ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಮಿಕ ಮುಖಂಡ ಉಮೇಶ್.

ದಾವಣಗೆರೆ: ಕಾರ್ಮಿಕರ ಪರವಾದ ಹೋರಾಟಗಳಲ್ಲಿ ಸದಾ ಮುಂದೆ ಇರುತ್ತಿದ್ದ ಹೆಚ್.ಕೆ.ರಾಮಚಂದ್ರಪ್ಪ ಇಂದು ನಮ್ಮೊಂದಿಗಿಲ್ಲ. ಆದರೆ ಅವರಂತೆ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿರುತ್ತಿರುವ ಕಾರ್ಮಿಕ ಮುಖಂಡ ಹೆಚ್.ಜಿ.ಉಮೇಶ್ ಎಂದು ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಎಂ.ನಾಗೇAದ್ರಪ್ಪ ಹೇಳಿದರು.
ವಿನೋಬಾ ನಗರದ ಶ್ರೀಮಡಿವಾಳ ಮಾಚಿದೇವ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಇದೇ ತಿಂಗಳ ೧೯ರಂದು ದೇವಸ್ಥಾನದಲ್ಲಿ ನಡೆಯುವ ಕಾರ್ತಿಕೋತ್ಸವದ ಸಮಯದಲ್ಲಿ ಉಮೇಶ್ ಅವರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರೆ, ಅವರು ಆ ದಿನಾಂಕದAದು ಕೇರಳ ರಾಜ್ಯದಲ್ಲಿ ನಡೆಯುತ್ತಿರುವ ಎಐಟಿಯುಸಿ ರಾಷ್ಟಿçÃಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವ ಕಾರಣ ಇಂದು ಸರಳವಾಗಿ ಸನ್ಮಾನಿಸಲಾಗಿದೆ ಎಂದರು.
ಮಡಿವಾಳ ಸಮುದಾಯದಲ್ಲಿ ಹುಟ್ಟಿ ಆಟೋಚಾಲಕ, ಬಸ್ಚಾಲಕನಾಗಿ, ಗ್ರಾಮಪಂಚಾಯತಿ ಸದಸ್ಯ, ಅಧ್ಯಕ್ಷ ಸ್ಥಾನಕ್ಕೆ ಏರಿ, ನಂತರ ಮಹಾನಗರ ಪಾಲಿಕೆ ಸದಸ್ಯನಾಗಿ ಸೇವೆ ಸಲ್ಲಿಸಿದ್ದಾರೆ. ಇದಲ್ಲದೇ ಕಾರ್ಮಿಕರ ಕ್ಷೇತ್ರದಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡು ತಾಲೂಕು ಮಟ್ಟದಿಂದ ವಿವಿಧ ಹುದ್ದೆಗಳನ್ನು ಅಲಂಕರಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರಾಜಾಧ್ಯಕ್ಷನಾಗಿ ಇದೀಗ ಎಐಟಿಯುಸಿ ರಾಷ್ಟಿçÃಯ ಉಪಾಧ್ಯಕ್ಷರಾಗಿ ಆಯ್ಕೆ ಆಗಿರುವುದು ನಮ್ಮ ಸಮಾಜಕ್ಕೆ ಹೆಮ್ಮಯ ವಿಷಯ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹೆಚ್.ಜಿ.ಉಮೇಶ್, ತಾವು ಬೆಳದು ಬಂದ ಹಾದಿಯನ್ನು ಸ್ಮರಿಸಿದರು. ಈ ವೇಳೆ ಜಿಲ್ಲಾ ಸಂಘದ ಕಾರ್ಯಾಧ್ಯಕ್ಷ ಓಂಕಾರಪ್ಪ, ಎಂ.ಎನ್.ನಾಗರಜ್, ಎನ್.ಆರ್.ಧನಂಜಯ, ಬೊಮ್ಮಣ್ಣ, ಡೈಮಂಡ್ ಮಂಜಣ್ಣ, ಎನ್.ರುದ್ರೇಶ್, ವಿಜಯಕುಮಾರ್, ವೇಣು, ರವಿ ಚಿಕ್ಕಣ್ಣ, ಪಿ.ಮಂಜುನಾಥ್ ಇತರರು ಇದ್ದರು.