ಡಿಸಿಬಿ ಬ್ಯಾಂಕ್‌ಗೆ ಪರಿಹಾರ ನೀಡಲು ಗ್ರಾಹಕ ನ್ಯಾಯಾಲಯ ಆದೇಶ

Consumer Court orders relief to DCB Bank

ದಾವಣಗೆರೆ: ಉಳಿತಾಯ ಖಾತೆಯಲ್ಲಿ ಸಮರ್ಪಕ ಹಣವಿದ್ದರೂ ಚೆಕ್ ಬೌನ್ಸ್ ಆಗಿದೆ ಎಂದು ದಂಡ ವಿಧಿಸಿದ ಕಾರಣಕ್ಕಾಗಿ ನಗರದ ಡಿಸಿಬಿ ಬ್ಯಾಂಕ್ ಪರಿಹಾರ ನೀಡಬೇಕೆಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. ಸುಬ್ರಮಣ್ಯ ನಗರದ ಎಲ್.ಒ. ಮಂಜುನಾಥ್ ಅವರು ಡಿಸಿಬಿ ಬ್ಯಾಂಕ್ನಲ್ಲಿ ಉಳಿತಾಯ ಖಾತೆ ಹೊಂದಿದ್ದರು. ಅವರು ದಿನಾಂಕ 30.09.2020ರಂದು ಇಂಡಸ್ ಇಂಡ್ ಬ್ಯಾಂಕ್‌ಗೆ 11,220 ರೂ.ಗಳಿಗೆ ಚೆಕ್ ನೀಡಿದ್ದರು. 3.10.2020ರಂದು ಚೆಕ್ ಕ್ಲಿಯರ್ ಆಗಿತ್ತು. ಆದರೂ, ಸಮರ್ಪಕ ಹಣವಿಲ್ಲ ಎಂಬ ಕಾರಣಕ್ಕಾಗಿ ಚೆಕ್ ಬೌನ್ಸ್ ಆಗಿದೆ ಎಂದು ಹೇಳಿ 1,390 ರೂ.ಗಳ ಶುಲ್ಕ ವಿಧಿಸಲಾಗಿತ್ತು. ನಂತರ ಮಂಜುನಾಥ್ ಅವರು ಡಿಸಿಬಿ ಬ್ಯಾಂಕ್‌ಗೆ ದೂರು ಸಲ್ಲಿಸಿದ್ದರು. ಈ ಬಗ್ಗೆ ಉತ್ತರಿಸಿದ್ದ ಬ್ಯಾಂಕ್, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 3,500 ರೂ.ಗಳ ಒಂದು ಹಂತದ ಪರಿಹಾರ ಸೇರಿದಂತೆ 4ಸಾವಿರದ 900 ರೂ. ನೀಡಿರುವುದಾಗಿ ತಿಳಿಸಿತ್ತು. ಇದನ್ನು ಒಪ್ಪದ ಮಂಜುನಾಥ್, ಸೇವೆಯ ಕೊರತೆಗಾಗಿ 50 ಸಾವಿರ ರೂ.ಹಾಗೂ ತಮ್ಮ ಪ್ರತಿಷ್ಠೆಗೆ ಧಕ್ಕೆ ತಂದಿರುವುದಾಗಿ 2 ಲಕ್ಷ ರೂ.ಗಳ ದಂಡ ವಿಧಿಸಬೇಕು ಎಂದು ಆಯೋಗದ ಮೊರೆ ಹೋಗಿದ್ದರು. ಅರ್ಜಿದಾರರಿಗೆ ಆದ ಸೇವಾ ಕೊರತೆ ಹಾಗೂ ಮಾನಸಿಕ ನೋವಿಗಾಗಿ 5,000 ರೂ.ಗಳ ದಂಡ ವಿಧಿಸಬೇಕು. ಮೊಕದ್ದಮೆ ಶುಲ್ಕ 5,000 ರೂ. ನೀಡಬೇಕು. ಈ ಹಣ ಪಾವತಿ ವಿಳಂಬವಾದರೆ ಬಡ್ಡಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!