ಅಡಕೆ, ಭತ್ತಕ್ಕೆ ಕುತ್ತು ತಂದ ಮಾಂಡೂಸ್ ಚಂಡಮಾರುತ.

Cyclone Mandus damaged groundnut and paddy.

ದಾವಣಗೆರೆ : ಕಳೆದ ಮೂರು ನಾಲ್ಕು ದಿನಗಳಿಂದ ಮಾಂಡೂಸ್ ಚಂಡಮಾರುತದ ಪ್ರಭಾವದಿಂದ ಜಿಲ್ಲಾದ್ಯಂತ ಶೀತ ಉಂಟಾಗಿದ್ದುಘಿ, ತುಂತರು ಮಳೆ ಸುರಿಯುತ್ತಿದೆ. ಇದು ಕೊಯ್ಲು ಮಾಡಿದ ಅಡಕೆ ಬೆಳೆಗಾರರ ಮೇಲೆ ಪರಿಣಾಮ ಬೀರುತ್ತಿದೆ. ಕಳೆದ ಕೆಲ ದಿನಗಳಿಂದ ಕ್ವಿಂಟಾಲ್‌ಗೆ 16 ಸಾವಿರ ರೂ. ಅಡಕೆ ಇಳಿಕೆ ಆಗಿ ರೈತರು ಆತಂಕಕ್ಕೆ ಸಿಲುಕಿದ್ದಾರೆ. ಈ ನಡುವೆ ಕೊಯ್ಲು ಮಾಡಿದ ಅಡಕೆಯನ್ನು ಒಣಗಿಸಲು ಆಗುತ್ತಿಲ್ಲಘಿ. ಹಸಿ ಅಡಕೆಯಾದ ಕಾರಣ ಒಣಗಿಸದೇ ಹೋದರೆ ಟೊಳ್ಳಾಗುತ್ತದೆ. ಇನ್ನೊಂದೆಡೆ ಮಳೆ ಹೆಚ್ಚಾದ ಕಾರಣ ತೋಟದಲ್ಲಿನ ಅಡಕೆಗೆ ಕೊಳೆರೋಗ, ಹೊಂಬಾಳೆ ರೋಗ ಸೇರಿದಂತೆ ಇನ್ನಿತರರ ರೋಗ ಕಾಣಿಸಿಕೊಂಡಿದೆ. ಇದು ರೈತರ ಮೇಲೆ ಬರೆ ಬೀಳುವಂತಾಗಿದೆ. ಪರಿಣಾಮ ಅನ್ನದಾತ ಹಾಗೂ ಖೇಣಿದಾರ ಸಾಲ ತೀರಿಸಲು ಹೆಣಗಾಡಬೇಕಾದ ಸ್ಥಿತಿ ಎದುರಾಗಿದೆ. ಕಳೆದ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಲಾಗಿದ್ದ ಮೆಕ್ಕೆಜೋಳ ಈಗಾಗಲೇ ಸಂಪೂರ್ಣ ಹಾಳಾಗಿದ್ದುಘಿ, ಅಡಕೆಗೆ ಇದ್ದ ಬೆಲೆಯೂ ಇಲ್ಲವಾಗುತ್ತಿದೆ. ಇನ್ನು ಎಲ್ಲ ತಾಲೂಕುಗಳಲ್ಲಿಯೂ ಮಳೆ, ಚಳಿ, ಗಾಳಿ ಇರುವ ಕಾರಣ ಬೇಸಾಯಗಾರರಲ್ಲಿ ನಡುಕ ಹುಟ್ಟಿಸಿದೆ.


