರ್ಯದಿಂದ ವಿದ್ಯಾರ್ಥಿಗಳಿಗೆ ಭರವಸೆ ಮೂಡಿದೆ ಮತ್ತು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
ಇದೇ ರೀತಿಯಾಗಿ ದಾವಣಗೆರೆ ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿನ ಕಾಲೇಜುಗಳಲ್ಲಿ, ಡಿಪ್ಲೋಮಾ ಕಮರ್ಶಿಯಲ್ ಪ್ರಾಕ್ಟಿಸ್ ಕೋರ್ಸ್ ಮಾಡಿದಂತಹ ವಿದ್ಯಾರ್ಥಿಗಳಿಗೆ ನೇರವಾಗಿ ಬಿ.ಎ, ಬಿ.ಕಾಂ ಪದವಿ ಗಳಲ್ಲಿನ 2 ನೇ ವರ್ಷಕ್ಕೆ ನೇರ ಪ್ರವೇಶಕ್ಕೆ ಈ ಹಿಂದಿನ ಶೈಕ್ಷಣಿಕ ವರ್ಷಕ್ಕೆ ಅನುಮತಿ ನೀಡಿದ್ದರೂ, ಪ್ರಸ್ತುತ ಅನುಮತಿಯನ್ನ ಹೊಸ ಶಿಕ್ಷಣ ನೀತಿಯಲ್ಲಿನ ತಾಂತ್ರಿಕ ಕಾರಣದಿಂದಾಗಿ, ಅನುಮತಿಯನ್ನು ನಿರಾಕರಿಸಲಾಗಿತ್ತು, ಇದರಿಂದ ನಮ್ಮ ಜಿಲ್ಲೆಯ ವಿದ್ಯಾರ್ಥಿಗಳೊಂದಿಗೆ, ಇತರೆ ಜಿಲ್ಲೆಗಳಿಂದ ದಾವಣಗೆರೆಗೆ ಪದವಿ ಮಾಡಲು ಬರುವ ವಿದ್ಯಾರ್ಥಿಗಳೂ ಆತಂತಕಕ್ಕೆ ಒಳಗಾಗಿದ್ದರು.
ಈ ಕುರಿತು ದಾವಣಗೆರೆ ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾದ ಡಾ.ಬಿ.ಡಿ ಕುಂಬಾರ್ ರವರಿಗೆ ಹಾಗು ಸಿಂಡಿಕೇಟ್ ಸದಸ್ಯರಾದ ಶ್ರೀಮತಿ ವಿಜಯಲಕ್ಷ್ಮಿ ಯವರಿಗೆ ಮನವಿ ಮಾಡಿದ ನಂತರ ಇವರೊಂದಿಗೆ, ಮಾನ್ಯ ಉಪ ಕುಲಪತಿಗಳು ನಮ್ಮ ಮನವಿಗೆ ಸ್ಪಂದಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅನುಮತಿಯನ್ನು ನೀಡಿದರು. ಇದರಿಂದಾ ನೂರಾರು ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅವಕಾಶ ಸಿಕ್ಕಂತಾಗಿದೆ, ಈ ಕುರಿತು ವಿದ್ಯಾರ್ಥಿಗಳು ಹಾಗೂ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳ ಕಷ್ಟಕ್ಕೆ ಸ್ಪಂದಿಸಿ ಬೇಡಿಕೆಯನ್ನು ಈಡೇರಿಸಿದ ವಿ.ಟಿ.ಯು ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾದ ಡಾ.ವಿದ್ಯಾಶಂಕರ್ ಎಸ್ ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾದ ಡಾ.ಬಿ.ಡಿ ಕುಂಬಾರ್ ರವರಿಗೆ ಹಾಗೂ ಅತಿ ಮುಖ್ಯವಾಗಿ ನಮ್ಮ ಹೋರಾಟಕ್ಕೆ ಅಪಾರ ಬೆಂಬಲ ನೀಡಿ ಬೆನ್ನೆಲುಬಾಗಿ ನಿಂತ ಎಲ್ಲಾ ಮಾಧ್ಯಮ ಮಿತ್ರರಿಗೂ ಧನ್ಯವಾದಗಳು ಅರ್ಪಿಸುತ್ತಿದ್ದೇನೆ. ಇಂತಹ ಆಡಳಿತ ಅಧಿಕಾರಿಗಳು ಈ ಎರಡೂ ವಿ.ವಿ ಗೆ ಸಿಕ್ಕಿರುವುದು ವಿದ್ಯಾರ್ಥಿಗಳ ಹೊಸ ಆಶಾ ಭಾವನೆ ಮೂಡಿಸಿದೆ.,
ಪವನ್ ರೇವಣಕರ್
ನಗರಾಧ್ಯಕ್ಷ, ಎಬಿವಿಪಿ.
9731102542