ಮುರುಘಾ ಮಠದಿಂದ ಉಚಿತ ಮಜ್ಜಿಗೆ ವಿತರಣೆ: ಮುರುಘಾ ಶ್ರೀಗಳಿಂದ ಚಾಲನೆ.

IMG-20210401-WA0043

ಚಿತ್ರದುರ್ಗ: ಮುರುಘಾಮಠವು ಸದಾ ಒಂದಿಲ್ಲೊಂದು ಪ್ರಯೋಗಮುಖಿ ಕಾರ್ಯಗಳನ್ನು ಮಾಡುತ್ತದೆ. ಸಮಾಜೋಪಯೋಗಿ ಕಾರ್ಯಗಳಿಗೆ ಶ್ರೀಮಠವು ಯಾವತ್ತು ಮುಂದೆ ಇರುತ್ತದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

ಪ್ರತಿ ವರ್ಷದಂತೆ ಶ್ರೀಮಠದಿಂದ ಬೇಸಿಗೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಚಿತ ಮಜ್ಜಿಗೆ ವಿತರಣಾ ಕೇಂದ್ರವನ್ನು ನಗರದ ಎಸ್ ಜೆಎಂ ಡೆಂಟಲ್ ಕಾಲೇಜು ಆವರಣದಲ್ಲಿ ಗುರುವಾರ ಪ್ರಾರಂಭಿಸಿ ಮಾತನಾಡಿದರು.

ದಿನೇದಿನೇ ತಾಪಮಾನ ಹೆಚ್ಚುತ್ತಿರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೇಂದ್ರವನ್ನು ತೆರೆಯಲಾಗಿದೆ. ಮಜ್ಜಿಗೆ ವಿತರಣೆ ಕಾರ್ಯವು 2 ತಿಂಗಳು ನಡೆಯುತ್ತದೆ. ಪ್ರತಿ ವರ್ಷ ದಾನಿಗಳು ಮಜ್ಜಿಗೆ ವಿತರಿಸಲು ಹಲವರು ನಾ ಮುಂದು ತಾ ಮುಂದು ಎಂದು ಬರುತ್ತಾರೆ. ಅಲ್ಲದೆ ದಾನಿಗಳು ಮಠಕ್ಕೆ ಮೊಸರನ್ನ ಕೂಡ ನೀಡುತ್ತಾರೆ.ಇಂಥಹ ಕಾರ್ಯಗಳಿಗೆ ಜನ ಸಹಕರಿಸುತ್ತಾರೆ. ಪ್ರಾಕೃತಿಕವಾದ ಅಸಮತೋಲನದಿಂದಾಗಿ ಮಧ್ಯಕರ್ನಾಟಕ ಅದರಲ್ಲು ಚಿತ್ರದುರ್ಗ, ತುಮಕೂರು ಕೋಲಾರ ಮೊದಲಾದ ಜಿಲ್ಲೆಗಳು ಶಾಶ್ವತ ಬರಗಾಲಕ್ಕೆ ತುತ್ತಾಗಿವೆ. ಇವುಗಳಿಗೆ ನೀರಾವರಿ ಯೋಜನೆ ಬರಬೇಕು. ಹೊಲಗದ್ದೆಗಳನ್ನು ತಣಿಸಬೇಕು. ತನ್ಮೂಲಕ ಜನರ ಬದುಕನ್ನು ಹಸನುಗೊಳಿಸಬೇಕು ಎಂದು ಹೇಳಿದರು.

ಮಠಾಧೀಶರು, ರೈತರು ಮತ್ತು ಮಾಧ್ಯಮದವರ ಪ್ರಯತ್ನ ಹಾಗು ಹೋರಾಟದ ಫಲವಾಗಿ ರಾಜ್ಯಸರ್ಕಾರ ಕೇಂದ್ರಸರ್ಕಾರಕ್ಕೆ ಭದ್ರಾ ಮೇಲ್ಡಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿದ್ದು, 16 ಸಾವಿರ ಕೋಟಿ ಬಿಡುಗಡೆ ಮಾಡಿರುವುದು ನಮ್ಮೆಲ್ಲರಿಗೆ ಸಂತಸವಾಗಿದ್ದು, ರಾಜ್ಯ ಮತ್ತು ಕೇಂದ್ರಸರ್ಕಾರಗಳಿಗೆ ಅಭಿನಂದನೆ ಸಲ್ಲಿಸುತ್ತೇವೆ .

ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು

ಶ್ರೀ ಬಸವ ಮಾಚಿದೇವ ಸ್ವಾಮಿಜಿಗಳು, ಶ್ರೀ ಬಸವ ಕುಂಬಾರ ತಿಪ್ಪೇಸ್ವಾಮಿ ಸ್ವಾಮಿಗಳು, ಎಸ್‍ಜೆಎಂ ದಂತ ಮಹಾವಿದ್ಯ್ಞಾಲಯ, ಡಾ| ಗೌರಮ್ಮ, ಸಹನಾ ಮಾತೃಶ್ರೀ ಸಂಸ್ಥೆ, ಎಸ್.ಜೆ.ಎಂ. ಬ್ಯಾಂಕ್, ವಿಜಿಎಸ್ ಅಲ್ಯೂಮಿನಿಯಂ ರಾಜಣ್ಣ, ಡಾ.ಪಾಲಾಕ್ಷಯ್ಯ, ಬೃಹನ್ಮಠ ಪ್ರೌಢಶಾಲೆ, ಡಾ.ಕೆ. ರಮೇಶ್, ಎಸ್.ಜೆ.ಎಂ. ಕಾಲೇಜು, ಹೆಚ್.ಕೆ. ಶಿವಪ್ಪ, ಬಿ.ಎಂ. ಜಗದೀಶ್, ಚೇತನ್‍ಕುಮಾರ್, ಬಸವಕುಮಾರ್, ಶ್ರೀಮತಿ ಜ್ಯೋತಿ, ರಮೇಶರೆಡ್ಡಿ, ಪ್ರಿಯದರ್ಶಿನಿ ಬಾಲಕಿಯರ ಪ್ರೌಢಶಾಲೆ, ವಾರ್ಡನ್ ತಿಪ್ಪಶೆಟ್ಟಿ ಮಠ ಪ್ರಸಾದ ನಿಲಯ, ವಿಶ್ವಕರ್ಮ ಸಮಾಜದ ಮುಖಂಡ ಶಂಕರಾಚಾರ್, ಉಪ್ಪಾರ ಸಮಾಜದ ಮುಖಂಡರಾದ ತಿಪ್ಪೇಸ್ವಾಮಿ ಮತ್ತು ಆರ್. ಮೂರ್ತಿ, ಚೇತನ್ ಶ್ರೀರಂಗ ಗ್ರಾನೈಟ್ಸ್, ಸುರೇಶ್ ನಗರಸಭೆ ಸದಸ್ಯರು, ಬಸವೇಶ್ವರ ಮೆಡಿಕಲ್ ಕಾಲೇಜು, ಕಣಿವೆ ಮಾರಮ್ಮ ಸೇವಾ ಸಮಿತಿ, ಬಸವೇಶ್ವರ ಆಸ್ಪತ್ರೆ, ಎಸ್.ಜೆ.ಎಂ. ಮಹಿಳಾ ಮಹಾವಿದ್ಯಾಲಯ, ಕಾಂಗ್ರೆಸ್ ಮುಖಂಡ ಹನುಮಲಿ ಷಣ್ಮುಖಪ್ಪ, ಬೃಹನ್ಮಠ ಪ್ರೌಢಶಾಲೆ, ಪಂಚಮಸಾಲಿ ಸಮಾಜದ ಮಹಿಳಾ ಘಟಕ ಇವರು ಪ್ರತಿದಿನ ಮಜ್ಜಿಗೆ ದಾಸೋಹ ನಡೆಸುವರು.

ಶ್ರೀ ದೇನಾ ಭಾಗವತ್ ಗುರೂಜಿ, ಶ್ರೀ ಬಸವ ಮಾಚಿದೇವ ಸ್ವಾಮಿಗಳು, ಶ್ರೀ ಬಸವ ನಾಗಿದೇವ ಸ್ವಾಮಿಗಳು, ಶ್ರೀ ಬಸವ ಕುಂಬಾರ ತಿಪ್ಪೇಸ್ವಾಮಿ ಸ್ವಾಮಿಗಳು, ಹನುಮಲಿ ಷಣ್ಮುಖಪ್ಪ, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಎಸ್.ಜೆ.ಎಂ. ವಿದ್ಯಾಸಂಸ್ಥೆಗಳ ಮುಖ್ಯಸ್ಥರು, ನಗರಸಭೆ ಸದಸ್ಯ ಸುರೇಶ್, ಯಾದವ ಸಮಾಜದ ಮೀಸೆ ಮಹಲಿಂಗಪ್ಪ, ಉಪ್ಪಾರ ಸಮಾಜದ ಮೂರ್ತಿ, ವಿಶ್ವಕರ್ಮ ಸಮಾಜದ ಎ.ಶಂಕರಾಚಾರ್, ಕಣಿವೆ ಮಾರಮ್ಮ ತಿಪ್ಪೇಸ್ವಾಮಿ, ಪಿಂಜಾರ ಸಮಾಜದ ದಾದಾಪೀರ್, ಬಂಜಾರ ಸಮಾಜದ ರಾಜಾನಾಯ್ಕ, ಸವಿತಾ ಸಮಾಜದ ಶ್ರೀನಿವಾಸ್, ಹಾಲಪ್ಪನಾಯಕ, ಶ್ರೀಮತಿ ರೀನಾ ವೀರಭದ್ರಪ್ಪ, ಮಹಿಳಾ ಸಂಘಟನೆ ಪದಾಧಿಕಾರಿಗಳು, ಬಸವ ಸೇನೆ ಪದಾಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!