ನ್ಯಾಮತಿ ತಾಲೂಕಿನ ಸವಳಂಗ , ಕುರುವ , ಗೋವಿನಕೋವಿ , ಕೋರಚಗೊಂಡನಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಭತ್ತ ಕೊಯ್ಲಿಗೆ ಈಗಾಗಲೇ ಬಂದಿದ್ದು, ಮಾಂಡೂಸ್ ಚಂಡಮಾರುತದ ಪ್ರಭಾವದ ಅಕಾಲಿಕ ಮಳೆಯು ತಾಲೂಕಿನ ಬೆಳೆಗಾರರ ನೆಮ್ಮದಿ ಕಸಿದಿದೆ. ಕಟಾವಿಗೆ ಸಿದ್ಧವಾಗಿರುವ ಹಂತದಲ್ಲಿ ಮಳೆಯಾಗುತ್ತಿರುವುದು ಇಳುವರಿ ಕುಸಿಯುವ ಆತಂಕವನ್ನು ತಂದಿತ್ತಿದೆ ಎನ್ನುತ್ತಿದ್ದಾರೆ ರೈತರು.ರೈತರು ವರ್ಷಕ್ಕೆ ಒಂದು ಬಾರಿ ಸಾಂಪ್ರದಾಯಿಕ ಬೆಳೆ ಭತ್ತ ಹಾಗೂ ಹಿಂಗಾರು ಹಂಗಾಮಿನಲ್ಲಿ ದ್ವಿದಳ ಧಾನ್ಯ ಬೆಳೆಗಳನ್ನು ಬೆಳೆಯುತ್ತಿದ್ದರು. ಈ ಬಾರಿ ಅತಿಯಾದ ವರುಣನ ಅಬ್ಬರಕ್ಕೆ ಒಂದು ತಿಂಗಳು ತಡವಾಗಿ ಕೃಷಿ ಪ್ರಕ್ರಿಯೆಗಳು ಪ್ರಾರಂಭವಾಯಿತು. ಪ್ರವಾಹ ಮತ್ತು ಮಳೆಯೂ ಕಾಡಿದ್ದರಿಂದ ಸಾಗುವಳಿಗೆ ಕೊಂಚ ಹಿನ್ನಡೆಯೂ ಆಯಿತು. ಈಗ ಕೊಯ್ಲಿಗೆ ಬಂದಿರುವ ಬೆಳೆಯನ್ನು ಕಟಾವು ಮಾಡಲು ಯಂತ್ರಗಳು ಸಜ್ಜಾಗಿ ನಿಂತಿದೆ. ಮಾಂಡೂಸ್ ಅಬ್ಬರಕ್ಕೆ ತಾಪಮಾನ ಕುಸಿದು, ಶೀತಗಾಳಿಯೂ ಸೇರಿ ತಾಲೂಕಿನಾದ್ಯಂತ ಮಳೆಯಾಗಿ ಕೆಲಸ ಕಾರ್ಯ ಸ್ಥಗಿತಗೊಳಿಸಲಾಗಿದೆ.
ಕಾಳು ಕಪ್ಪಾಗುವ ಭಯ ಃ ಮಳೆಗೆ ಭತ್ತದ ಕಾಳು ಕಪ್ಪಾಗುತ್ತಿದೆ. ಹುಲ್ಲು ಸಹ ಒಣಗದೆ ಕೊಳೆಯುತ್ತದೆ. ಹೀಗೆಯೇ ಆದರೆ, ಮುಂದಿನ ದಿನಗಳಲ್ಲಿ ಜಾನುವಾರುಗಳಿಗೂ ಮೇವಿನ ಕೊರತೆ ಕಾಡಲಿದೆ. ಮಳೆ ಹೆಚ್ಚು ದಿನ ಮುಂದುವರಿದರೆ ರೋಗವೂ ಆವರಿಸಬಹುದು. ಭತ್ತ ಜೊಳ್ಳಾಗಬಹುದು. ಬಿಸಿಲು ಇಲ್ಲದಿದ್ದರೆ ಸಾಗಣೆ ಸಮಸ್ಯೆ ಹಾಗೂ ಯಂತ್ರಗಳ ಸಂಚಾರಕ್ಕೂ ಹಿನ್ನಡೆಯಾಗಲಿದೆ. ಎರಡು ಮೂರು ದಿನಗಳಲ್ಲಿ ದಿನಗಳಲ್ಲಿ ಮೋಡ ಸರಿದು, ಹವೆ ತಿಳಿಯಾಗದಿದ್ದರೆ ಭತ್ತದ ಬೆಳೆಗೆ ಹಾನಿಯಾಗಬಹುದು’ ಎಂದು ಕುರುವ ಗ್ರಾಮದ ರೈತ ಸುರೇಶ್ ನವುಲೇ ಆತಂಕ ವ್ಯಕ್ತಪಡಿಸಿದರು.


ತುಂತುರು ಮಳೆಯಿಂದ ಜಿಲ್ಲಾದ್ಯಂತ ಜನಜೀವನ ಅಸ್ತವ್ಯಸ್ಥಗೊಂಡಿದೆ. ಸೂರ್ಯ ಭೂಮಿಯತ್ತ ಇಣುಕಿಲ್ಲ. ಮೋಡ ಕವಿದು, ಚಳಿ ಗಾಳಿ ಬೀಸುತ್ತಿದೆ. ಬಂಗಾಳ ಕೊಲ್ಲಿಗೆ ಮಾಂಡೂಸ್’ ಅಪ್ಪಳಿಸಿರುವುದರಿಂದ ಬಯಲುಸೀಮೆ ಮಲೆನಾಡಿನಂತಾಗಿದೆ.ಹೆಚ್ಚಿನ ಜನರು ತಮ್ಮ ಕೆಲಸ ಕಾರ್ಯ ಸ್ಥಗಿತಗೊಳಿಸಿ ಮನೆಯಲ್ಲೇ ಉಳಿದರು. ಬೆಳಗ್ಗೆ ಪೋಷಕರು ಮಕ್ಕಳನ್ನು ಕೊಡೆ ಹಿಡಿದು ಶಾಲೆಗೆ ಕರೆದೊಯ್ಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಪಟ್ಟಣದಲ್ಲಿ ಜನರ ಓಡಾಟ ಸಹ ಕಡಿಮೆ ಇತ್ತು. ಮಾರುಕಟ್ಟೆಯಲ್ಲಿ ವ್ಯಾಪಾರ ಬಿರುಸಿನಿಂದ ಇರಲಿಲ್ಲ. ಜಡಿಮಳೆಯಿಂದ ಸಾರ್ವಜನಿಕರು ಹಾಗೂ ವ್ಯಾಪಾರಿಗಳು ದಿನವಿಡೀ ಸಮಸ್ಯೆ ಎದುರಿಸಿದರು.
ಮುಂಗಾರಿನ ಸಮಯದಲ್ಲೂ ಮಳೆ ಸುರಿದು ಬೆಳೆ ಹಾನಿಯಾಗಿ ತಾಲೂಕಿನ ರೈತರು ನಷ್ಟ ಅನುಭವಿಸಿದ್ದಾರೆ. ಈಗ ಹಿಂಗಾರಿನಲ್ಲೂ ಮಳೆ ಬಂದು ರಾಗಿ, ಟೊಮೆಟೊ, ಸೊಪ್ಪು, ಅವರೆಕಾಳು ಬೆಳೆದವರಿಗೆ ನಷ್ಟ ತಂದೊಡ್ಡಿದೆ. ರಾಗಿ , ಭತ್ತ , ಆಡಿಕೆ ಕಟಾವಿಗೆ ತೊಂದರೆ ಉಂಟಾಗಿದೆ.
ಶೀತ ಹವೆಯಿಂದಾಗಿ ಮಂಗಳವಾರ ಮುಂಜಾನೆ ಚಳಿ ಜೋರಾಗಿತ್ತು. ಜನರು ಮನೆಯಿಂದ ಹೊರಗಡೆ ಬರಲು ಹಿಂಜರಿದರು. ಮೋಡ ಮುಸುಕಿದ್ದರಿಂದ ಇಡೀ ದಿನ ಮಳೆಗಾಲದಲ್ಲಿ ಮಲೆನಾಡಿನಲ್ಲಿರುವ ವಾತಾವರಣ ಇತ್ತು. ಇನ್ನು ದಿನವಿಡೀ ಬಿಟ್ಟು ಬಿಟ್ಟು ಮಳೆ ಬಂದು ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿದ್ದುಘಿ, ಶಾಲಾ ಕಾಲೇಜು ಬಿಡುವ ಹೊತ್ತಿಗೆ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಒಟ್ಟಾರೆ ಈ ಬಾರಿ ಮಳೆ ಅನಾಹುತದಿಂದ ರೈತ ಕಣ್ಣೀರಿಡುತ್ತಿದ್ದಾನೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!